ಮಹಾನಗರಪಾಲಿಕೆಯು ನೀಡಿದ ಎಚ್ಚರಿಕೆ ನಂತರ ಸ್ವತಃ ಮುಸಲ್ಮಾನರಿಂದಲೇ ತಮ್ಮ ಅಕ್ರಮ ಮದರಸಾ ನೆಲಸಮ !

ಹೀಗೆ ಇಡೀ ದೇಶದಲ್ಲಿ ನಡೆಯಬೇಕು !

ಗೋರಕಾಪುರ (ಉತ್ತರಪ್ರದೇಶ) – ಇಲ್ಲಿಯ ಕೋತವಾಲಿ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಘೋಷ ಕಂಪನಿ ವೃತ್ತದ ಬಳಿ ಕಟ್ಟಿದ್ದ ೪ ಅಂತಸ್ತಿನ ಮಸೀದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಸೀದಿ ಸಮಿತಿಗೆ ಸಂಬಂಧಿಸಿದ ಜನರು ಸ್ವತಃ ಅಕ್ರಮ ಅತಿಕ್ರಮಣ ತೆರವುಗೊಳಿಸಲು ಆರಂಭಿಸಿದ್ದಾರೆ. ಗೋರಕಪುರ ವಿಕಾಸ ಪ್ರಾಧೀಕರಣದಿಂದ ಅಕ್ರಮ ಕಾಮಗಾರಿ ತೆರವುಗೊಳಿಸುವುದಕ್ಕಾಗಿ ೧೫ ದಿನದ ಕಾಲಾವಧಿ ನೀಡಿತ್ತು. ‘೧೫ ದಿನದಲ್ಲಿ ಅತಿಕ್ರಮಣ ತೆರವುಗೊಳಿಸದಿದ್ದರೆ, ಪ್ರಾಧಿಕಾರಣ ಸ್ವತಃ ಅದನ್ನು ನೆಲಸಮ ಮಾಡುವುದು ಮತ್ತು ಅದರ ವೆಚ್ಚ ಮಸೀದಿಯಿಂದ ವಸೂಲಿ ಮಾಡಲಾಗುವುದು’, ಎಂದು ಎಚ್ಚರಿಕೆ ನೀಡಲಾಗಿತ್ತು.

೧೯೬೭ ರಲ್ಲಿ ಮೊದಲ ಬಾರಿಗೆ ಮಹಾನಗರ ಪಾಲಿಕೆಯಿಂದ ಮಸೀದಿ ತೆರವುಗೊಳಿಸಲು ಪ್ರಯತ್ನ ಮಾಡಲಾಗಿತ್ತು. ನಂತರ ಮಸೀದಿ ಸಮಿತಿಯವರು ನ್ಯಾಯಾಲಯಕ್ಕೆ ಮೊರೆ ಹೋದರು. ಅವರು ನ್ಯಾಯಾಲಯದಲ್ಲಿ, ಈ ಮಸೀದಿ ೧೦೦ ವರ್ಷಗಳಿಂದ ಈ ಜಾಗದಲ್ಲಿ ಇದೆ ಎಂದು ದಾವೆ ಮಾಡಿತು. ಅದರ ನಂತರ ನ್ಯಾಯಾಲಯವು ಮಸೀದಿ ಕಟ್ಟುವುದಕ್ಕಾಗಿ ೧ ಸಾವಿರದ ೨೮೪ ಚದರಡಿ ಜಾಗ ನೀಡುವ ಆದೇಶ ನೀಡಿತ್ತು.