ಧರ್ಮಸ್ಥಳದ ಘನತೆಯನ್ನು ಕಲುಶೀತಗೊಳಿಸಲು ಉದ್ದೇಶಪೂರ್ವಕವಾಗಿ ರೂಪಿಸಿದ್ದ ಪಿತೂರಿ ! – Chakravarti Sulibele

  • ಕಟ್ಟರ ಹಿಂದುತ್ವನಿಷ್ಠ ಶ್ರೀ. ಚಕ್ರವರ್ತಿ ಸೂಲಿಬೆಲೆಯವರ ಗಂಭೀರ ಆರೋಪ

  • ಬೆಂಗಳೂರಿನಲ್ಲಿ ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯ ವತಿಯಿಂದ ‘ಧರ್ಮ ಸಂರಕ್ಷಣಾ  ಸಮ್ಮೇಳನ’ದ ಆಯೋಜನೆ!

  • ಹಿಂದೂ ಜನಜಾಗೃತಿ ಸಮಿತಿಯ ಸಕ್ರಿಯ ಸಹಭಾಗ !

ಚಕ್ರವರ್ತಿ ಸೂಲಿಬೆಲೆ, ‘ಯೂತ್ ಬ್ರಿಗೇಡ್’ ಸಂಘಟನೆಯ ಅಧ್ಯಕ್ಷರು

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾದ ಧರ್ಮಸಂರಕ್ಷಣಾ ಸಮಾವೇಶದಲ್ಲಿ ಕೋಟ್ಯಂತರ ಹಿಂದೂಗಳ ಶ್ರದ್ದಾ ಸ್ಥಾನವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಪೂಜ್ಯ ಶ್ರೀ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಂಘಟಿತವಾಗಿ ಷಡ್ಯಂತ್ರ ರೂಪಿಸಿ ಮಸಿ ಬಳಿಯುವ ಕಾರ್ಯಆಗುತ್ತಿದೆ ಎಂದು ಯುವ ಬ್ರಿಗೇಡ್ ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದರು.

ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಉಪಸ್ಥಿತರಿರುವ ಹಿಂದೂಪರ ನಾಯಕರು ಮತ್ತು ಹಿಂದೂಗಳು

ಈ ಸಂಧರ್ಭದಲ್ಲಿ ಚಿಂತಕರಾದ ಶ್ರೀ. ವಸಂತ ಗಿಳಿಯಾರ್, ಹರಿ ಹರ ಮಠದ ಪೀಠಧಿಪತಿಗಳಾದ ಶ್ರೀ. ವಚನಾನಂದ ಸ್ವಾಮೀಜಿ, ಶ್ರೀ ಭಾನುಕೀರ್ತಿ ಭಟ್ಟಚಾರ್ಯ ಮಹಾಸ್ವಾಮಿಗಳು, ಜೈನ ಮಠ, ಶ್ರವಣಬೆಳಗೊಳ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ, ಸೌ. ಭವ್ಯ ಗೌಡ, ಶ್ರೀ. ಶರತ್ ಕುಮಾರ್ ಸೇರಿದಂತೆ ಸಾವಿರಾರು ಧರ್ಮಬಂಧು – ಭಗೀನಿಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಘೋಷಣೆಗಳನ್ನು ಕೂಗುತ್ತಿರುವ ಹಿಂದುತ್ವ ಭಕ್ತರು

ಈ ಸಮಾವೇಶದಲ್ಲಿ ಚಿಂತಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿ ನೂರಾರು ವರ್ಷಗಳಿಂದ ನಮ್ಮ ಸನಾತನ ಹಿಂದೂ ಧರ್ಮವನ್ನು ನಾಶಪಡಿಸಲು ಹಲವು ದುಷ್ಟ ಶಕ್ತಿಗಳು ಪ್ರಯತ್ನ ಪಟ್ಟಿವೆ ಅದು ಸಾಧ್ಯವಾಗಲಿಲ್ಲ ಅದಕ್ಕೆ ಕಾರಣ ನಮ್ಮ ಜನರಿಗೆ ಧರ್ಮದ ಮೇಲಿನ ಆಳವಾದ ನಂಬಿಕೆ, ಅದಕ್ಕೆ ಕಾರಣ ನಮ್ಮ ದೇವಾಲಯಗಳು. ಈ ನಮ್ಮ ಶ್ರದ್ದಾಸ್ಥಾನ ದೇವಾಲಯಗಳ ನಾಶಕ್ಕೆ ಇಂದು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಇದಕ್ಕೆಲ್ಲ ಉತ್ತರವೆಂದರೆ ನಾವು ಹಿಂದೂಗಳು ಸಂಘಟಿತರಾಗಿ ಈ ಷಡ್ಯಂತ್ರದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಕರೆಕೊಟ್ಟರು.