ಭಾರತದಲ್ಲಿನ ಪ್ಯಾಲೆಸ್ಟೈನ್ ನ ರಾಯಭಾರಿ ಅಬ್ದುಲ್ಲಾ ಅಬು ಶಾವೇಶ್ ಅವರ ಹೇಳಿಕೆ

ನವದೆಹಲಿ – ಭಾರತದಲ್ಲಿನ ಪ್ಯಾಲೆಸ್ಟೈನ್ ರಾಯಭಾರಿ ಅಬ್ದುಲ್ಲಾ ಅಬು ಶಾವೇಶ್ ಅವರು ಮಾತನಾಡಿ, “ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅರೇಬಿಕ್, ಇಂಗ್ಲಿಷ್ ಮತ್ತು ಹೀಬ್ರೂ ಎಂಬ ಮೂರು ಭಾಷೆಗಳಲ್ಲಿ ಸಂದೇಶ ನೀಡುವ ಮೂಲಕ, ಭಾರತವು ಪ್ಯಾಲೆಸ್ಟೈನ್ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದನ್ನು ತೋರಿಸಿದ್ದಾರೆ. ಪ್ಯಾಲೆಸ್ಟೈನ್ ಗೆ ಮಾನ್ಯತೆ ನೀಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಭಾರತ ನಿನ್ನೆ ನಮ್ಮೊಂದಿಗೆ ಇತ್ತು, ಇಂದು ಇದೆ ಮತ್ತು ನಾಳೆಯೂ ಇರುತ್ತದೆ. ವಿಶ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಪಾತ್ರವು ಅತ್ಯಂತ ಮಹತ್ವದ್ದಾಗಿದೆ,” ಎಂದು ಹೇಳಿದರು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ನಿಲ್ಲಿಸುವ ಕುರಿತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 20 ಅಂಶಗಳ ಸೂತ್ರವನ್ನು ಮಂಡಿಸಿದ ಬಗ್ಗೆ ಪ್ರತಿಕ್ರಿಯಿಸುವಾಗ ಶಾವೇಶ್ ಅವರು ಮಾತನಾಡುತ್ತಿದ್ದರು. ಅವರು ಭಾರತ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ಯಾಲೆಸ್ಟೈನ್ಗೆ ನೀಡಿದ ಸಹಾಯವನ್ನು ಶ್ಲಾಘಿಸಿದರು.
ಭಾರತದಿಂದ ನಿರೀಕ್ಷೆ!
ರಾಯಭಾರಿ ಶಾವೇಶ್ ಅವರು ಮಾತನಾಡಿ, “ಭಾರತದ ಧ್ವನಿಯನ್ನು ಇಡೀ ಜಗತ್ತು ಕೇಳುತ್ತದೆ. ಯಾವಾಗ ಭಾರತ ನಮ್ಮೊಂದಿಗೆ ನಿಲ್ಲುವುದೂ, ಆಗ ಅದರ ಸಂದೇಶವು ಇಡೀ ಮಧ್ಯ-ಪ್ರಾಚ್ಯಕ್ಕೆ ತಲುಪುತ್ತದೆ. ಭಾರತ ಭವಿಷ್ಯದಲ್ಲಿಯೂ ಶಾಂತಿ ಪ್ರಕ್ರಿಯೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂದು ನಾವು ನಂಬುತ್ತೇವೆ,” ಎಂದು ಹೇಳಿದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine