ಮದ್ದೂರು ಇಲ್ಲಿನ ಸ್ಥಳೀಯರ ದಾವೆ

ಮಂಗಳೂರು – ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವದ ಮೆರವಣಿಗೆಯ ಸಮಯದಲ್ಲಿ ಯಾವ ಮಸೀದಿಯಿಂದ ಕಲ್ಲು ತೂರಾಟ ನಡೆಸಲಾಗಿತ್ತೋ, ಅದರ ನಿರ್ಮಾಣವು ಕಾನೂನುಬಾಹಿರ ಎಂದು ಬಹಿರಂಗವಾಗಿದೆ. ಮದ್ದೂರಿನ ಚನ್ನೆಗೌಡ ಎಂಬಲ್ಲಿರುವ ಈ ಮಸೀದಿಯ ಕುರಿತು ಸ್ಥಳೀಯ ಜನರು ಜಿಲ್ಲಾಧಿಕಾರಿಗಳಿಗೆ, ಹಾಗೆಯೇ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ದೂರು ನೀಡಿದ್ದರು.
🚨 Maddur, Karnataka | Locals claim the mosque from which stones were hurled at Ganesh visarjan procession is illegal!
👉 If true, why are admin & police shielding it? Strictest action must follow.
Shockingly, Hindu processions & even funeral drums are being restricted near… https://t.co/s464Hcy4Yf pic.twitter.com/q445VoMPtH
— Sanatan Prabhat (@SanatanPrabhat) September 11, 2025
ಮಸೀದಿಯ ಮುಂದೆ ದೇವರ ಉತ್ಸವ, ಮೆರವಣಿಗೆಗಳ ಮೇಲೆ ನಿಷೇಧ!
ಈ ಮಸೀದಿಯ ಮುಂದೆ ಹಿಂದೂಗಳ ಮೆರವಣಿಗೆ ಹಾದುಹೋಗಬಾರದು ಎಂದು ನಿರ್ಬಂಧಗಳನ್ನು ಹೇರಲಾಗಿದೆ. ಇದಷ್ಟೇ ಅಲ್ಲದೆ, ಹಿಂದೂಗಳ ಅಂತ್ಯಯಾತ್ರೆಯ ಸಮಯದಲ್ಲಿಯೂ ತಮಟೆ ಬಾರಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ. (ಹಾಗಾದರೆ, ಮದ್ದೂರು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ? ಹಿಂದೂಗಳು ಈಗ ಇದನ್ನು ನ್ಯಾಯಾಯುತವಾಗಿ ಹೋರಾಡಬೇಕು! – ಸಂಪಾದಕರು)
ಮಸೀದಿಯಲ್ಲಿ ದೇಶದ್ರೋಹಿ ಚಟುವಟಿಕೆಗಳು: ಸ್ಥಳೀಯರ ಆರೋಪ!
ಸ್ಥಳೀಯರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ದೂರಿನಲ್ಲಿ, ಮಸೀದಿಯಲ್ಲಿ ಮದರಸಾ ನಡೆಸಲಾಗುತ್ತಿದೆ ಮತ್ತು ದೇಶದ್ರೋಹಿ ಚಟುವಟಿಕೆಗಳು ಸಹ ನಡೆಯುತ್ತಿವೆ ಎಂದು ಹೇಳಿದ್ದಾರೆ. ರಾತ್ರಿಯ ಸಮಯದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ತಿರುಗಾಡುತ್ತಾರೆ ಮತ್ತು ಇಲ್ಲಿ ಕಾನೂನುಬಾಹಿರ ಆರ್ಥಿಕ ವ್ಯವಹಾರಗಳು ಸಹ ನಡೆಯುತ್ತಿವೆ. ಈ ಮಸೀದಿಯು ಜೂನ್ 2025ರಲ್ಲಿ ಉದ್ಘಾಟನೆಗೊಂಡಿತ್ತು. ಮಸೀದಿಯ ನಿರ್ಮಾಣದ ಸಮಯದಲ್ಲಿ, ಸ್ಥಳೀಯ ಜನರು ಈ ನಿರ್ಮಾಣವು ಕಾನೂನುಬಾಹಿರವಾಗಿ ನಡೆಯುತ್ತಿದೆ ಎಂದು ಆಡಳಿತಕ್ಕೆ ತಿಳಿಸಿದ್ದರು. ಹೀಗಿದ್ದರೂ ಮಸೀದಿಯ ನಿರ್ಮಾಣವು ಪೂರ್ಣಗೊಂಡಿದೆ ಮತ್ತು ಈಗ ಅಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸಂಪಾದಕೀಯ ನಿಲುವುಈ ದಾವೆಯಲ್ಲಿ ಸತ್ಯಾಂಶವಿದ್ದರೆ, ಸ್ಥಳೀಯ ಆಡಳಿತಾಧಿಕಾರಿಗಳು, ಹಾಗೆಯೇ ಪೊಲೀಸರು ಸಹ ವಿಸರ್ಜನಾ ಮೆರವಣಿಗೆಯ ಮೇಲಿನ ಆಕ್ರಮಣಕ್ಕೆ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು! |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ