ಕೇಂದ್ರ ತನಿಖಾ ದಳದಿಂದ ನ್ಯಾಯಾಲಯಕ್ಕೆ ಮಾಹಿತಿ

ಅಮರಾವತಿ (ಆಂಧ್ರಪ್ರದೇಶ) – ತಿರುಮಲ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ನಕಲಿ ತುಪ್ಪ ಬಳಸಿದ ಪ್ರಕರಣದಲ್ಲಿ, ಭೋಲೆಬಾಬಾ ಡೈರಿಯ ನಿರ್ದೇಶಕರಾದ ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರು ಲಡ್ಡು ಪ್ರಸಾದ ತಯಾರಿಸಲು 60 ಲಕ್ಷ ಕಿಲೋ ಕಲಬೆರಕೆ ತುಪ್ಪ ಪೂರೈಸಿ 240 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಆಂಧ್ರಪ್ರದೇಶ ಹೈಕೋರ್ಟ್ಗೆ ತಿಳಿಸಿದೆ.
ಕೇಂದ್ರ ತನಿಖಾ ದಳದ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ನಿಜವಾದ ಹಸುವಿನ ತುಪ್ಪದ ಬದಲಿಗೆ ರಾಸಾಯನಿಕ ಮಿಶ್ರಿತ ಪಾಮ್ ಆಯಿಲ್ ಅನ್ನು ತುಪ್ಪದ ರೂಪದಲ್ಲಿ ಪೂರೈಸಲಾಗುತ್ತಿತ್ತು ಎಂದು ಈ ತಂಡವು ಹೈಕೋರ್ಟ್ಗೆ ತಿಳಿಸಿದೆ. ಉತ್ತರಾಖಂಡದಿಂದ ತಂದ ಈ ನಕಲಿ ತುಪ್ಪವನ್ನು ಟ್ಯಾಂಕರ್ಗಳಲ್ಲಿ ತುಂಬಿ ಎ.ಆರ್. ಡೈರಿ ಮತ್ತು ವೈಷ್ಣವಿ ಡೈರಿ ಮೂಲಕ ದೇವಾಲಯಕ್ಕೆ ಸಾಗಿಸಲಾಗುತ್ತಿತ್ತು. ಕಾಗದದಲ್ಲಿ ಅವರನ್ನು ‘ಅಧಿಕೃತ ಗುತ್ತಿಗೆದಾರರು’ ಎಂದು ನಮೂದಿಸಲಾಗಿತ್ತು, ಆದರೆ ಭೋಲೆಬಾಬಾ ಡೈರಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿತ್ತು.
ಹಲವು ದೇವಾಲಯಗಳಿಗೆ ನಕಲಿ ತುಪ್ಪ ಪೂರೈಸಲಾಗುತ್ತಿತ್ತು!
ಕೇಂದ್ರ ತನಿಖಾ ದಳದ ತಂಡವು ಈ ಜಾಲವು ತಿರುಮಲವನ್ನು ಮೀರಿ ವಿಸ್ತರಿಸಿದೆ ಎಂದು ಬಹಿರಂಗಪಡಿಸಿದೆ. ಆಂಧ್ರಪ್ರದೇಶದ 6 ಪ್ರಮುಖ ದೇವಾಲಯಗಳಿಗೂ ಇದೇ ರೀತಿಯ ಕಲಬೆರಕೆ ತುಪ್ಪ ಸಿಗುತ್ತಿತ್ತು. ಇವುಗಳಲ್ಲಿ ಕನಿಪಕಂ, ಶ್ರೀಕಾಳಹಸ್ತಿ, ದ್ವಾರಕಾ ತಿರುಮಲ, ಪೆನುಗಂಚಿಪ್ರೋಲು ತಿರುಪಥಮ್ಮ ಅಮ್ಮವರ ದೇವಸ್ಥಾನ, ಶ್ರೀಶೈಲಂ ಮತ್ತು ಕನಕ ದುರ್ಗಾ ದೇವಸ್ಥಾನ (ವಿಜಯವಾಡ) ಸೇರಿವೆ.
ತನಿಖಾ ತಂಡವು ನ್ಯಾಯಾಲಯಕ್ಕೆ ನೀಡಿದ ಮಾಹಿತಿ
1. ಎ.ಆರ್. ಡೈರಿ ಮತ್ತು ವೈಷ್ಣವಿ ಡೈರಿಗಳ ನಿರ್ದೇಶಕರು ನಕಲಿ ತುಪ್ಪ ಪೂರೈಸಲು ಭೋಲೆಬಾಬಾಗೆ ಸಹಾಯ ಮಾಡಿದ್ದಕ್ಕಾಗಿ ಪ್ರತಿ ಕಿಲೋಗೆ 3 ರೂಪಾಯಿ ದಲ್ಲಾಳಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
2. ತನಿಖೆಯಿಂದ, ಹಗರಣದ ಸಮಯದಲ್ಲಿ ಭೋಲೆಬಾಬಾದ ನಿರ್ದೇಶಕರು ವೈಷ್ಣವಿ ಡೈರಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
3. ಆರೋಪಿಗಳು ಮತ್ತು ಅವರ ಪ್ರತಿನಿಧಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಹಲವು ಅಪರಾಧಗಳು ದಾಖಲಾಗಿವೆ.
4. ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತುಪ್ಪ ಪೂರೈಕೆ ಟೆಂಡರ್ ಪಡೆಯಲು ದೇವಸ್ಥಾನದ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ