Afghan Former Leader Statement : ಭಾರತವು ಪಾಕಿಸ್ತಾನದ ಕುತ್ತಿಗೆಗೆ ಉರುಳು ಬಿಗಿದಿದ್ದು, ಅದನ್ನು ಬಿಗಿಗೊಳಿಸುತ್ತಿದೆ!

ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಾಲೆಹ್ ಅವರ ಹೇಳಿಕೆ

ಕಾಬೂಲ (ಅಫ್ಘಾನಿಸ್ತಾನ) – ಭಾರತವು ಪಾಕಿಸ್ತಾನದ ವಿರುದ್ಧ ಕೈಗೊಂಡ ಪ್ರತೀಕಾರದ ಕ್ರಮವು ಧೈರ್ಯಶಾಲಿ, ಅಭೂತಪೂರ್ವ ಮತ್ತು ಅದರ ಮಾತಿಗೆ ಅನುಗುಣವಾಗಿತ್ತು. ಅದು ಪಾಕಿಸ್ತಾನದ ಕುತ್ತಿಗೆಗೆ ಒಂದು ಉದ್ದವಾದ ಉರುಳನ್ನು ಹಾಕಿದೆ. ಆ ಉರುಳಿನಲ್ಲಿ ಒಂಬತ್ತು ಗಂಟುಗಳಿವೆ, ಅದನ್ನು ಅದು ಒಂದೊಂದಾಗಿ ಬಿಗಿಗೊಳಿಸುತ್ತಿದೆ. ಸದ್ಯ ಭಾರತವು ‘ಆಪರೇಷನ್ ಸಿಂಧೂರ್’ ನಡೆಸಿ ಮೊದಲ ಉರುಳನ್ನು ಬಿಗಿಗೊಳಿಸಿದೆ ಎಂದು ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಾಲೆಹ್ ಅವರು ಭಾರತದ ಪಾಕಿಸ್ತಾನ ಮೇಲಿನ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಎಕ್ಸ್’ನಲ್ಲಿನ ಪೋಸ್ಟ್‌ನಲ್ಲಿ ಅಮರುಲ್ಲಾ ಸಾಲೆಹ್ ಅವರು, ಪಾಕಿಸ್ತಾನವು ಇದನ್ನು ‘ಹೇಡಿತನದ ದಾಳಿ’ ಎಂದು ಕರೆದಿದೆ. ಭಾರತವು ಪಾಕಿಸ್ತಾನದ ವಿರುದ್ಧ ಕೈಗೊಂಡ ಸೈನ್ಯ ಕಾರ್ಯಾ ಹೇಡಿತನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಅದು ಧೈರ್ಯಶಾಲಿ ಮತ್ತು ಸ್ಪಷ್ಟವಾದ ಆಕ್ರಮಣವಾಗಿತ್ತು. ದೊಡ್ಡ ವಿಷಯವೆಂದರೆ ಈ ಕಾರ್ಯಾಚರಣೆಯ ಮಾಹಿತಿಯನ್ನು ನೀಡಿದ ಮಹಿಳಾ ಸೇನಾಧಿಕಾರಿ ಕುರೈಶ ಜನಾಂಗಕ್ಕೆ ಸೇರಿದವರು. ಕುರೈಶ ಸೌದಿ ಅರೇಬಿಯಾದ ಒಂದು ಜನಾಂಗವಾಗಿದ್ದು, ಅದು ಮಹಮ್ಮದ್ ಪೈಗಂಬರ್ ಅವರಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ.

ಅಮರುಲ್ಲಾ ಸಾಲೆಹ್ ಯಾರು?

ಅಮರುಲ್ಲಾ ಸಾಲೆಹ್ ಅವರು ಅಫ್ಘಾನಿಸ್ತಾನದ ತಾಜಿಕ್ ಮೂಲದ ನಾಯಕರಾಗಿದ್ದಾರೆ. ಅಶ್ರಫ್ ಘನಿ ಅಧ್ಯಕ್ಷರಾಗಿದ್ದಾಗ ಅವರು ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿದ್ದರು. ಅವರು ತಾಲಿಬಾನ್ ಮತ್ತು ಪಾಕಿಸ್ತಾನದ ಕಟ್ಟಾ ವಿರೋಧಿಯಾಗಿದ್ದಾರೆ. ಪಾಕಿಸ್ತಾನದ ಪ್ರೇರಣೆಯಿಂದ ತಾಲಿಬಾನ್ ಅಫ್ಘಾನಿಸ್ತಾನದ ಅಧಿಕಾರವನ್ನು ವಶಪಡಿಸಿಕೊಂಡಾಗ, ಅವರು ತಮ್ಮ ಪ್ರಾಣ ಉಳಿಸಿಕೊಳ್ಳಲು ದೇಶವನ್ನು ತೊರೆದು ನೆರೆಯ ತಜಿಕಿಸ್ತಾನದಲ್ಲಿ ಆಶ್ರಯ ಪಡೆದರು. ಅವರು ಅಫ್ಘಾನಿಸ್ತಾನದ ವಿನಾಶಕ್ಕೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ ಮತ್ತು ಅಂತರರಾಷ್ಟ್ರೀಯ ಸಮುದಾಯವು ಅದಕ್ಕಾಗಿ ಪಾಕಿಸ್ತಾನವನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.