ಬಾಂಗ್ಲಾದೇಶ: ಗಡಿಯಲ್ಲಿ ಗೋಕಳ್ಳಸಾಗಾಣಿಕೆ; ಬಿಎಸ್‌ಎಫ್ ಗುಂಡೇಟಿಗೆ ಓರ್ವ ಬಲಿ

ಕೋಲಕತಾ (ಪ.ಬಂಗಾಳ) – ಭಾರತ-ಬಾಂಗ್ಲಾದೇಶ ಗಡಿ ಸಮೀಪ ಗೋಕಳ್ಳಸಾಗಾಣಿಕೆಗಾಗಿ ನುಸುಳುತ್ತಿದ್ದ 2 ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿ ಭದ್ರತಾ ದಳದ (ಬಿಎಸ್‌ಎಫ್) ಸೈನಿಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಾಂಗ್ಲಾದೇಶದ ಠಾಕೂರಗಾಂವ್‌ ನಿಂದ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ 7-8 ಜನರ ಗುಂಪಿನ ಮೇಲೆ ಸೈನಿಕರು ಗುಂಡು ಹಾರಿಸಿದ್ದರು. ಸೈನಿಕರು ಮೊದಲು ಅವರಿಗೆ ತಿಳಿ ಹೇಳಲು ಮತ್ತು ಎಚ್ಚರಿಕೆ ನೀಡಲು ಪ್ರಯತ್ನಿಸಿದ್ದರು; ಆದರೆ ಅಕ್ರಮ ವಲಸಿಗರು ಸೈನಿಕರ ಮಾತನ್ನು ಕೇಳದ ಕಾರಣ ಗುಂಡು ಹಾರಿಸಲಾಯಿತು. ಈ ಘಟನೆ ಜುಲೈ 12 ರ ಮುಂಜಾನೆ ಸಂಭವಿಸಿದೆ.

ಇಂತಹ ಇನ್ನೊಂದು ಘಟನೆಯಲ್ಲಿ ಒಬ್ಬನ ಸಾವು

ಎರಡನೇ ಘಟನೆ ಸುನಾಮ್‌ ಗಂಜ್ ಗಡಿ ಸಮೀಪ ಸಂಭವಿಸಿದೆ. ಇಲ್ಲಿ ಶಫೀಕುಲ್ ಇಸ್ಲಾಂ ಎಂಬ ಬಾಂಗ್ಲಾದೇಶಿ ಪ್ರಜೆ ಭಾರತದಿಂದ ಗೋವುಗಳನ್ನು ಕಳ್ಳಸಾಗಣೆ ಮಾಡಿ ಹಿಂತಿರುಗುತ್ತಿದ್ದಾಗ, ಸೈನಿಕರು ಅವನನ್ನು ಮತ್ತು ಅವನ 10-12 ಸಹಚರರನ್ನು ತಡೆದರು. ತಡೆದ ನಂತರ, ಈ ನುಸುಳುಕೋರರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಇದರಿಂದ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಶಫೀಕುಲ್ ಇಸ್ಲಾಂ ಹತನಾಗಿದ್ದಾನೆ.

ಗುಂಡು ಹಾರಿಸದಂತೆ ಬಾಂಗ್ಲಾದೇಶದ ಮನವಿ

ಗಡಿ ಭದ್ರತಾ ಪಡೆಗಳು ಹತ್ಯೆಯಾದ ಇಬ್ಬರೂ ವಲಸಿಗರ ಮೃತದೇಹಗಳನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಹಸ್ತಾಂತರಿಸಿದೆ. ಬಾಂಗ್ಲಾದೇಶದ ಅಧಿಕಾರಿಗಳು ಗಡಿಯಲ್ಲಿ ಗುಂಡು ಹಾರಿಸದಂತೆ ಭಾರತಕ್ಕೆ ಮನವಿ ಮಾಡಿದ್ದಾರೆ. ನಾವು ಮೊದಲು ಈ ಅಕ್ರಮ ವಲಸಿಗರಿಗೆ ತಿಳಿ ಹೇಳಲು, ಎಚ್ಚರಿಕೆ ನೀಡಲು ಪ್ರಯತ್ನಿಸಿದೆವು; ಆದರೆ ನುಸುಳುಕೋರರು ಆಕ್ರಮಣ ಮಾಡಿದ ಕಾರಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಗಡಿ ಭದ್ರತಾ ಪಡೆಗಳು ತಿಳಿಸಿವೆ.

ಸಂಪಾದಕೀಯ ನಿಲುವು

ಈಗ ಕೇವಲ ಗೋಕಳ್ಳಸಾಗಾಣಿಕೆಗಾರರನ್ನು ಮಾತ್ರವಲ್ಲದೆ, ಪ್ರತಿಯೊಬ್ಬ ನುಸುಳುಕೋರನನ್ನೂ ಸಹ ಇದೇ ರೀತಿ ಹೊಡೆದುರುಳಿಸುವುದು ಅವಶ್ಯಕವಾಗಿದೆ.