‘ದಿ ಬಂಗಾಲ್ ಫೈಲ್ಸ್’ ಚಿತ್ರದ ‘ಟ್ರೈಲರ್’ ಅನ್ನು ಪ್ರಸಾರ ಮಾಡದಂತೆ ಏಕಾಏಕಿ ನಿಷೇಧ; ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಂದ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ವಾಗ್ದಾಳಿ!
(‘ಟ್ರೈಲರ್’ ಎಂದರೆ ಚಿತ್ರದ ಜಾಹೀರಾತು ಮಾಡುವ ವಿಡಿಯೋ)

ಕೋಲಕಾತಾ – ಬಿಡುಗಡೆಯ ಹಾದಿಯಲ್ಲಿರುವ ‘ದ ಬಂಗಾಲ್ ಫೈಲ್ಸ್’ ಚಿತ್ರದ ‘ಟ್ರೈಲರ್’ ಅನ್ನು ಪ್ರಸಾರ ಮಾಡದಂತೆ ಏಕಾಏಕಿ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಥುನ್ ಅವರು ಸರಕಾರವನ್ನು ಉದ್ದೇಶಿಸಿ ಮಾತನಾಡಿ, ‘ಸರಕಾರವು ಟ್ರೈಲರ್ ನೋಡದಿದ್ದರೆ ನಿಷೇಧ ಹೇಗೆ ಹೇರಲು ಸಾಧ್ಯ?’. “ಈ ಚಿತ್ರವು ಸತ್ಯವನ್ನು ಹೇಳುತ್ತದೆ ಮತ್ತು ಆಘಾತಕಾರಿಯಾಗಿದೆ. ಸತ್ಯ ಹೊರಬರುವುದೆಂದು ಸರಕಾರಕ್ಕೆ ಭಯವಿದೆ, ಆದರೆ ಸತ್ಯವನ್ನು ಎಷ್ಟು ದಿನ ತಡೆಯಲು ಸಾಧ್ಯ?” ಎಂದು ಅವರು ಹೇಳಿದರು. ಚಿತ್ರದ ನಿರ್ಮಾಪಕಿ ಮತ್ತು ನಟಿ ಪಲ್ಲವಿ ಜೋಶಿ ಕೂಡ ಈ ‘ಟ್ರೈಲರ್’ ಪ್ರದರ್ಶನವನ್ನು ನಿಷೇಧಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಸರಕಾರವನ್ನು ದೂಷಿಸಿದ್ದಾರೆ.
🔥 Mithun Chakraborty slams Mamata Govt 🔥
“How can you ban a film trailer without even watching it?” – Veteran actor Mithun slams the Trinamool regime over blocking #TheBengalFiles trailer.
🎬 Releasing Sept 5, the film uncovers the horrific 1946 Calcutta killings & Noakhali… pic.twitter.com/Z6rI59uzJr
— Sanatan Prabhat (@SanatanPrabhat) September 3, 2025
‘ದಿ ಬಂಗಾಲ್ ಫೈಲ್ಸ್’ ಚಿತ್ರದಲ್ಲಿ ಏನಿದೆ?
‘ದಿ ಬಂಗಾಲ್ ಫೈಲ್ಸ್’ ಚಿತ್ರವು ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು 1946 ರಲ್ಲಿ ನಡೆದ ಕೋಲಕಾತಾ ಹತ್ಯಾಕಾಂಡ ಮತ್ತು ನೊವಾಖಾಲಿ ಗಲಭೆಗಳನ್ನು ಆಧರಿಸಿದೆ. ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಅವರು ಹುಚ್ಚನ, ಆದರೆ ಸತ್ಯವನ್ನು ಮಾತನಾಡುವ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
🎬 “If Kashmir Hurt You, Bengal will Haunt You”@vivekagnihotri’s #TheBengalFiles, releasing Sept 5, exposes the horrific 1946 Bengal Hindu massacres: Direct Action Day, Noakhali riots & more.
⚠️ In just 72 hours in Kolkata, 6,000 Hindus were killed, 20,000 injured & 1 lakh… pic.twitter.com/ruoX8yOJhc
— Sanatan Prabhat (@SanatanPrabhat) September 3, 2025
ಸಂಪಾದಕೀಯ ನಿಲುವುತೃಣಮೂಲ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!