ಹಿಂದೂ ಮಹಾಸಭಾದ ರಾಷ್ಟ್ರೀಯ ಸಚಿವ ಮಹಾಮಂಡಲೇಶ್ವರ ಡಾ. ಅನ್ನಪೂರ್ಣಾ ಭಾರತಿ ಅವರಿಗೆ ಪಾಕಿಸ್ತಾನದಿಂದ ಕೊಲೆ ಬೆದರಿಕೆ

ಅಲಿಗಢ (ಉತ್ತರ ಪ್ರದೇಶ) – ಹಿಂದೂ ಮಹಾಸಭಾದ ರಾಷ್ಟ್ರೀಯ ಸಚಿವ ಮಹಾಮಂಡಲೇಶ್ವರ ಡಾ. ಅನ್ನಪೂರ್ಣಾ ಭಾರತಿ (ಹಿಂದಿನ ಪೂಜಾ ಶಕುನ ಪಾಂಡೆ) ಅವರಿಗೆ ವಾಟ್ಸಾಪ್‌ ನಲ್ಲಿ ಅಜ್ಞಾತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ. ಬೆದರಿಕೆ ಹಾಕಿದ ವ್ಯಕ್ತಿಯು, ‘ನಿನ್ನ ಕೌಂಟ್‌ ಡೌನ್ ಪ್ರಾರಂಭವಾಗಿದೆ, 2 ದಿನಗಳಲ್ಲಿ ನಿಮ್ಮನ್ನು ಕೊಲ್ಲುತ್ತೇನೆ’ ಎಂದು ಹೇಳಿದ್ದಾನೆ. ಈ ಸಂಖ್ಯೆ ಪಾಕಿಸ್ತಾನದ್ದು ಎಂದು ಹೇಳಲಾಗುತ್ತಿದೆ. ಡಾ. ಅನ್ನಪೂರ್ಣಾ ಭಾರತಿ ಅವರು ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು, ಅವರ ಸುರಕ್ಷತೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಡಾ. ಅನ್ನಪೂರ್ಣಾ ಭಾರತಿ ಅವರು, ಈ ಹಿಂದೆ ಕೂಡ ತಮಗೆ ಹಲವು ಬಾರಿ ಅಜ್ಞಾತ ಸಂಖ್ಯೆಗಳಿಂದ ಜೀವ ಬೆದರಿಕೆಗಳು ಬಂದಿವೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ದೂರುಗಳನ್ನು ದಾಖಲಿಸಲಾಗಿದೆ; ಆದರೆ ಪೊಲೀಸರು ಇದುವರೆಗೆ ಬೆದರಿಕೆ ಹಾಕಿದವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈಗ ಅವರು ಪೊಲೀಸರಲ್ಲಿ ರಕ್ಷಣೆಗಾಗಿ ಮನವಿ ಮಾಡಿದ್ದಾರೆ.