ವಿಡಿಯೋ ಮಾಡಿ ಚಾಕು ತೋರಿಸಿ ಆರೋಪಿ, ‘ಇಂದು ಸೇಡು ಪೂರ್ಣಗೊಂಡಿತು’ ಎಂದು ಬರೆದ

ಜೈಪುರ (ರಾಜಸ್ಥಾನ) – ಇಲ್ಲಿ ವಿಪಿನ್ ನಾಯಕ್ (ವಯಸ್ಸು 22) ಎಂಬ ಯುವಕನನ್ನು ಅನಸ್ ಖಾನ್ ಎಂಬಾತ ತನ್ನ ಸಹಚರರಾದ ಶಾದಾಬ್ ಮತ್ತು ಅಮನ್ ಖಾನ್ ಅವರ ಸಹಾಯದಿಂದ ಚಾಕುವಿನಿಂದ 14 ಬಾರಿ ಇರಿದು ಹತ್ಯೆ ಮಾಡಿದ್ದಾನೆ. ವಿಶೇಷವೆಂದರೆ, ಹತ್ಯೆ ಮಾಡಿದ ನಂತರ ಅನಸ್ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನದೇ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಅವನು ಚಾಕು ತೋರಿಸಿ, “ಇಂದು ಸೇಡು ಪೂರ್ಣಗೊಂಡಿತು” ಎಂದು ಪೋಸ್ಟ್ ಮಾಡಿದ್ದಾನೆ. ಈ ಘಟನೆ ಜುಲೈ 20 ರ ರಾತ್ರಿ ಪಾಲ್ಡಿ ಮೀನಾ ಕಚ್ಚಿ ಬಸ್ತಿಯಲ್ಲಿ ಸಂಭವಿಸಿದೆ. 3 ಮೋಟರ್ಸೈಕಲ್ಗಳಲ್ಲಿ 8 ಜನರು ಬಂದಿದ್ದರು. ಅದರಲ್ಲಿ ಅನಸ್ ಖಾನ್, ಶಾದಾಬ್ ಮತ್ತು ಅಮನ್ ಖಾನ್ ಸೇರಿದ್ದರು. ವಿಪಿನ್ ಮತ್ತು ಅನಸ್ ನಡುವೆ ಹಳೆಯ ವಿವಾದವಿತ್ತು. ಕೆಲ ದಿನಗಳ ಹಿಂದೆ ಅವರ ನಡುವೆ ಸಮಾಧಾನವೂ ಆಗಿತ್ತು. ವಿಪಿನ್ ದಿನಸಿ ಅಂಗಡಿ ನಡೆಸುತ್ತಿದ್ದನು ಮತ್ತು ಆ ಪ್ರದೇಶದಲ್ಲಿ ಎಲ್ಲರಿಗೂ ಪರಿಚಿತನಾಗಿದ್ದನು.
ವಿಪಿನ್ ತನ್ನ ಮನೆಯ ಬಳಿ ನಿಂತಿದ್ದಾಗ, ಅನಸ್ ಖಾನ್ ಅವನನ್ನು ಗಲ್ಲಿಗೆ ಕರೆದನು, ಅಲ್ಲಿ ಅವನ ಸಹಚರರು ಈಗಾಗಲೇ ಹೊಂಚು ಹಾಕಿ ಕುಳಿತಿದ್ದರು. ವಿಪಿನ್ ಅಲ್ಲಿಗೆ ಬಂದಾಗ, ಅವನ ಮೇಲೆ ಚಾಕುವಿನಿಂದ ಇರಿಯಲಾಯಿತು. ಈ ಸಮಯದಲ್ಲಿ ವಿಪಿನ್ ಕಿರುಚಿದಾಗ, ಆರೋಪಿಗಳು ಚಾಕು ತೋರಿಸಿ ಸ್ಥಳೀಯರನ್ನು ಓಡಿಸಿದರು. 14 ಬಾರಿ ಇರಿದು ಆರೋಪಿಗಳು ಪರಾರಿಯಾದ ನಂತರ, ಗಾಯಗೊಂಡಿದ್ದ ವಿಪಿನ್ನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವನನ್ನು ಮೃತನೆಂದು ಘೋಷಿಸಿದರು.
ಆಕ್ರೋಶಗೊಂಡ ಜನರಿಂದ ಹಿಂಸಾತ್ಮಕ ಪ್ರತಿಭಟನೆ

ಘಟನೆ ನಂತರ ಆಸ್ಪತ್ರೆಯಲ್ಲಿ ದೊಡ್ಡ ಜನಸಮೂಹ ಸೇರಿತು. ಪೊಲೀಸರು ಮತ್ತು ಆಡಳಿತಾಧಿಕಾರಿಗಳು ರಾತ್ರಿಯೇ ಅಲ್ಲಿಗೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಜುಲೈ 21 ರಂದು ಜನರು ಈ ಹತ್ಯೆಯ ವಿರುದ್ಧ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆಹಿಡಿಯಲು ಪ್ರಯತ್ನಿಸಿದರು.
ಈ ಸಮಯದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿ ಜನಸಮೂಹವನ್ನು ಚದುರಿಸಿದರು. ಈ ವೇಳೆ ಜನಸಮೂಹವು ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಿತು. ಸದ್ಯ ಇಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ.
ಸಂಪಾದಕೀಯ ನಿಲುವು
|
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್