ಚಿಕ್ಕಮಗಳೂರು: ಹಿಂದುತ್ವವಾದಿ ನಾಯಕ ಶರಣ ಪಂಪವೆಲ್ ಅವರಿಗೆ 1 ತಿಂಗಳ ಕಾಲ ಜಿಲ್ಲಾ ಪ್ರವೇಶ ನಿಷೇಧ!

ಪ್ರಚೋದನಕಾರಿ ಭಾಷಣಗಳನ್ನು ನೀಡುತ್ತಿದ್ದಾರೆ ಎಂದು ಆರೋಪ

ಚಿಕ್ಕಮಗಳೂರು – ಹಿಂದುತ್ವವಾದಿ ನಾಯಕ ಶರಣ ಪಂಪವೆಲ್ ಅವರಿಗೆ ಜುಲೈ 6 ರಿಂದ ಆಗಸ್ಟ್ 4 ರವರೆಗೆ 30 ದಿನಗಳ ಕಾಲ ಚಿಕ್ಕಮಗಳೂರಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಪಂಪವೆಲ್ ಅವರನ್ನು ಚಿಕ್ಕಮಗಳೂರು, ಮೂಡಿಗೆರೆ ಮತ್ತು ಆಲ್ದೂರುಗಳಲ್ಲಿನ ಸಭೆಗಳಿಗೆ ಆಹ್ವಾನಿಸಲಾಗಿತ್ತು.

‘ಪಂಪವೆಲ್ ಅವರ ವಿರುದ್ಧ 22 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತೀವ್ರ ರಾಷ್ಟ್ರೀಯವಾದಿ ಸಿದ್ಧಾಂತದಿಂದಾಗಿ ‘ಪ್ರಭಾವಿ ವ್ಯಕ್ತಿ’ ಎಂದು ಶರಣ ಪಂಪವೆಲ್ ಪ್ರಸಿದ್ಧರಾಗಿದ್ದಾರೆ. “ಶರಣ ಪಂಪವೆಲ್ ಕೋಮು ದ್ವೇಷವನ್ನು ಹರಡುವ ಭಾಷಣಗಳನ್ನು ಮಾಡುತ್ತಾರೆ. ಅವರ ಪ್ರಚೋದನಕಾರಿ ಭಾಷಣಗಳು ಮತ್ತು ಅವರು ಹಲವು ಬಾರಿ ಗಲಭೆಯಂತಹ ಘಟನೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಕ್ರಮದ ಭಾಗವಾಗಿ, ಪಂಪವೆಲ್ ಅವರಿಗೆ 30 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ” ಎಂದು ಜಿಲ್ಲಾಡಳಿತ ತಿಳಿಸಿದೆ. (ಮತಾಂಧತೆಗೆ ಬಲಿಯಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ನಾಯಕರು ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಾರೆ. ಅಂತಹ ಎಷ್ಟು ನಾಯಕರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಕರ್ನಾಟಕ ಪೊಲೀಸರು ಎಂದಿಗೂ ತಿಳಿಸುವುದಿಲ್ಲ, ಎನ್ನುವುದೂ ಅಷ್ಟೇ ಸತ್ಯ! – ಸಂಪಾದಕರು).

ಸಂಪಾದಕೀಯ ನಿಲುವು

  • ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂ ನಾಯಕರ ಮೇಲೆ ಈ ರೀತಿ ನಿಷೇಧ ಹೇರುವುದು ಖಂಡನೀಯವಾಗಿದೆ. ಇದು ಪ್ರಜಾಪ್ರಭುತ್ವದ ವಿಡಂಬನೆ ಮತ್ತು ಹತ್ಯೆಯಾಗಿದೆ. ಇದನ್ನು ಕರ್ನಾಟಕದ ಹಿಂದೂಗಳು ಆಡಳಿತಾರೂಢ ಕಾಂಗ್ರೆಸ್ ಗೆ ಹೇಳಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು!
  • ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಮೇಲಿನ ನಿಷೇಧವನ್ನು ತೆಗೆದುಹಾಕುವ ಭರವಸೆಯನ್ನು ಚುನಾವಣೆಯಲ್ಲಿ ನೀಡಿದ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್, ಹಿಂದೂ ನಾಯಕರ ಮೇಲೆ ನಿಷೇಧ ಹೇರುತ್ತದೆ ಎಂಬುದನ್ನು ಗಮನಿಸಿ!