
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ರಂಗಪುರ ಜಿಲ್ಲೆಯ ತಾರಾಗಂಜ ಉಪಜಿಲ್ಲೆಯ ಬುರಿರಹಾಟ್ ಹೈಸ್ಕೂಲ್ ಆವರಣದಲ್ಲಿ ಕಳ್ಳತನದ ಸಂಶಯದ ಮೇಲೆ 2 ಹಿಂದೂಗಳಿಗೆ ಥಳಿಸಿ ಹತ್ಯೆ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಮೃತಪಟ್ಟವರು ಘನಿರಾಮಪುರದ ರೂಪಲಾಲ್ ದಾಸ್ (40 ವರ್ಷ) ಮತ್ತು ಮಿಠಾಪುಕೂರ್ ಉಪಜಿಲ್ಲೆಯ ಪ್ರದೀಪ ದಾಸ್ (35 ವರ್ಷ) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಒಂದೇ ಕುಟುಂಬಕ್ಕೆ ಸೇರಿದವರು. ಈ ಪ್ರಕರಣದಲ್ಲಿ ಪೊಲೀಸರು ಇಬಾದತ್ ಹುಸೇನ್, ಅಖ್ತರುಲ್ ಇಸ್ಲಾಂ, ರಫೀಕುಲ್ ಇಸ್ಲಾಂ ಮತ್ತು ಮಿಜಾನೂರ್ ರೆಹಮಾನ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಪೊಲೀಸರು ಜನಸಮೂಹ ಕಂಡು ಓಡಿಹೋದರು!
‘ಢಾಕಾ ಟ್ರಿಬ್ಯೂನ್’ ವರದಿಯ ಪ್ರಕಾರ, ಪೊಲೀಸರು ಸ್ಥಳಕ್ಕೆ ತಲುಪಿದ್ದರು, ಆದರೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇಷ್ಟೆ ಅಲ್ಲ, ಅವರು ಭಯಭೀತರಾಗಿ ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಸೇನಾ ವಾಹನಗಳು ಸ್ಥಳಕ್ಕೆ ಬಂದಾಗ, ರೂಪಲಾಲ್ ದಾಸ್ ಆಗಲೇ ಮೃತಪಟ್ಟಿದ್ದರು ಮತ್ತು ಥಳಿಸಿದವರಲ್ಲಿ ಹೆಚ್ಚಿನವರು ಪರಾರಿಯಾಗಿದ್ದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಲು ಮತಾಂಧರು ಅವರ ಮೇಲೆ ಯಾವುದೇ ಸುಳ್ಳು ಕಾರಣಗಳನ್ನು ಹೇಳಿ ದಾಳಿ ಮಾಡುತ್ತಾರೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !