ರಾಜಪ್ರಭುತ್ವದ ಪರವಾಗಿ ನಡೆಯುತ್ತಿರುವ ಚಳವಳಿಗೆ ಪ್ರೋತ್ಸಾಹ ನೀಡಿದ ಆರೋಪ!

ಕಾಠಮಾಂಡು – ನೇಪಾಳದ ಬಗ್ಗೆ ತಪ್ಪು ವರದಿ ಮಾಡಿದೆ ಎಂದು ಆರೋಪಿಸಿ ನೇಪಾಳದ ‘ಪತ್ರಿಕಾ ಮಂಡಳಿ’ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಇದರೊಂದಿಗೆ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸುದ್ದಿ ವಾಹಿನಿಗಳ ಪ್ರತಿನಿಧಿಗಳಿಗೆ ನೀಡಲಾದ ಗುರುತಿನ ಚೀಟಿಗಳನ್ನು ತಕ್ಷಣವೇ ರದ್ದುಪಡಿಸುವಂತೆ ತಿಳಿಸಲಾಗಿದೆ. ನಿಷೇಧ ಹೇರಲು ಶಿಫಾರಸು ಮಾಡಲಾದ ಮಾಧ್ಯಮಗಳಲ್ಲಿ ಆಜ್ ತಕ್, ಎಬಿಪಿ, ಜೀ ನ್ಯೂಸ್, ನ್ಯೂಸ್ 18, ಟಿವಿ 9, ಎನ್ ಡಿಟಿವಿ, ರಿಪಬ್ಲಿಕ ಭಾರತ ಮುಂತಾದ ಭಾರತೀಯ ಸುದ್ದಿ ವಾಹಿನಿಗಳು ಸೇರಿವೆ ಎಂದು ನೇಪಾಳದ ‘ಪತ್ರಿಕಾ ಮಂಡಳಿ’ ಅಧ್ಯಕ್ಷ ಬಾಳಕೃಷ್ಣ ಬಸನೇತ ತಿಳಿಸಿದ್ದಾರೆ.
1. ನೇಪಾಳದ ‘ಪತ್ರಿಕಾ ಮಂಡಳಿ’ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಮಾಹಿತಿ ಇಲಾಖೆಗೆ ನಿರ್ದೇಶನ ಪತ್ರ ಬರೆದು ಎಲ್ಲಾ ಪ್ರಮುಖ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ತಿಳಿಸಿದೆ.
2. ಈ ಸುದ್ದಿ ವಾಹಿನಿಗಳು ದೇಶದ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸರಕಾರದ ವಿರುದ್ಧ ಸುದ್ದಿಗಳನ್ನು ತೋರಿಸಿವೆ ಮತ್ತು ರಾಜಪ್ರಭುತ್ವದ ಪರವಾಗಿ ನಡೆಯುತ್ತಿರುವ ಚಳವಳಿಗೆ ಪ್ರೋತ್ಸಾಹ ನೀಡಿವೆ ಎಂದು ಆರೋಪಿಸಲಾಗಿದೆ.
ಸಂಪಾದಕೀಯ ನಿಲುವು
|
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation