ಇಂದಿನಿಂದ ಭಾರತದ ಮೇಲೆ ಶೇ. 50ರಷ್ಟು ಆಮದು ಸುಂಕ ವಿಧಿಸಲು ಅಮೆರಿಕದಿಂದ ನೋಟಿಸ್ ಜಾರಿ : Trump Tariff

ರಷ್ಯಾದಿಂದ ಅಮೆರಿಕಕ್ಕೆ ಬಂದ ಬೆದರಿಕೆಗಳಿಗೆ ಪ್ರತ್ಯುತ್ತರ ನೀಡಲು ಭಾರತದ ಮೇಲೆ ಆಮದು ಸುಂಕ ಹೇರಿಕೆ ! – ಅಮೆರಿಕ

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ (ಅಮೆರಿಕ) – ಅಮೆರಿಕಾವು ಭಾರತಕ್ಕೆ ನೋಟಿಸ್ ಜಾರಿ ಮಾಡಿದ್ದು, ಅದರಲ್ಲಿ ಆಗಸ್ಟ್ 27 ರಿಂದ ಹೆಚ್ಚುವರಿ ಆಮದು ಸುಂಕಗಳನ್ನು ವಿಧಿಸಲಾಗುವುದು ಎಂದು ಹೇಳಿದೆ. ಈ ನೋಟಿಸ್ ಅನ್ನು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗವು ನೀಡಿದ್ದು, ರಷ್ಯಾದ ಸರಕಾರದಿಂದ ಅಮೆರಿಕಕ್ಕೆ ಬಂದ ಬೆದರಿಕೆಗಳಿಗೆ ಪ್ರತ್ಯುತ್ತರಕ್ಕೆ ಈ ಸುಂಕವನ್ನು ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದರ ಅಡಿಯಲ್ಲಿ ಭಾರತವು ಹೊಸ ಸುಂಕಗಳನ್ನು ಎದುರಿಸಬೇಕಾಗುತ್ತದೆ. (ಅಮೆರಿಕದ ತಜ್ಞರು ಮತ್ತು ಟ್ರಂಪ್ ಪಕ್ಷದ ನಾಯಕರು ಸಹ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಇಷ್ಟಾದರೂ ಟ್ರಂಪ್ ತಮ್ಮ ಹಟಮಾರಿತನದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ, ಹಾಗಾಗಿ ಅದರ ಫಲಿತಾಂಶವನ್ನು ಅವರು ಎದುರಿಸಬೇಕಾಗುತ್ತದೆ! – ಸಂಪಾದಕರು)

ನೋಟಿಸ್‌ನಲ್ಲಿ, ಆಗಸ್ಟ್ 27, 2025 ರಂದು ಮಧ್ಯಾಹ್ನ 12:01 ರ ನಂತರ ಅಮೆರಿಕದಲ್ಲಿ ಬಳಸಲು ತಂದ ಅಥವಾ ಗೋದಾಮಿನಿಂದ ಹೊರತೆಗೆಯಲಾದ ಭಾರತೀಯ ಉತ್ಪನ್ನಗಳ ಮೇಲೆ ಈ ಸುಂಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ರಷ್ಯಾದಿಂದ ಬರುವ ಕೆಲವು ವಸ್ತುಗಳ ಆಮದನ್ನು ಈಗಾಗಲೇ ನಿಷೇಧಿಸಲಾಗಿದೆ. ಇದರಲ್ಲಿ ಕಚ್ಚಾ ತೈಲ, ಪೆಟ್ರೋಲಿಯಂ ಮತ್ತು ಇತರ ಇಂಧನಗಳು, ತೈಲ ಮತ್ತು ಅವುಗಳ ಉತ್ಪನ್ನಗಳು ಸೇರಿವೆ.

ಸಂಪಾದಕೀಯ ನಿಲುವು

  • ಟ್ರಂಪ್ ಅವರಿಗಿಂತ ಮೊದಲು ಬೈಡನ್ ಸರಕಾರ ಅಧಿಕಾರದಲ್ಲಿದ್ದಾಗ ಅಮೆರಿಕ ರಷ್ಯಾದಿಂದ ತೈಲ ಖರೀದಿಸುವುದನ್ನು ವಿರೋಧಿಸಲಿಲ್ಲ; ಆದರೆ ಈಗ ಟ್ರಂಪ್ ವೈಯಕ್ತಿಕ ದ್ವೇಷದಿಂದ ಉದ್ದೇಶಪೂರ್ವಕವಾಗಿ ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಪರಿಣಾಮವನ್ನು ಅಮೆರಿಕ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ನೆನಪಿಟ್ಟುಕೊಳ್ಳಬೇಕು!
  • ಅಮೆರಿಕಾ ವಿದೇಶಾಂಗ ಮತ್ತು ರಕ್ಷಣಾ ನೀತಿಗಳಲ್ಲಿ ವ್ಯಾಪಾರವನ್ನು ಸೇರಿಸುವ ಮೂಲಕ ಭಾರತಕ್ಕೆ ಯಾವುದಾದರೂ ಒಂದು ಬದಿಯನ್ನು ಆಯ್ಕೆ ಮಾಡಲು ಒತ್ತಡ ಹೇರುತ್ತಿದೆ. ಭಾರತವು ಎಂದಿಗೂ ಯಾವುದೇ ಜಾಗತಿಕ ಸಂಘರ್ಷದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿಲ್ಲ. ಹಾಗೆ ಮಾಡುವ ಮೂಲಕ ಭಾರತ ಆರ್ಥಿಕವಾಗಿ ಸದೃಢವಾಗುತ್ತಿರುವುದನ್ನು ಅಮೆರಿಕ ಸಹಿಸಲಾಗದೆ ಈ ನಡೆ ಅನುಸರಿಸಿದೆ ಎಂಬುದನ್ನು ಗಮನಿಸಬೇಕಾಗಿದೆ!

 

ಎಷ್ಟೇ ಆರ್ಥಿಕ ಒತ್ತಡ ಬಂದರೂ, ನಾವು ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ! – ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಈ ಪೂರ್ವನಿರ್ಧರಿತ ಆಮದು ಸುಂಕ ಹೆಚ್ಚಳಕ್ಕೆ ಆಗಸ್ಟ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ಣಾವತಿಯಿಂದ ಪ್ರತ್ಯುತ್ತರ ನೀಡಿದರು. ಅವರು, ಭಾರತವು ಆರ್ಥಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ ಮತ್ತು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತದೆ. ಅಲ್ಲದೆ, ಸರಕಾರವು ಎಂದಿಗೂ ಸಣ್ಣ ಉದ್ಯಮಿಗಳು, ರೈತರು ಮತ್ತು ಪಶುಪಾಲಕರಿಗೆ ಹಾನಿ ಮಾಡುವುದಿಲ್ಲ ಎಂದು ಹೇಳಿದರು.

ಅವರು ಮಾತು ಮುಂದುವರೆಸಿ, ಇಂದು ಜಗತ್ತಿನಲ್ಲಿ ಆರ್ಥಿಕ ಸ್ವಾರ್ಥದ ರಾಜಕೀಯವಿದೆ. ಪ್ರತಿಯೊಬ್ಬರೂ ತಮ್ಮ ಲಾಭಕ್ಕಾಗಿ ತೊಡಗಿಸಿಕೊಂಡಿದ್ದಾರೆ. ನಾವು ಇದನ್ನು ಬಹಳ ಚೆನ್ನಾಗಿ ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಭಾರತವು ಪ್ರತ್ಯುತ ನೀಡುವ ಸಾಮರ್ಥ್ಯವನ್ನೂ ನಿರ್ಮಿಸಲು ಪ್ರಯತ್ನಿಸಬೇಕು!