ಪಾಟಲೀಪುತ್ರ (ಬಿಹಾರ): ಸನಾತನ ಮಹಾಕುಂಭದಲ್ಲಿ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಸ್ವಾಮಿ ರಾಮಭದ್ರಾಚಾರ್ಯರ ಹಿಂದೂ ರಾಷ್ಟ್ರ ಘೋಷಣೆಯ ಪ್ರಸಂಗ

ಬರೇಲಿ (ಉತ್ತರ ಪ್ರದೇಶ) – ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಭಾರತವು ‘ಭಗವಾ-ಎ-ಹಿಂದ್’ ಆಗುವುದಿಲ್ಲ, ಅಥವಾ ‘ಗಜವಾ-ಎ-ಹಿಂದ್’ (ಕಾಫಿರರ ಮೇಲೆ ವಿಜಯ ಸಾಧಿಸಿ ಅವರನ್ನು ಇಸ್ಲಾಮೀಕರಣಗೊಳಿಸುವ ಯುದ್ಧ) ಆಗುವುದಿಲ್ಲ. ಭಾರತ ಎಂದಿಗೂ ‘ಹಿಂದೂ ರಾಷ್ಟ್ರ’ ಅಥವಾ ‘ಇಸ್ಲಾಮಿಕ್ ರಾಷ್ಟ್ರ’ ಆಗುವುದಿಲ್ಲ, ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈ ಎರಡು ವಿಷಯಗಳ ಬಗೆಗಿನ ಹೇಳಿಕೆಗಳಿಂದ ದೇಶದಲ್ಲಿ ಸಮಸ್ಯೆಗಳು ಉಂಟಾಗಬಹುದು ಮತ್ತು ಉಗ್ರವಾದಿ ಚಿಂತನೆಗೆ ಪ್ರೋತ್ಸಾಹ ಸಿಗಬಹುದು ಎಂದು ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲವಿ ಪ್ರತಿಕ್ರಿಯಿಸಿದ್ದಾರೆ. ಬಿಹಾರದ ರಾಜಧಾನಿ ಪಾಟಲೀಪುತ್ರದಲ್ಲಿ ಆಯೋಜಿಸಿದ್ದ ಸನಾತನ ಕುಂಭಮೇಳದಲ್ಲಿ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಅವರು ಹಿಂದೂ ರಾಷ್ಟ್ರದ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಬರೇಲವಿ ಮಾತನಾಡುತ್ತಿದ್ದರು.
ಮೌಲಾನಾ ಶಹಾಬುದ್ದೀನ್ ರಝ್ವಿ ಅವರು ಮಾತು ಮುಂದುವರೆಸಿ,
೧. ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಇಬ್ಬರೂ ವಾತಾವರಣ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹೇಳಿಕೆ ನೀಡುತ್ತಾರೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಇಳಿದಿವೆ. ಇಂತಹ ರಾಜಕೀಯ ವಾತಾವರಣದಲ್ಲಿ ಇವರಿಬ್ಬರೂ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.
2. ಧೀರೇಂದ್ರಕೃಷ್ಣ ಶಾಸ್ತ್ರಿ ಅವರು, ‘ಭಾರತ ಹಿಂದೂ ರಾಷ್ಟ್ರವಾಗುವುದಾದರೆ, ಅದು ಬಿಹಾರದಿಂದಲೇ ಪ್ರಾರಂಭವಾಗುತ್ತದೆ’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯು ಸಂಪೂರ್ಣವಾಗಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೀಡಲಾಗಿದೆ. ಈ ಹೇಳಿಕೆಯ ಉದ್ದೇಶ ಧಾರ್ಮಿಕ ಧ್ರುವೀಕರಣ ಮಾಡುವುದು, ಹಿಂದೂಗಳು ಮತ್ತು ಮುಸ್ಲಿಮರನ್ನು ಪರಸ್ಪರರಿಂದ ಬೇರ್ಪಡಿಸುವುದು. ಇದು ಅವರ ತಂತ್ರವಾಗಿದ್ದು, ಒಟ್ಟಾರೆ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷಕ್ಕೆ ಲಾಭವಾಗಬೇಕು ಎಂಬುದು ಅವರ ಪೂರ್ವಯೋಜಿತ ನಡೆಯಾಗಿದೆ.
3. ಅವರ ಎರಡನೆಯ ಹೇಳಿಕೆ ಏನೆಂದರೆ, ‘ಭಾರತದಲ್ಲಿ ಶೇ. ೮೦% ರಷ್ಟು ಹಿಂದೂ ಜನಸಂಖ್ಯೆ ಬಂದಾಗ, ಭಾರತವನ್ನು ‘ಭಗವಾ-ಎ-ಹಿಂದ್’ ಎಂದು ಘೋಷಿಸಲಾಗುವುದು’; ಆದರೆ ಅವರಿಗೆ ಗೊತ್ತಿಲ್ಲ, ಭಾರತ ಸರಕಾರದ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ದೇಶದಲ್ಲಿ ಶೇ.೧೯% ಮುಸ್ಲಿಂ ಜನಸಂಖ್ಯೆಯಿದೆ ಮತ್ತು ಶೇ. ೮೧% ಮುಸ್ಲಿಮೇತರ ಜನಸಂಖ್ಯೆಯಿದೆ. ಅವರು ‘ಭಗವಾ-ಎ-ಹಿಂದ್’ ಘೋಷಣೆಯನ್ನು ‘ಗಜವಾ-ಎ-ಹಿಂದ್’ ಗೆ ಪ್ರತಿಯಾಗಿ ನೀಡಿದ್ದಾರೆ; ಆದರೆ ಭಾರತದ ಮುಸ್ಲಿಮರು ಈಗಾಗಲೇ ‘ಗಜವಾ-ಎ-ಹಿಂದ್’ ಘೋಷಣೆಯನ್ನು ನಿರಾಕರಿಸಿದ್ದಾರೆ.
4. ಈ ಇಬ್ಬರೂ ಕಥಾ ವಾಚಕರು ಇಂತಹ ಹೇಳಿಕೆಗಳನ್ನು ನೀಡಿದರೆ ದೇಶದಲ್ಲಿ ಉಗ್ರವಾದಿ ವಿಚಾರಗಳಿಗೆ ಬಲ ಸಿಗಬಹುದು. ಈ ಇಬ್ಬರ ಘೋಷಣೆಗಳಿಗೂ ಮತ್ತು ಇತರ ಉಗ್ರವಾದಿಗಳ ಘೋಷಣೆಗಳಿಗೂ ಏನು ವ್ಯತ್ಯಾಸವಿದೆ? ಇಂತಹ ವಿಷಯಗಳಿಂದ ಭಾರತದ ಪ್ರತಿಷ್ಠೆ ಹಾಳಾಗುತ್ತದೆ ಮತ್ತು ಉಗ್ರವಾದಿ ವಿಚಾರಧಾರೆ ಹರಡುತ್ತದೆ.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !