ಭಾರತೀಯ ಸೈನ್ಯಕ್ಕೆ ನಮ್ಮ ಪೂರ್ಣ ಬೆಂಬಲ !

ಪಹಲ್ಗಾಮ್‌ನಲ್ಲಿ ಧರ್ಮವನ್ನು ಕೇಳಿ ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಶನ್‌ ಸಿಂಧೂರ್’ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಭಾರತವು ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ, ಪಾಕಿಸ್ತಾನವು ತನ್ನ ಸೈನಿಕರಿಗೇನೋ ಹಾನಿಯಾದಂತೆ ಕೆರಳಿತು ಮತ್ತು ದುಡುಕಿ ಭಾರತದ ಮೇಲೆ ಮರು ದಾಳಿ ಮಾಡಿತು. ಭಾರತವು ಪಾಕಿಸ್ತಾನದ ಪ್ರತಿಯೊಂದು ಆಕ್ರಮಣಕ್ಕೂ ‘ತಿರುಗೇಟು’ ನೀಡುತ್ತಾ ಗಡಿಯ ಮೇಲೆ ದೃಢವಾಗಿ ನಿಂತಿದೆ. ಭಾರತೀಯ ಸೈನ್ಯದ ಈ ನೇರ ಮತ್ತು ಸ್ಪಷ್ಟ ಕಾರ್ಯಾಚರಣೆಗಳಿಂದ ದೇಶಪ್ರೇಮಿ ಭಾರತೀಯರಿಗೆ ಭಾರತೀಯ ಸೈನ್ಯ ಮತ್ತು ಭಾರತ ಸರಕಾರದ ಬಗ್ಗೆ ಅಭಿಮಾನ ಅನಿಸುತ್ತಿದೆ. ‘ಸ್ವಾತಂತ್ರ್ಯದಿಂದ ಕಳೆದ ಹಲವು ದಶಕಗಳಿಂದ ನಡೆಯುತ್ತಿರುವ ಭಾರತ-ಪಾಕ್‌ ಸಂಘರ್ಷಕ್ಕೆ ಒಂದು ನಿರ್ಣಾಯಕ ಅಂತ್ಯ ಸಿಗಲೇಬೇಕು’ ಎಂಬುದು ರಾಷ್ಟ್ರಪ್ರೇಮಿ ಭಾರತೀಯರ ಅಪೇಕ್ಷೆಯಾಗಿದೆ. ಅದಕ್ಕಾಗಿಯೇ ರಾಷ್ಟ್ರಪ್ರೇಮಿ ನಾಗರಿಕರು ತಮ್ಮ ತಮ್ಮ ಸ್ತರದಲ್ಲಿ ಸೈನ್ಯ ಮತ್ತು ಸರಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ.

ರಾಷ್ಟ್ರಪ್ರೇಮಿ ಭಾರತೀಯರು ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಸೈನ್ಯದ ಕಾರ್ಯಾಚರಣೆಗಳ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ, ಮತ್ತೊಂದೆಡೆ ಶಾಂತಿಗಾಗಿ ಆಗ್ರಹಿಸುವವರ ಬರಹಗಳಿಗೂ ಮಹಾಪೂರವೇ ಬಂದಿದೆ. ಪಹಲ್ಗಾಮ್‌ ದಾಳಿಯ ನಂತರ ಭಾರತವು ತಕ್ಷಣವೇ ಕ್ರಮ ಕೈಗೊಂಡು ಪಾಕಿಸ್ತಾನ ಸರಕಾರ, ಅಲ್ಲಿನ ಸುದ್ದಿವಾಹಿನಿಗಳು ಮತ್ತು ಅವುಗಳ ಸಾಮಾಜಿಕ ಮಾಧ್ಯಮಗಳ ಪ್ರಸಾರವನ್ನು ಭಾರತದಲ್ಲಿ ನಿರ್ಬಂಧಿಸಿತು. ಈ ಹಿಂದೆ ಸಾಮ್ಯವಾದಿ ಗುಂಪಿನಲ್ಲಿದ್ದ ಮತ್ತು ಕಾಲಾನಂತರ ಭಾರತಪ್ರೇಮಿಗಳಾದ ಭಾರತದ ಸುದ್ದಿವಾಹಿನಿಗಳಿಗೂ ಸೈನ್ಯದ ಕಾರ್ಯಾಚರಣೆಗಳ ನೇರಪ್ರಸಾರವನ್ನು ಮಾಡದಂತೆ ತಡೆಯಲಾಯಿತು. ಇದರಿಂದ ಭಾರತೀಯರ ಮನಸ್ಸಿನಲ್ಲಿ ವೈಚಾರಿಕ ಗೊಂದಲವನ್ನು ಉಂಟುಮಾಡುವ ಯಾವುದೇ ಘಟನೆಗಳು ತಲುಪಲು ಸಾಧ್ಯವಿಲ್ಲ ಎಂದು ತಿಳಿದಿದ್ದರಿಂದ, ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದವರ ಚಟುವಟಿಕೆ ಹೆಚ್ಚಾಗಿದೆ. ಭಾರತಕ್ಕೆ ಶಾಂತಿಯ ಸಂದೇಶ ನೀಡುವವರು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ಯಾವ ಬಿಲದಲ್ಲಿ ಅಡಗಿದ್ದರೋ, ಅವರ ನಾಡಿ ಮಿಡಿತವನ್ನು ಬಿಗಿಗೊಳಿಸಿದ್ದರಿಂದ ಈಗ ಸಾಮಾಜಿಕ ಮಾಧ್ಯಮಗಳ ಕೊನೆಯ ಆಯ್ಕೆಯನ್ನು ಬಳಸಲು ಪ್ರಾರಂಭಿಸಿದ್ದಾರೆ. ಮೊದಲಿಗೆ ದೇಶಪ್ರೇಮಿಗಳಂತೆ ಕಾಣುವ ಕೆಲವರಿಗೆ ಕೆಲವು ದಿನಗಳ ನಂತರ ಸಹಿಷ್ಣುತೆಯ ಕಾಳಜಿ ಬರಲು ಪ್ರಾರಂಭವಾಗುತ್ತದೆ ಮತ್ತು ಶಾಂತಿ ಪ್ರಸ್ತಾಪಗಳು ಮುಂದೆ ಬರಲು ಪ್ರಾರಂಭವಾಗುತ್ತವೆ, ಪ್ರಶಸ್ತಿ ವಾಪಸಾತಿಯೂ ಆಗುತ್ತದೆ, ಭಾರತೀಯ ಸೈನ್ಯದ ಕ್ರಮಗಳ ಮೇಲೆ ಆಕ್ಷೇಪಣೆಗಳನ್ನು ಎತ್ತಲಾಗುತ್ತದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗುರಿಯಾಗಿಸಲು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ, ಹೀಗಾಗಲು ಯಾವುದೇ ಮಾರ್ಗವನ್ನು ಅನುಸರಿಸುವರು ಎಂಬುದು ಖಚಿತ! ಅಂತಾರಾಷ್ಟ್ರೀಯ ಮಾಧ್ಯಮಗಳು ಈಗಾಗಲೇ ಇದನ್ನು ಪ್ರಾರಂಭಿಸಿವೆ.

ಭಾರತದ ಬ್ರಿಟನ್‌ನ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ (ಕೃಪೆ: ಎಕ್ಸ್/ಸ್ಕ್ರೀನ್‌ಶಾಟ್)

ಬ್ರಿಟನ್‌ನಲ್ಲಿರುವ ಭಾರತದ ಹೈ ಕಮಿಷನರ್‌ ವಿಕ್ರಮ್‌ ದೊರೈಸ್ವಾಮಿ ಅವರು ಬ್ರಿಟಿಷ್‌ ವಾಹಿನಿ ‘ಸ್ಕೈ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿದ ಪುರಾವೆಯನ್ನು ಸಲ್ಲಿಸಿದ್ದಾರೆ. ಪಾಕಿಸ್ತಾನವು ಕೇವಲ ಭಯೋತ್ಪಾದಕರ ಹಿಂದೆ ನಿಂತಿಲ್ಲ, ಆದರೆ ಅವರಿಗೆ ಆಶ್ರಯ ಮತ್ತು ರಾಜ್ಯ ಗೌರವವನ್ನು ನೀಡುತ್ತದೆ ಎಂಬುದನ್ನು ತೋರಿಸುವ ಪಾಕಿಸ್ತಾನಿ ಸೈನ್ಯದ ಅಧಿಕಾರಿ ಭಯೋತ್ಪಾದಕ ಹಫೀಜ್‌ ಅಬ್ದುಲ್‌ ರೌಫ್‌ನ ಹಿಂದೆ ನಿಂತಿರುವ ಛಾಯಾಚಿತ್ರವನ್ನು ತೋರಿಸಲಾಯಿತು. ಅಮೆರಿಕಾದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಹಫೀಜ್‌ ಅಬ್ದುಲ್‌ ರೌಫ್‌ ಜೈಶ್‌-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್‌ ಅಜರ್‌ನ ಸಹೋದರ. ಭಯೋತ್ಪಾದನೆಯ ವಿರುದ್ಧ ಭಾರತದ ಮೊದಲ ಪ್ರಯತ್ನದಲ್ಲಿ ಪಾಕಿಸ್ತಾನದ ಪರವಾಗಿ ವಾದಿಸುವ ಅನೇಕ ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳ ಬಣ್ಣವನ್ನು ಭಾರತೀಯರು ಬಯಲು ಮಾಡುತ್ತಿದ್ದಾರೆ. ಸಾಮ್ಯವಾದಿಗಳು ಭಾರತವನ್ನು ಗುರಿಯಾಗಿಸುವ ಕ್ರಿಯಾ ಯೋಜನೆಯನ್ನು ರಾಷ್ಟ್ರಪ್ರೇಮಿ ಸೈನ್ಯ, ಸರಕಾರ ಮತ್ತು ನಾಗರಿಕರು ತಿಳಿದಿದ್ದಾರೆ; ಅದಕ್ಕಾಗಿಯೇ ಕಳೆದ ೧೦ ವರ್ಷಗಳಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಸೈನಿಕ, ರಾಜಕೀಯ ಮತ್ತು ನಾಗರಿಕ ಜಾಗೃತಿ ಮುಂತಾದ ಪೂರ್ವಸಿದ್ಧತೆಗಳು ಕಂಡುಬರುತ್ತಿವೆ. ಈವರೆಗೆ ಭಾರತವು ಶತ್ರು ರಾಷ್ಟ್ರಗಳೊಂದಿಗೆ ನಡೆಸಿದ ಯುದ್ಧಗಳಲ್ಲಿ ಸೈನ್ಯದ ಸ್ವಾಯತ್ತತೆಯ ಕೊರತೆ, ಸಾಕಷ್ಟು ಸಿದ್ಧತೆಯಿಲ್ಲದಿರುವುದು, ಸರಿಯಾದ ನಾಯಕತ್ವದ ಕೊರತೆ, ತಪ್ಪಾದ ಗ್ರಹಿಕೆಗಳಿಂದ ಭಾರತಕ್ಕೆ ಹಾನಿಯಾಗಿದೆ. ಸ್ವಾತಂತ್ರ್ಯದ ಸಮಯದಲ್ಲಿ ಪ್ರಾಥಮಿಕ ಪ್ರತಿಕ್ರಿಯೆಯಲ್ಲಿ ವಿಳಂಬವಾದ ಕಾರಣ, ಅಂದರೆ ಭಾರತ ಸರಕಾರವು ಸೈನ್ಯವನ್ನು ಕಳುಹಿಸುವ ನಿರ್ಧಾರವನ್ನು ತಡವಾಗಿ ತೆಗೆದುಕೊಂಡಿದ್ದರಿಂದ ‘ಪಾಕ್‌ ಪ್ರಾಯೋಜಿತ ಕಾಶ್ಮೀರ’ ಎಂಬ ಹೆಸರಿನಲ್ಲಿ ಕಾಶ್ಮೀರದ ಕೆಲವು ಭಾಗವು ಶಾಶ್ವತವಾಗಿ ಪಾಕಿಸ್ತಾನದ ಪಾಲಾಯಿತು. ಯಾವ ಯುದ್ಧಗಳಲ್ಲಿ ಸೈನ್ಯವು ವಿಜಯವನ್ನು ಸಾಧಿಸಿತೋ, ಆ ಸಮಯದಲ್ಲಿ ಅಡ್ಡಿಯಾದ ಸಹಿಷ್ಣುತೆ ಮತ್ತು ಜಾಗತಿಕ ಒತ್ತಡದಿಂದ ಮಾಡಬೇಕಾದ ‘ಶಿಮ್ಲಾ ಒಪ್ಪಂದ’ದಂತಹ ಒಪ್ಪಂದಗಳಿಂದ ಭಾರತಕ್ಕೆ ಆ ವಿಜಯದ ಲಾಭವು ಸಿಗಲಿಲ್ಲ. ಈವರೆಗೆ ಭಾರತವು ಪ್ರತಿ ಬಾರಿಯೂ ‘ಹೋಗಲಿ ಬಿಡಿ, ಅನಗತ್ಯ ವಿವಾದ ಬೇಡ’ ಎಂದು ಶತ್ರು ರಾಷ್ಟ್ರಗಳ ಬಗ್ಗೆ ಕೈಗೊಂಡ ಕ್ರಮಗಳಿಂದ ಶತ್ರು ರಾಷ್ಟ್ರಗಳು ಭಾರತದ ಮೇಲೆ ಸವಾರಿ ಮಾಡಿದವು ಮತ್ತು ಭಾರತವನ್ನು ಪ್ರತಿಯೊಂದು ಹಂತದಲ್ಲೂ ಕೆಳಗಿಳಿಸಲು ಪೂರ್ಣ ಪ್ರಯತ್ನ ಮಾಡಲಾಯಿತು. ಅದರಲ್ಲಿ ಅವರು ಯಶಸ್ವಿಯೂ ಆದರು. ೧೯೯೯ ರಲ್ಲಿ ಐಸಿ-೮೧೪ ವಿಮಾನವನ್ನು ಅಪಹರಿಸಲಾಯಿತು. ‘ಜೈಶ್‌-ಎ-ಮೊಹಮ್ಮದ್‌’ನ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್, ಅಹ್ಮದ್‌ ಉಮರ್‌ ಶೇಖ್‌ ಮತ್ತು ಮುಷ್ತಾಕ್‌ ಅಹ್ಮದ್‌ ಜರ್ಗರ್‌ ಈ ಭಯೋತ್ಪಾದಕರನ್ನು ಬಿಡುಗಡೆ ಮಾಡಲಾಯಿತು, ಹಾಗೆಯೇ ಸಣ್ಣಪುಟ್ಟ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಭಾರತವು ೨ ಹೆಜ್ಜೆ ಹಿಂದಕ್ಕೆ ಸರಿದು ಭಯೋತ್ಪಾದಕರನ್ನು ಬಿಡುಗಡೆ ಮಾಡಿತು; ಆದರೆ ಈಗ ಭಾರತವು ಹೇಡಿತನ ತೋರಿಸಿ ನಡೆಯುವಂತಿಲ್ಲ. ಭಾರತದ ವೈಭವಯುತ ರಾಜರ ಶೌರ್ಯದ ಆದರ್ಶವನ್ನು ಇಟ್ಟುಕೊಂಡು ಭಾರತವು ಇಂದು ಪಾಕಿಸ್ತಾನದ ವಿರುದ್ಧ ‘ತಿರುಗೇಟು’ ನೀಡುತ್ತಿದೆ, ಅದೇ ನೀತಿಯನ್ನು ಶಾಶ್ವತವಾಗಿ ಜಾರಿಗೆ ತರಬೇಕು, ಇದರಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡುವವರನ್ನೂ ನಿಗ್ರಹಿಸಬೇಕಾದರೂ ಯಾವುದೇ ರಾಜಿ ಮಾಡಿಕೊಳ್ಳಬಾರದು, ಎಂಬುದು ರಾಷ್ಟ್ರಪ್ರೇಮಿ ಭಾರತೀಯರ ಅಪೇಕ್ಷೆಯಾಗಿದೆ.

ಯುದ್ಧವೇ ವೀರತ್ವದ ಪ್ರಮಾಣ ಮತ್ತು ಶಾಂತಿಯ ಮಾರ್ಗ!

ಕಾಲಮಹಿಮೆಯ ಪ್ರಕಾರ ಭಾರತವು ಮತ್ತೆ ವಿಶ್ವಗುರು ಸ್ಥಾನವನ್ನು ಅಲಂಕರಿಸುವ ಸಮಯ ಹತ್ತಿರವಾಗಿದೆ. ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಧರ್ಮದ ವಿಜಯವು ನಿಶ್ಚಿತವಾಗಿದೆ; ಆದರೆ ಅದರಲ್ಲಿ ಯಾವ ಆಯ್ಕೆಯನ್ನು ಆರಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಮೇಲೆ ಅವಲಂಬಿತವಾಗಿದೆ. ಈ ಸಮಯದಲ್ಲಿ ಎರಡೂ ಮಾರ್ಗಗಳನ್ನು ಅನುಸರಿಸದಿರುವ ಮಧ್ಯಮ ಪರ್ಯಾಯವೂ ಲಭ್ಯವಿರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಅವಶ್ಯಕ. ಭಾರತೀಯ ಸೈನ್ಯವು ಗಡಿಗಳಲ್ಲಿ ಹೋರಾಡುತ್ತಿದೆ, ಸರಕಾರವು ರಾಜಕೀಯ ಮಟ್ಟದಲ್ಲಿ ಹೋರಾಡುತ್ತಿದೆ; ಇದರಲ್ಲಿ ರಾಷ್ಟ್ರಪ್ರೇಮಿ ನಾಗರಿಕರಾಗಿ ಭಾರತೀಯರು ಸೈನ್ಯ ಮತ್ತು ಸರಕಾರದ ಬೆಂಬಲಕ್ಕೆ ನಿಲ್ಲುವುದು ಅವಶ್ಯಕ. ಅದಕ್ಕಾಗಿ ಭಾರತವು ಪೂರಕ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಒಂದು ಅಂಶವೆಂದರೆ ಭಾರತ ಸರಕಾರವು ಶತ್ರು ರಾಷ್ಟ್ರಗಳ ಅನೇಕರ ಸಾಮಾಜಿಕ ಮಾಧ್ಯಮಗಳ ಅಭಿಪ್ರಾಯಗಳು ಭಾರತದಲ್ಲಿ ಪ್ರಸಾರವಾಗದಂತೆ ತಡೆದಿದೆ, ಆದರೂ ಭಾರತದ ಕೆಲವು ಅಜ್ಞಾತ ಜೀವಿಗಳು ತಮ್ಮ ಕಿರುದನಿಯನ್ನು ಮೊಳಗಿಸುತ್ತಿದ್ದಾರೆ. ಅವರನ್ನು ಗುರುತಿಸುವುದು, ಸಮಯಕ್ಕೆ ಸರಿಯಾಗಿ ಎಚ್ಚರಿಸುವುದು ಮತ್ತು ಅಂತಹ ದೇಶದ್ರೋಹಿಗಳ ಬಗ್ಗೆ ದೂರು ನೀಡಿ ಅವರನ್ನು ಭಾರತದಿಂದ ಹೊರಹಾಕುವುದು, ಈ ಪ್ರಕ್ರಿಯೆಯಲ್ಲಿ ರಾಷ್ಟ್ರಪ್ರೇಮಿ ಭಾರತೀಯರು ಖಂಡಿತವಾಗಿ ಭಾಗವಹಿಸಬೇಕು. ಭಾರತೀಯರೇ, ನಿಮ್ಮ ರಾಷ್ಟ್ರದ ಬಗ್ಗೆಗಿನ ಕರ್ತವ್ಯ ಮತ್ತು ಪ್ರೀತಿಯು ಯುದ್ಧದ ಕಷ್ಟದ ಸಮಯದಲ್ಲಿ ಸೈನ್ಯ ಮತ್ತು ಸರಕಾರದ ಮನೋಬಲವನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ. ಆದ್ದರಿಂದ ಭಾರತೀಯರೇ, ಎಚ್ಚರದಿಂದಿರಿ! ನಿಮ್ಮ ಮನಸ್ಸಿನಲ್ಲಿ ಸೈನ್ಯ ಮತ್ತು ಸರಕಾರದ ಬಗ್ಗೆ ಗೊಂದಲವನ್ನು ಉಂಟುಮಾಡಲು ಅನೇಕರು ಸಕ್ರಿಯರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿಮ್ಮಲ್ಲಿರುವ ಭಾರತದ ಬಗೆಗಿನ ರಾಷ್ಟ್ರನಿಷ್ಠೆಯನ್ನು ಸ್ವಲ್ಪವೂ ಕಡಿಮೆಗೊಳಿಸಬೇಡಿ; ಏಕೆಂದರೆ ಯುದ್ಧವು ಕೇವಲ ಗಡಿಗಳಲ್ಲಿ ಮಾತ್ರ ನಡೆಯುವುದಿಲ್ಲ, ಅದು ವೈಚಾರಿಕ, ರಾಜಕೀಯ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿಯೂ ನಡೆಯುತ್ತದೆ. ಪ್ರತಿಯೊಂದು ಹಂತದಲ್ಲೂ ಭಾರತೀಯರ ಅಂದರೆ ಹಿಂದೂಗಳ ವಿಜಯವಾಗಲು ಪ್ರತಿಯೊಬ್ಬ ಭಾರತೀಯನೂ ಈ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಯುದ್ಧವೇ ವೀರತ್ವದ ಪ್ರಮಾಣ ಮತ್ತು ಅದರಿಂದ ಶಾಂತಿಯ ಉಗಮವಾಗುತ್ತದೆ ಎಂಬುದನ್ನು ನೆನಪಿಟ್ಟುಕೊಂಡು ಭಾರತೀಯರು ಯುದ್ಧಕ್ಕೆ ಸಿದ್ಧರಾಗಿರಿ!

ಭಾರತೀಯ ಸೈನ್ಯದ ಈ ನೇರ ಕಾರ್ಯಾಚರಣೆಗಳಿಂದ ದೇಶಪ್ರೇಮಿ ಭಾರತೀಯರಿಗೆ ಭಾರತೀಯ ಸೈನ್ಯ ಮತ್ತು ಭಾರತ ಸರಕಾರದ ಬಗ್ಗೆ ಅಭಿಮಾನ ಮೂಡುತ್ತಿದೆ.