Jaipur Hindu Murder : ಜೈಪುರ (ರಾಜಸ್ಥಾನ)ದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂ ಯುವಕನ ಹತ್ಯೆ

ವಿಡಿಯೋ ಮಾಡಿ ಚಾಕು ತೋರಿಸಿ ಆರೋಪಿ, ‘ಇಂದು ಸೇಡು ಪೂರ್ಣಗೊಂಡಿತು’ ಎಂದು ಬರೆದ

ಆರೋಪಿ ಅನಸ್ ಖಾನ್ ಮತ್ತು ಹತ್ಯೆಯಾದ ಹಿಂದೂ ಯುವಕ ವಿಪಿನ್ ನಾಯಕ್

ಜೈಪುರ (ರಾಜಸ್ಥಾನ) – ಇಲ್ಲಿ ವಿಪಿನ್ ನಾಯಕ್ (ವಯಸ್ಸು 22) ಎಂಬ ಯುವಕನನ್ನು ಅನಸ್ ಖಾನ್ ಎಂಬಾತ ತನ್ನ ಸಹಚರರಾದ ಶಾದಾಬ್ ಮತ್ತು ಅಮನ್ ಖಾನ್ ಅವರ ಸಹಾಯದಿಂದ ಚಾಕುವಿನಿಂದ 14 ಬಾರಿ ಇರಿದು ಹತ್ಯೆ ಮಾಡಿದ್ದಾನೆ. ವಿಶೇಷವೆಂದರೆ, ಹತ್ಯೆ ಮಾಡಿದ ನಂತರ ಅನಸ್ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನದೇ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಅವನು ಚಾಕು ತೋರಿಸಿ, “ಇಂದು ಸೇಡು ಪೂರ್ಣಗೊಂಡಿತು” ಎಂದು ಪೋಸ್ಟ್ ಮಾಡಿದ್ದಾನೆ. ಈ ಘಟನೆ ಜುಲೈ 20 ರ ರಾತ್ರಿ ಪಾಲ್ಡಿ ಮೀನಾ ಕಚ್ಚಿ ಬಸ್ತಿಯಲ್ಲಿ ಸಂಭವಿಸಿದೆ. 3 ಮೋಟರ್‌ಸೈಕಲ್‌ಗಳಲ್ಲಿ 8 ಜನರು ಬಂದಿದ್ದರು. ಅದರಲ್ಲಿ ಅನಸ್ ಖಾನ್, ಶಾದಾಬ್ ಮತ್ತು ಅಮನ್ ಖಾನ್ ಸೇರಿದ್ದರು. ವಿಪಿನ್ ಮತ್ತು ಅನಸ್ ನಡುವೆ ಹಳೆಯ ವಿವಾದವಿತ್ತು. ಕೆಲ ದಿನಗಳ ಹಿಂದೆ ಅವರ ನಡುವೆ ಸಮಾಧಾನವೂ ಆಗಿತ್ತು. ವಿಪಿನ್ ದಿನಸಿ ಅಂಗಡಿ ನಡೆಸುತ್ತಿದ್ದನು ಮತ್ತು ಆ ಪ್ರದೇಶದಲ್ಲಿ ಎಲ್ಲರಿಗೂ ಪರಿಚಿತನಾಗಿದ್ದನು.

ವಿಪಿನ್ ತನ್ನ ಮನೆಯ ಬಳಿ ನಿಂತಿದ್ದಾಗ, ಅನಸ್ ಖಾನ್ ಅವನನ್ನು ಗಲ್ಲಿಗೆ ಕರೆದನು, ಅಲ್ಲಿ ಅವನ ಸಹಚರರು ಈಗಾಗಲೇ ಹೊಂಚು ಹಾಕಿ ಕುಳಿತಿದ್ದರು. ವಿಪಿನ್ ಅಲ್ಲಿಗೆ ಬಂದಾಗ, ಅವನ ಮೇಲೆ ಚಾಕುವಿನಿಂದ ಇರಿಯಲಾಯಿತು. ಈ ಸಮಯದಲ್ಲಿ ವಿಪಿನ್ ಕಿರುಚಿದಾಗ, ಆರೋಪಿಗಳು ಚಾಕು ತೋರಿಸಿ ಸ್ಥಳೀಯರನ್ನು ಓಡಿಸಿದರು. 14 ಬಾರಿ ಇರಿದು ಆರೋಪಿಗಳು ಪರಾರಿಯಾದ ನಂತರ, ಗಾಯಗೊಂಡಿದ್ದ ವಿಪಿನ್‌ನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವನನ್ನು ಮೃತನೆಂದು ಘೋಷಿಸಿದರು.

ಆಕ್ರೋಶಗೊಂಡ ಜನರಿಂದ ಹಿಂಸಾತ್ಮಕ ಪ್ರತಿಭಟನೆ

ಘಟನೆ ನಂತರ ಆಸ್ಪತ್ರೆಯಲ್ಲಿ ದೊಡ್ಡ ಜನಸಮೂಹ ಸೇರಿತು. ಪೊಲೀಸರು ಮತ್ತು ಆಡಳಿತಾಧಿಕಾರಿಗಳು ರಾತ್ರಿಯೇ ಅಲ್ಲಿಗೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಜುಲೈ 21 ರಂದು ಜನರು ಈ ಹತ್ಯೆಯ ವಿರುದ್ಧ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆಹಿಡಿಯಲು ಪ್ರಯತ್ನಿಸಿದರು.

ಈ ಸಮಯದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿ ಜನಸಮೂಹವನ್ನು ಚದುರಿಸಿದರು. ಈ ವೇಳೆ ಜನಸಮೂಹವು ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಿತು. ಸದ್ಯ ಇಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ.

ಸಂಪಾದಕೀಯ ನಿಲುವು

  • ರಾಜಸ್ಥಾನದ ಉದಯಪುರದಲ್ಲಿ ಇದೇ ರೀತಿ ಕನ್ಹಯ್ಯಲಾಲ್ ಅವರ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿತ್ತು ಮತ್ತು ಅದರ ವಿಡಿಯೋ ಮಾಡಿ ಪ್ರಸಾರ ಮಾಡಲಾಗಿತ್ತು. ಮತಾಂಧ ಮುಸಲ್ಮಾನರು ಬಹಿರಂಗವಾಗಿ ಹಿಂದೂಗಳ ಹತ್ಯೆ ಮಾಡಿ ಅದರ ವಿಡಿಯೋಗಳನ್ನು ಮಾಡಿ ಪ್ರಸಾರ ಮಾಡುತ್ತಾರೆ ಎಂದರೆ, ಭಾರತದಲ್ಲಿ ಹಿಂದೂಗಳದ್ದಲ್ಲ, ಮುಸಲ್ಮಾನರ ರಾಜ್ಯವಿದೆ ಎಂದು ತೋರಿಸುತ್ತದೆ! ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡು!
  • ರಾಜಸ್ಥಾನದಲ್ಲಿ ಭಾಜಪ ಸರಕಾರ ಅಧಿಕಾರದಲ್ಲಿರುವಾಗ ಮತಾಂಧರ ಮೇಲೆ ನಿಯಂತ್ರಣ ಸಾಧಿಸುವುದು ಅವಶ್ಯಕ ಎಂದು ಹಿಂದೂಗಳಿಗೆ ಅನಿಸುತ್ತದೆ!