
ಭಗವಂತನು `ಸುಶ್ರೋತೃ’ ಆಗಿದ್ದಾನೆ. `ಸು’ ಎಂದರೆ ಉತ್ತಮ ಮತ್ತು `ಶ್ರೋತೃ’ ಎಂದರೆ ಕೇಳುವವನು. ಭಗವಂತನಿಗೆ ಭಕ್ತನು ತನ್ನ ಜೀವನದ ಸಣ್ಣಪುಟ್ಟ ವಿಷಯಗಳನ್ನು, ಎಷ್ಟೇ ಬಾರಿ ಮತ್ತು ಯಾವುದೇ ಸಮಯದಲ್ಲಿ ಹೇಳುತ್ತಾನೆ ಮತ್ತು ಭಗವಂತ ಅದನ್ನು ಕೇಳುತ್ತಾನೆ. ಅದೇ ರೀತಿ, ಕಳೆದ 25 ವರ್ಷಗಳಿಂದ ವಿವಿಧ ವಯೋಮಾನದ ಜಿಜ್ಞಾಸುಗಳು, ಹಿತಚಿಂತಕರು, ಹಿಂದುತ್ವನಿಷ್ಠರು ಮತ್ತು ಸಾಧಕರು ತಮ್ಮ ಜೀವನದ ಸುಖ-ದುಃಖದ ಪ್ರಸಂಗಗಳು, ಸಾಧನೆ ಮಾಡುವಾಗ ಎದುರಾಗುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದ ತೊಂದರೆಗಳು ಹಾಗೂ ಅನುಭೂತಿಗಳು ಹೀಗೆ ಅಸಂಖ್ಯ ವಿಷಯಗಳನ್ನು ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಾ ಬಂದಿದ್ದಾರೆ. ಪರಾತ್ಪರ ಗುರು ಡಾಕ್ಟರರೂ ಈ ಎಲ್ಲಾ ವಿಷಯಗಳನ್ನು ಮನಃಪೂರ್ವಕವಾಗಿ ಕೇಳಿದ್ದಾರೆ ಮತ್ತು ಅವರಿಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಪರಾತ್ಪರ ಗುರು ಡಾಕ್ಟರರ ವಯಸ್ಸು ಹೆಚ್ಚಿದರೂ, ಅವರ ಈ ಪ್ರಕ್ರಿಯೆಯು ಆಯಾಸವಿಲ್ಲದೆ ಮತ್ತು ನಿರಂತರವಾಗಿ ಈಗಲೂ ಮುಂದುವರಿದಿದೆ. ಇದರಿಂದ ಭಗವಂತ ಮತ್ತು ಪರಾತ್ಪರ ಗುರು ಡಾಕ್ಟರರ ನಡುವಿನ ಈ ಸಮಾನ ಗುಣವು ಎದ್ದು ಕಾಣುತ್ತದೆ.
– ಶ್ರೀ. ರಾಮ ಹೋನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.5.2025)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !