
ರಾಯಪುರ (ಛತ್ತೀಸಗಢ) – ಛತ್ತೀಸಗಡದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಭಿಲಾಯಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದ ಆರ್ಥಿಕ ಅವ್ಯವಹಾರದ ಪ್ರಕರಣದಲ್ಲಿ ಈ ಬಂಧನ ಮಾಡಲಾಗಿದೆ. ಈ ಹಿಂದೆ ಹಗರಣ 2 ಸಾವಿರ ಕೋಟಿ ರೂಪಾಯಿಗಳದ್ದು ಎಂದು ಹೇಳಲಾಗಿತ್ತು; ಆದರೆ ಇ.ಡಿ. ಸಲ್ಲಿಸಿರುವ ಆರೋಪಪತ್ರದಲ್ಲಿ ಈ ಹಗರಣ 3 ಸಾವಿರದ 200 ಕೋಟಿ ರೂಪಾಯಿಗಳದ್ದು ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಛತ್ತೀಸಗಢದ ಆಗಿನ ಅಬಕಾರಿ ಸಚಿವ ಕವಾಸಿ ಲಖ್ಮಾ ಅವರನ್ನು ಈಗಾಗಲೇ ಬಂಧಿಸಲಾಗಿದೆ. 2019 ರಿಂದ 2022 ರ ಅವಧಿಯಲ್ಲಿ ಮದ್ಯ ತಯಾರಿಕಾ ಕಂಪನಿಗಳಿಂದ ದೊಡ್ಡ ಪ್ರಮಾಣದಲ್ಲಿ ಲಂಚ ಸ್ವೀಕರಿಸಲಾಗುತ್ತಿತ್ತು. ಈ ಮದ್ಯವನ್ನು ಛತ್ತೀಸಗಡ ರಾಜ್ಯ ಮಾರುಕಟ್ಟೆ ನಿಗಮದ ಮೂಲಕ ಖರೀದಿಸಲಾಗುತ್ತಿತ್ತು; ಆದರೆ ಇದರಿಂದ ಸರಕಾರಕ್ಕೆ ಒಂದು ಪೈಸೆಯ ಲಾಭವೂ ಆಗಲಿಲ್ಲ. ಚೈತನ್ಯ ಬಘೇಲ ಮತ್ತು ಇತರರು ಈ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇ.ಡಿ. ಇದುವರೆಗೆ 205 ಕೋಟಿ ರೂಪಾಯಿಗಳ ಆಸ್ತಿಗಳನ್ನು ಜಪ್ತಿ ಮಾಡಿದೆ.
🚨 Former Chhattisgarh CM Bhupesh Baghel's son ARRESTED in a massive liquor scam case!
While arrests keep happening, the real question remains…
📌 Why the delay in speedy trials & convictions?
PC: @NewsX pic.twitter.com/etXgFCtAbb— Sanatan Prabhat (@SanatanPrabhat) July 18, 2025
ಸಂಪಾದಕೀಯ ನಿಲುವುಹಗರಣ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಬಹಳಷ್ಟು ಜನರನ್ನು ಬಂಧಿಸಲಾಗುತ್ತಿತ್ತು; ಆದರೆ ಅವರ ಮೇಲೆ ತ್ವರಿತವಾಗಿ ಕ್ರಮ ಕೈಕೊಂಡು ಮತ್ತು ನಂತರ ಪ್ರಕರಣಗಳನ್ನು ನಡೆಸಿ ಅವರಿಗೆ ಶಿಕ್ಷೆ ನೀಡಲು ವಿಳಂಬವಾಗುತ್ತದೆ ಎಂಬುದು ಅಷ್ಟೇ ಸತ್ಯ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ