ಬಾರಾಬಂಕಿ (ಉತ್ತರ ಪ್ರದೇಶ) ಇಲ್ಲಿನ ಔಸನೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಇಬ್ಬರ ಸಾವು

ಬಾರಾಬಂಕಿ (ಉತ್ತರ ಪ್ರದೇಶ) – ಇಲ್ಲಿನ ಔಸನೇಶ್ವರ ಮಹಾದೇವ ದೇವಸ್ಥಾನದಲ್ಲಿ ಜುಲೈ 27ರಂದು ರಾತ್ರಿ 2 ಗಂಟೆಗೆ ಜಲಾಭಿಷೇಕದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ವಿದ್ಯುತ್ ಪ್ರವಾಹ ಹಠಾತ್ತಾಗಿ ಹರಡಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಶಶಾಂಕ ತ್ರಿಪಾಠಿ ಅವರು ಮಾತನಾಡಿ, ಕೆಲವು ಕೋತಿಗಳು ವಿದ್ಯುತ್ ತಂತಿಯ ಮೇಲೆ ಹಾರಿದವು. ಇದರಿಂದ ತಂತಿ ಕಡಿದು ದೇವಸ್ಥಾನದ ಆವರಣದಲ್ಲಿನ ತಗಡಿನ ಛಾವಣಿಯ ಮೇಲೆ ಬಿದ್ದಿದೆ. ಪರಿಣಾಮವಾಗಿ ವಿದ್ಯುತ್ ಪ್ರವಾಹ ಹರಡಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ತಿಳಿಸಿದ್ದಾರೆ.

ಈ ಹಿಂದೆ ಜುಲೈ 27ರಂದು ಉತ್ತರಾಖಂಡದ ಹರಿದ್ವಾರದಲ್ಲಿರುವ ಶ್ರೀ ಮನಸಾದೇವಿ ದೇವಸ್ಥಾನದ ಹೊರಗೆ ವಿದ್ಯುತ್ ಪ್ರವಾಹದ ವದಂತಿ ಹರಡಿದ್ದರಿಂದ ಕಾಲ್ತುಳಿತ ಉಂಟಾಗಿ 8 ಮಂದಿ ಸಾವನ್ನಪ್ಪಿ 30 ಮಂದಿ ಗಾಯಗೊಂಡಿದ್ದರು.