ಯಾವ ಮಸೀದಿಯಿಂದ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಯಿತೋ ಆ ಮಸೀದಿ ಅಕ್ರಮ ನಿರ್ಮಾಣ : Ganesh Idol Immersion Mandya

ಮದ್ದೂರು ಇಲ್ಲಿನ ಸ್ಥಳೀಯರ ದಾವೆ

ಮಂಗಳೂರು – ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವದ ಮೆರವಣಿಗೆಯ ಸಮಯದಲ್ಲಿ ಯಾವ ಮಸೀದಿಯಿಂದ ಕಲ್ಲು ತೂರಾಟ ನಡೆಸಲಾಗಿತ್ತೋ, ಅದರ ನಿರ್ಮಾಣವು ಕಾನೂನುಬಾಹಿರ ಎಂದು ಬಹಿರಂಗವಾಗಿದೆ. ಮದ್ದೂರಿನ ಚನ್ನೆಗೌಡ ಎಂಬಲ್ಲಿರುವ ಈ ಮಸೀದಿಯ ಕುರಿತು ಸ್ಥಳೀಯ ಜನರು ಜಿಲ್ಲಾಧಿಕಾರಿಗಳಿಗೆ, ಹಾಗೆಯೇ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ದೂರು ನೀಡಿದ್ದರು.

ಮಸೀದಿಯ ಮುಂದೆ ದೇವರ ಉತ್ಸವ, ಮೆರವಣಿಗೆಗಳ ಮೇಲೆ ನಿಷೇಧ!

ಈ ಮಸೀದಿಯ ಮುಂದೆ ಹಿಂದೂಗಳ ಮೆರವಣಿಗೆ ಹಾದುಹೋಗಬಾರದು ಎಂದು ನಿರ್ಬಂಧಗಳನ್ನು ಹೇರಲಾಗಿದೆ. ಇದಷ್ಟೇ ಅಲ್ಲದೆ, ಹಿಂದೂಗಳ ಅಂತ್ಯಯಾತ್ರೆಯ ಸಮಯದಲ್ಲಿಯೂ ತಮಟೆ ಬಾರಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ. (ಹಾಗಾದರೆ, ಮದ್ದೂರು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ? ಹಿಂದೂಗಳು ಈಗ ಇದನ್ನು ನ್ಯಾಯಾಯುತವಾಗಿ ಹೋರಾಡಬೇಕು! – ಸಂಪಾದಕರು)

ಮಸೀದಿಯಲ್ಲಿ ದೇಶದ್ರೋಹಿ ಚಟುವಟಿಕೆಗಳು: ಸ್ಥಳೀಯರ ಆರೋಪ!

ಸ್ಥಳೀಯರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ದೂರಿನಲ್ಲಿ, ಮಸೀದಿಯಲ್ಲಿ ಮದರಸಾ ನಡೆಸಲಾಗುತ್ತಿದೆ ಮತ್ತು ದೇಶದ್ರೋಹಿ ಚಟುವಟಿಕೆಗಳು ಸಹ ನಡೆಯುತ್ತಿವೆ ಎಂದು ಹೇಳಿದ್ದಾರೆ. ರಾತ್ರಿಯ ಸಮಯದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ತಿರುಗಾಡುತ್ತಾರೆ ಮತ್ತು ಇಲ್ಲಿ ಕಾನೂನುಬಾಹಿರ ಆರ್ಥಿಕ ವ್ಯವಹಾರಗಳು ಸಹ ನಡೆಯುತ್ತಿವೆ. ಈ ಮಸೀದಿಯು ಜೂನ್ 2025ರಲ್ಲಿ ಉದ್ಘಾಟನೆಗೊಂಡಿತ್ತು. ಮಸೀದಿಯ ನಿರ್ಮಾಣದ ಸಮಯದಲ್ಲಿ, ಸ್ಥಳೀಯ ಜನರು ಈ ನಿರ್ಮಾಣವು ಕಾನೂನುಬಾಹಿರವಾಗಿ ನಡೆಯುತ್ತಿದೆ ಎಂದು ಆಡಳಿತಕ್ಕೆ ತಿಳಿಸಿದ್ದರು. ಹೀಗಿದ್ದರೂ ಮಸೀದಿಯ ನಿರ್ಮಾಣವು ಪೂರ್ಣಗೊಂಡಿದೆ ಮತ್ತು ಈಗ ಅಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಈ ದಾವೆಯಲ್ಲಿ ಸತ್ಯಾಂಶವಿದ್ದರೆ, ಸ್ಥಳೀಯ ಆಡಳಿತಾಧಿಕಾರಿಗಳು, ಹಾಗೆಯೇ ಪೊಲೀಸರು ಸಹ ವಿಸರ್ಜನಾ ಮೆರವಣಿಗೆಯ ಮೇಲಿನ ಆಕ್ರಮಣಕ್ಕೆ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು!