|

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ 27 ಮದರಸಾಗಳಲ್ಲಿ ಹಿಂದೂ ಮಕ್ಕಳ ಕಾನೂನುಬಾಹಿರ ಮತಾಂತರ ನಡೆಯುತ್ತಿದೆ. 556 ಹಿಂದೂ ಮಕ್ಕಳನ್ನು ಇಸ್ಲಾಂ ಸ್ವೀಕರಿಸಲು ಗುರಿಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಳಿ ದೂರು ನೀಡಲಾಗಿದೆ. ಆಯೋಗವು ಈ ಪ್ರಕರಣವನ್ನು ಪರಿಗಣಿಸಿ ಶಿಕ್ಷಣ ವಿಭಾಗದ ಪ್ರಮುಖ ಕಾರ್ಯದರ್ಶಿಗಳಿಂದ 15 ದಿನಗಳ ಒಳಗೆ ಉತ್ತರ ಕೇಳಿದೆ. ಹಾಗೆಯೇ ಈ ಸಂಬಂಧ ದೂರು ದಾಖಲಿಸುವ ಬೇಡಿಕೆಯನ್ನೂ ಮಾಡಲಾಗಿದೆ.
🚨 556 Hindu children being taught Quran in 27 Madrasas of MP@India_NHRC member @KanoongoPriyank issues notice to Edu Dept after a complaint of illegal conversions.
Demand for criminal cases & probe into foreign funding. Govt grants to madrasas must STOP 🚫#SaveHinduChildren pic.twitter.com/FKXUuluJav
— Sanatan Prabhat (@SanatanPrabhat) October 1, 2025
ಈ ದೂರಿನಲ್ಲಿ, ಮೊರೈನಾ, ಇಸ್ಲಾಮಪುರಾ, ಜೌರಾ ಮತ್ತು ಇತರ ಭಾಗಗಳ ಈ ಮದರಸಾಗಳು ‘ಕಿಶೋರ್ ನ್ಯಾಯ ಅಧಿನಿಯಮ 2015′ ರ ಉಲ್ಲಂಘನೆ ಮಾಡುತ್ತಿವೆ ಎಂದು ಹೇಳಲಾಗಿದೆ. ಆಯೋಗವು ಈ ಪತ್ರದಲ್ಲಿ ಮದರಸಾಗಳು ಶಿಕ್ಷಣದ ಹಕ್ಕು ಕಾನೂನಿನ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಹಿಂದೂ ಮಕ್ಕಳಿಗೆ ಪ್ರವೇಶ ಏಕೆ ನೀಡಲಾಗುತ್ತಿದೆ? ಹಾಗೆಯೇ ಈ ಮದರಸಾಗಳ ಮೇಲೆ ಕಾನೂನುಬಾಹಿರ ವಿದೇಶಿ ನಿಧಿ ಪಡೆಯುವ ಮತ್ತು ರಾಷ್ಟ್ರವಿರೋಧಿ ಅಂಶಗಳ ಜೊತೆ ಸಂಬಂಧ ಇರುವ ಗಂಭೀರ ಆರೋಪ ಮಾಡಲಾಗಿದೆ.
ಮದರಸಾಗಳು ಶಿಕ್ಷಣ ಕೇಂದ್ರ ಇಲ್ಲದ ಕಾರಣ ರಾಜ್ಯ ಸರಕಾರಗಳು ಮದರಸಾಗಳಿಗೆ ನೀಡಲಾಗುವ ಅನುದಾನಗಳನ್ನು ತಕ್ಷಣ ನಿಲ್ಲಿಸಬೇಕು!
ಆಯೋಗದ ಸದಸ್ಯ ಪ್ರಿಯಂಕ ಕಾನೂನಿಗೋ ಅವರು, ಮದರಸಾಗಳು ಶಿಕ್ಷಣ ಕೇಂದ್ರಗಳಾಗಿರದೇ ಧಾರ್ಮಿಕ ಸಂಪ್ರದಾಯಗಳನ್ನು ಕಲಿಸುವ ಸ್ಥಳಗಳಾಗಿವೆ. ಹಿಂದೂ ಮಕ್ಕಳಿಗೆ ಕುರಾನ್ ಕಲಿಸುವ ಸಮಸ್ಯೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ರಾಜ್ಯ ಸರಕಾರಗಳು ಮದರಸಾಗಳಿಗೆ ನೀಡಲಾಗುವ ಅನುದಾನಗಳನ್ನು ತಕ್ಷಣ ನಿಲ್ಲಿಸಬೇಕು; ಏಕೆಂದರೆ ಅದು ಸರಕಾರದ ಕೆಲಸ ಅಲ್ಲ. ಆಯೋಗವು ಈಗ ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಿದ್ಧತೆಯಲ್ಲಿದೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ