Beauty Parlor Jihad : ಉತ್ತರಪ್ರದೇಶದಲ್ಲಿ ‘ಲವ್ ಜಿಹಾದ್‌’ದ ತಾಣವಾಗುತ್ತಿರುವ ‘ಬ್ಯೂಟಿ ಪಾರ್ಲರ್‌’; ತನಿಖೆಗೆ ಹಿಂದೂ ನಾಯಕರ ಆಗ್ರಹ !

  • ಮಥುರಾ ಮತ್ತು ವೃಂದಾವನದ ೧೩ ಹಿಂದೂ ಹುಡುಗಿಯರ ಇಸ್ಲಾಂಗೆ ಮತಾಂತರ!

  • ‘ಪಿಎಫ್‌ಐ’ ಕೈವಾಡದ ಆರೋಪ!

ಮಥುರಾ/ವೃಂದಾವನ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನದಲ್ಲಿ ಸಂತರು ಮತ್ತು ಸಾಮಾಜಿಕ ಸಂಘಟನೆಗಳು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬ್ಯೂಟಿ ಪಾರ್ಲರ್‌ಗಳಂತಹ ಸಂಸ್ಥೆಗಳ ಆಳವಾದ ತನಿಖೆ ನಡೆಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲಿನ ಬ್ಯೂಟಿ ಪಾರ್ಲರ್‌ಗಳು ‘ಲವ್ ಜಿಹಾದ್‌’ದ ಕೇಂದ್ರಗಳಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲಸ ಮಾಡುವ ಮುಸ್ಲಿಂ ಯುವಕರು ಹಿಂದೂ ಮಹಿಳೆಯರನ್ನು ಪ್ರೀತಿಯ ಬಲೆಗೆ ಸಿಲುಕಿಸುತ್ತಿದ್ದಾರೆ ಎಂದು ಶ್ರೀಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದ ಹಿಂದೂ ನಾಯಕ ದಿನೇಶ ಫಲಾಹರಿ ದಾವೆ ಮಾಡಿದ್ದಾರೆ. ‘ಪಾರ್ಲರ್ ಜಿಹಾದ್’ ಎಂಬ ಈ ವಿಷಯವು ಹೊಸ ಸಾಮಾಜಿಕ ಮತ್ತು ಕೋಮು ವಿವಾದಕ್ಕೆ ಜನ್ಮ ನೀಡುತ್ತಿದೆ, ಇದು ಈಗಾಗಲೇ ನಡೆಯುತ್ತಿರುವ ‘ಲವ್ ಜಿಹಾದ್’ ವಿವಾದದ ವಿಸ್ತರಣೆಯಂತೆ ಕಾಣುತ್ತಿದೆ ಎಂದು ದಿನೇಶ ಫಲಾಹರಿ ಹೇಳಿದ್ದಾರೆ.

೧. ಮಥುರಾ ಮತ್ತು ವೃಂದಾವನದ ಸಂತ ಸಮಾಜವು, ಈವರೆಗೆ ಮಥುರಾ, ವೃಂದಾವನ ಪ್ರದೇಶದ ೧೩ಕ್ಕೂ ಹೆಚ್ಚು ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಪ್ರೀತಿಯ ಬಲೆಗೆ ಸಿಲುಕಿಸಿ ಮುಂಬಯಿ ಸೇರಿದಂತೆ ಇತರ ಮಹಾನಗರಗಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರನ್ನು ಇಸ್ಲಾಂ ಧರ್ಮ ಸ್ವೀಕರಿಸಲು ಮತ್ತು ಮದುವೆಯಾಗಲು ಒತ್ತಾಯಿಸಲಾಗಿದೆ.

೨. ಈ ಹಿಂದೆ ಮುಸ್ಲಿಂ ಯುವಕರು ಶಾಲೆ ಮತ್ತು ಕಾಲೇಜುಗಳ ಪರಿಸರದಲ್ಲಿ ಸಕ್ರಿಯರಾಗಿದ್ದರು. ಈಗ ಅವರು ಬ್ಯೂಟಿ ಪಾರ್ಲರ್‌ಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಬ್ಯೂಟಿ ಪಾರ್ಲರ್‌ಗಳಿಗೆ ಬರುವ ಹಿಂದೂ ಮಹಿಳೆಯರನ್ನು ಭಾವನಾತ್ಮಕ ಬಲೆಗೆ ಸಿಲುಕಿಸಲಾಗುತ್ತಿದೆ. ಇಲ್ಲಿ ಹಿಂದೂ ಮಹಿಳೆಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

೩. ಈ ‘ಲವ್ ಜಿಹಾದ್’ ಕೃತ್ಯಗಳ ಹಿಂದೆ ನಿಷೇಧಿತ ಸಂಘಟನೆ ‘ಪಾಪುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ಕೈವಾಡವಿರಬಹುದು ಎಂದು ಅನೇಕ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

೪. ‘ಪಾರ್ಲರ್ ಜಿಹಾದ್’ನ ಈ ಜಾಲ ಮಥುರಾಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ಬಿಜ್ನೋರ್, ಸಹರಾನಪುರ್, ಅಮ್ರೋಹಾ, ರಾಂಪುರ ಮುಂತಾದ ಜಿಲ್ಲೆಗಳಿಗೂ ಹರಡಿದೆ. ನಿರ್ದಿಷ್ಟವಾಗಿ ಕ್ಷೌರಿಕರೆಂದು ಈ ಮುಸ್ಲಿಂ ಯುವಕರು ಧಾರ್ಮಿಕ ಸ್ಥಳಗಳ ಬಳಿ ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲಸ ಮಾಡುತ್ತಾ ಹಿಂದೂ ಮಹಿಳೆಯರ ಸಂಪರ್ಕಕ್ಕೆ ಬರುತ್ತಾರೆ.

೫. ‘ಲವ್ ಜಿಹಾದ್’ ವೈಯಕ್ತಿಕ ಪ್ರೇಮ ಪ್ರಕರಣವಲ್ಲ, ಅದು ಒಂದು ಪೂರ್ವಯೋಜಿತ ಷಡ್ಯಂತ್ರ. ಇದು ಒಂದು ಸಾಂಸ್ಕೃತಿಕ ಆಕ್ರಮಣ. ಇದರ ಉದ್ದೇಶ ಹಿಂದೂ ಹುಡುಗಿಯರನ್ನು ಅವರ ಧರ್ಮ ಮತ್ತು ಕುಟುಂಬದಿಂದ ಬೇರ್ಪಡಿಸುವುದು ಎಂದು ಸಾಧ್ವಿ ಸರಸ್ವತಿ ದೀದಿ ಹೇಳಿದ್ದಾರೆ.

೬. ಸಂತ ಸಮಾಜವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದು ‘ಲವ್ ಜಿಹಾದ್’ ಪ್ರಕರಣಗಳ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಬಿಜ್ನೋರ್ ಮತ್ತು ಸಹರಾನ್‌ಪುರದಲ್ಲಿ ಮುಸ್ಲಿಂ ಕ್ಷೌರಿಕರ ಗುಂಪು ಸಕ್ರಿಯ!

ಈ ಜಿಲ್ಲೆಗಳಿಂದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ, ಅಲ್ಲಿ ಮುಸ್ಲಿಂ ಯುವಕರು ನಕಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ಹಿಂದೂ ಹುಡುಗಿಯರೊಂದಿಗೆ ಸಂಬಂಧ ಬೆಳೆಸಿದ್ದಾರೆ. ಕ್ಷೌರಿಕ ಸಮುದಾಯದ ಹೆಸರಿನಲ್ಲಿ ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲಸ ಮಾಡುವುದರಿಂದ ಈ ಮುಸ್ಲಿಂ ಯುವಕರಿಗೆ ಮಹಿಳೆಯರೊಂದಿಗೆ ಸಂಬಂಧ ಬೆಳೆಸಲು ಅವಕಾಶ ಸಿಗುತ್ತದೆ ಮತ್ತು ಅವರು ಅದರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

‘ಪಾರ್ಲರ್ ಜಿಹಾದ್’ ಕುರಿತು ಮಾಧ್ಯಮಗಳು ಚರ್ಚೆ ನಡೆಸಬೇಕು!

ಹಿಂದೂ ನಾಯಕ ದಿನೇಶ ಫಲಾಹರಿ ಇವರು ‘ರಿಪಬ್ಲಿಕ್ ಭಾರತ್’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ‘ಪಾರ್ಲರ್ ಜಿಹಾದ್’ ಕೇವಲ ಧಾರ್ಮಿಕ ವಿಷಯವಲ್ಲ, ಅದು ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ರಚನೆಯ ಸ್ಥಿರತೆಗೆ ಸಂಬಂಧಿಸಿದೆ. ಮಾಧ್ಯಮಗಳು ಇದರ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಸಂಪಾದಕೀಯ ನಿಲುವು

ಇದರಿಂದ ಲವ್ ಜಿಹಾದಿಗಳು ಯಾವುದೇ ಕಾನೂನುಗಳನ್ನು ಲೆಕ್ಕಿಸುವುದಿಲ್ಲ ಎಂದು ತಿಳಿದುಬರುತ್ತದೆ. ಅವರು ವಿವಿಧ ತಂತ್ರಗಳನ್ನು ಬಳಸಿ ಹಿಂದೂ ಯುವತಿಯರನ್ನು ಮೋಸಗೊಳಿಸಿ ಅವರ ಜೀವನವನ್ನು ನಾಶಪಡಿಸುತ್ತಿದ್ದಾರೆ. ಆದ್ದರಿಂದ ಲವ್ ಜಿಹಾದ್ ವನ್ನು ನಿಜವಾಗಿಯೂ ತಡೆಯಬೇಕಾದರೆ, ತಪ್ಪಿತಸ್ಥರಿಗೆ ಈಗ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕಾನೂನು ರೂಪಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸರಕಾರ ಅರಿಯಬೇಕು!