‘ಚಲನಚಿತ್ರಕ್ಕೆ ಗೌರವ ನೀಡಿರುವುದು, ಕೇರಳದ ಜನರ ಅವಮಾನವಂತೆ!’ – ಕೇರಳದ ಮುಖ್ಯಮಂತ್ರಿ ವಿಜಯನ್

‘ದಿ ಕೇರಳ ಸ್ಟೋರಿ’ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ; ಕಿಡಿಕಾರಿದ ಮುಖ್ಯಮಂತ್ರಿ ವಿಜಯನ್ !

ತಿರುವನಂತಪುರಂ (ಕೇರಳ) – ನಿರ್ದೇಶಕ ಸುದೀಪ್ತೋ ಸೇನ್ ಅವರ ಲವ್ ಜಿಹಾದ್ ಆಧಾರಿತ ‘ಕೇರಳ ಸ್ಟೋರಿ’ ಚಲನಚಿತ್ರಕ್ಕೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಅತ್ಯುತ್ತಮ ನಿರ್ದೇಶಕ’ ಮತ್ತು ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿಗಳು ದೊರೆತಿವೆ. ಇದರಿಂದಾಗಿ ಕೇರಳದ ಹಿಂದೂದ್ವೇಷಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ಎಕ್ಸ್’ನಲ್ಲಿ ಈ ಪ್ರಶಸ್ತಿಯನ್ನು ವಿರೋಧಿಸಿ ‘ಇದು ಭಾರತೀಯ ಚಲನಚಿತ್ರೋದ್ಯಮದ ಮಹಾನ್ ಸಂಪ್ರದಾಯದ ಅವಮಾನ’ ಎಂದು ಹೇಳಿದ್ದಾರೆ. ‘ಕೇರಳ ಸ್ಟೋರಿ’ ಚಲನಚಿತ್ರವು 2023ರಲ್ಲಿ ಬಿಡುಗಡೆಯಾಗಿತ್ತು.

ಅವರು ಮಾತು ಮುಂದುವರೆಸುತ್ತಾ, “ಕೇರಳದ ಪ್ರತಿಷ್ಠೆಯನ್ನು ಹಾಳು ಮಾಡುವುದು ಮತ್ತು ಧಾರ್ಮಿಕ ದ್ವೇಷವನ್ನು ಹರಡುವ ಉದ್ದೇಶದಿಂದ ಇಂತಹ ಸುಳ್ಳು ಕಥೆಯನ್ನು ತೋರಿಸುವ ಚಲನಚಿತ್ರವನ್ನು ಗೌರವಿಸುವುದು ಅತ್ಯಂತ ಚಿಂತೆಯ ವಿಷಯವಾಗಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿಯು ಸಂಘ ಪರಿವಾರದ ಒಡಕಿನ ಸಿದ್ಧಾಂತವನ್ನು ಆಧರಿಸಿದ ಕಥೆಗೆ ಮಾನ್ಯತೆ ನೀಡಿದೆ. ಕೇರಳ ರಾಜ್ಯವು ಯಾವಾಗಲೂ ಸೌಹಾರ್ದತೆ, ಶಾಂತಿ ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾಗಿದೆ. ಈ ಚಲನಚಿತ್ರಕ್ಕೆ ಪ್ರಶಸ್ತಿ ನೀಡಿರುವುದು ಕೇರಳ ಮತ್ತು ಅಲ್ಲಿನ ಜನರಿಗೆ ಮಾಡಿದ ಅವಮಾನ. ಮಲೆಯಾಳಿಗಳು ಮಾತ್ರವಲ್ಲದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ನಂಬುವ ಪ್ರತಿಯೊಬ್ಬರೂ ಈ ಚಲನಚಿತ್ರದ ವಿರುದ್ಧ ಧ್ವನಿ ಎತ್ತಬೇಕು” ಎಂದಿದ್ದಾರೆ.

ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅವರು ಕೂಡ ‘ದ್ವೇಷ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವ ಕೇರಳ ಸ್ಟೋರಿ ಚಲನಚಿತ್ರವನ್ನು ಗೌರವಿಸುವುದು, ಇತರ ಎಲ್ಲ ಪ್ರಶಸ್ತಿಗಳ ಗೌರವವನ್ನು ಮಣ್ಣುಪಾಲು ಮಾಡಿದಂತಾಗಿದೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಲವ್ ಜಿಹಾದ್ ಆಧಾರಿತ ಕೇರಳ ಸ್ಟೋರಿ ಚಲನಚಿತ್ರದಲ್ಲಿ ಕೇರಳದಲ್ಲಿ ಲವ್ ಜಿಹಾದ್‌ ನಿಂದ ಬಳಲುತ್ತಿರುವ ಹಿಂದೂಗಳ ಸ್ಥಿತಿಯನ್ನು ತೋರಿಸಲಾಗಿದೆ. ಹಿಂದೂಗಳ ಈ ಶೋಚನೀಯ ಸ್ಥಿತಿ ವಿಜಯನ್‌ ಅವರಿಗೆ ಕೇರಳದ ಅವಮಾನ ಎಂದು ಅನ್ನಿಸುವುದಿಲ್ಲವೇ?