ಪ್ರಚೋದನಕಾರಿ ಭಾಷಣಗಳನ್ನು ನೀಡುತ್ತಿದ್ದಾರೆ ಎಂದು ಆರೋಪ

ಚಿಕ್ಕಮಗಳೂರು – ಹಿಂದುತ್ವವಾದಿ ನಾಯಕ ಶರಣ ಪಂಪವೆಲ್ ಅವರಿಗೆ ಜುಲೈ 6 ರಿಂದ ಆಗಸ್ಟ್ 4 ರವರೆಗೆ 30 ದಿನಗಳ ಕಾಲ ಚಿಕ್ಕಮಗಳೂರಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಪಂಪವೆಲ್ ಅವರನ್ನು ಚಿಕ್ಕಮಗಳೂರು, ಮೂಡಿಗೆರೆ ಮತ್ತು ಆಲ್ದೂರುಗಳಲ್ಲಿನ ಸಭೆಗಳಿಗೆ ಆಹ್ವಾನಿಸಲಾಗಿತ್ತು.
🚫 Hindus Silenced in “Secular” India?
📍 Chikkamagaluru, Karnataka:
Hindutva leader Sharan Pumpwell (@PumpwellSharan) slapped with a 1-month ban from the district for so-called “provocative speeches.”🧱 In a Hindu-majority nation, why are Hindu voices being muzzled; while… pic.twitter.com/TnJzBZvAdM
— Sanatan Prabhat (@SanatanPrabhat) July 7, 2025
‘ಪಂಪವೆಲ್ ಅವರ ವಿರುದ್ಧ 22 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತೀವ್ರ ರಾಷ್ಟ್ರೀಯವಾದಿ ಸಿದ್ಧಾಂತದಿಂದಾಗಿ ‘ಪ್ರಭಾವಿ ವ್ಯಕ್ತಿ’ ಎಂದು ಶರಣ ಪಂಪವೆಲ್ ಪ್ರಸಿದ್ಧರಾಗಿದ್ದಾರೆ. “ಶರಣ ಪಂಪವೆಲ್ ಕೋಮು ದ್ವೇಷವನ್ನು ಹರಡುವ ಭಾಷಣಗಳನ್ನು ಮಾಡುತ್ತಾರೆ. ಅವರ ಪ್ರಚೋದನಕಾರಿ ಭಾಷಣಗಳು ಮತ್ತು ಅವರು ಹಲವು ಬಾರಿ ಗಲಭೆಯಂತಹ ಘಟನೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಕ್ರಮದ ಭಾಗವಾಗಿ, ಪಂಪವೆಲ್ ಅವರಿಗೆ 30 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ” ಎಂದು ಜಿಲ್ಲಾಡಳಿತ ತಿಳಿಸಿದೆ. (ಮತಾಂಧತೆಗೆ ಬಲಿಯಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ನಾಯಕರು ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಾರೆ. ಅಂತಹ ಎಷ್ಟು ನಾಯಕರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಕರ್ನಾಟಕ ಪೊಲೀಸರು ಎಂದಿಗೂ ತಿಳಿಸುವುದಿಲ್ಲ, ಎನ್ನುವುದೂ ಅಷ್ಟೇ ಸತ್ಯ! – ಸಂಪಾದಕರು).
ಸಂಪಾದಕೀಯ ನಿಲುವು
|
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !