ಟ್ರಂಪ್ ಶೇ. 50% ರಷ್ಟು ಆಮದು ಸುಂಕ; ಭಾರತದ ಪ್ರತಿಕ್ರಿಯೆ

ನವದೆಹಲಿ – ಅಮೇರಿಕಾ ಭಾರತದ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸಲು ನಿರ್ಧರಿಸಿರುವುದು ಅತ್ಯಂತ ದುರದೃಷ್ಟಕರ. ಈ ನಡೆ ಅನ್ಯಾಯ ಮತ್ತು ಅನಾವಶ್ಯಕ ಎಂದು ನಾವು ಮತ್ತೊಮ್ಮೆ ಹೇಳುತ್ತೇವೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಇತ್ತೀಚೆಗೆ, ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದ್ದನ್ನು ಅಮೇರಿಕಾ ಗುರಿಯಾಗಿಸಿಕೊಂಡಿದೆ. ಈ ವಿಷಯದ ಕುರಿತು ನಾವು ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ, ನಮ್ಮ ಆಮದುಗಳು ಮಾರುಕಟ್ಟೆ ಕಾರಣಗಳನ್ನು ಆಧರಿಸಿವೆ ಎಂದು ನಾವು ಹೇಳಿದ್ದೇವೆ, ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಭಾರತದ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಹೆಚ್ಚುವರಿ ಶೇ. 25% ತೆರಿಗೆ, ಅಂದರೆ ಒಟ್ಟು ಶೇ. 50% ರಷ್ಟು ಆಮದು ಸುಂಕವನ್ನು ವಿಧಿಸಿದ ನಂತರ ಭಾರತ ಈ ಪ್ರತಿಕ್ರಿಯೆ ನೀಡಿದೆ.
Statement by Official Spokesperson⬇️
🔗 https://t.co/BNwLm9YmJc pic.twitter.com/DsvRvhd61D— Randhir Jaiswal (@MEAIndia) August 6, 2025
ಭಾರತ ಯಾರ ಮುಂದೆಯೂ ಬಾಗುವುದಿಲ್ಲ! – ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ
ನೀವು ನಮ್ಮ ರಫ್ತಿನ ಮೇಲೆ ಸುಂಕ ವಿಧಿಸಬಹುದು; ಆದರೆ ನಮ್ಮ ಸಾರ್ವಭೌಮತ್ವದ ಮೇಲೆ ಅಲ್ಲ. ನೀವು ನಿಮ್ಮ ಸುಂಕವನ್ನು ಹೆಚ್ಚಿಸಿ, ನಾವು ನಮ್ಮ ಸಂಕಲ್ಪವನ್ನು ಹೆಚ್ಚಿಸುತ್ತೇವೆ. ನಾವು ಉತ್ತಮ ಪರ್ಯಾಯಗಳನ್ನು ಹುಡುಕುತ್ತೇವೆ ಮತ್ತು ಸ್ವಾವಲಂಬಿಗಳಾಗುತ್ತೇವೆ. ಭಾರತ ಯಾರ ಮುಂದೆಯೂ ಬಾಗುವುದಿಲ್ಲ ಎಂದು ಭಾರತೀಯ ಉದ್ಯಮಿ ಹರ್ಷ್ ಗೋಯೆಂಕಾ ಅಮೇರಿಕಾ ನಡೆಯನ್ನು ಟೀಕಿಸಿದರು.
You can tariff our exports, but not our sovereignty. Raise your tariffs- we’ll raise our resolve, find better alternatives, and build self-reliance. 🇮🇳
India bows to none. pic.twitter.com/XjMHCyXwXr— Harsh Goenka (@hvgoenka) August 6, 2025
ದೇಶವನ್ನು ಇದಕ್ಕಿಂತ ಹೆಚ್ಚು ಸಮರ್ಥ ಮತ್ತು ಪ್ರಗತಿಪರ ಮಾಡಲು ನಾವು ಪ್ರೇರಿತರಾಗಬೇಕು! – ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ
ಉದ್ಯಮಿ ಆನಂದ ಮಹೀಂದ್ರಾ ಕೂಡ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ನಾವು ಸೃಷ್ಟಿಸುವ ಅನಿರೀಕ್ಷಿತ ಪರಿಣಾಮಗಳು ಉದ್ದೇಶಪೂರ್ವಕ ಮತ್ತು ಪರಿವರ್ತಕವಾಗಿರಬೇಕು. ನಮ್ಮ ದೇಶವನ್ನು ಗುರಿಯಾಗಿಸಿದ್ದಕ್ಕಾಗಿ ನಾವು ಇತರರನ್ನು ದೂಷಿಸಲು ಸಾಧ್ಯವಿಲ್ಲ; ಆದರೆ ನಮ್ಮ ದೇಶವನ್ನು ಇದಕ್ಕಿಂತ ಹೆಚ್ಚು ಸಮರ್ಥ ಮತ್ತು ಪ್ರಗತಿಪರ ಮಾಡಲು ಇದರಿಂದ ನಾವು ಪ್ರೇರಿತರಾಗಬೇಕು ಎಂದು ಕರೆ ನೀಡಿದರು.
The ‘law of unintended consequences’ seems to be operating stealthily in the prevailing tariff war unleashed by the U.S.
Two examples:
The EU may appear to have accepted the evolving global tariff regime, responding with its own strategic adjustments. Yet the friction has… pic.twitter.com/D5lRe5OWUa
— anand mahindra (@anandmahindra) August 6, 2025
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation