ಕಾಶ್ಮೀರದಲ್ಲಿ ಭಯೋತ್ಪಾದಕರ ಅಡ್ಡೆಯಾಗಿದ್ದ ಮದರಸಾದ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿ !

‘ಜಮಾತ್-ಎ-ಇಸ್ಲಾಮಿ’ ಮುಖ್ಯಸ್ಥನ ಮನೆಯ ಮೇಲೂ ದಾಳಿ !

ಶ್ರೀನಗರ (ಜಮ್ಮು-ಕಾಶ್ಮೀರ) – ರಾಷ್ಟ್ರೀಯ ತನಿಖಾ ಸಂಸ್ಥೆಯು ಮೇ ೨೫ ರಂದು ‘ಜಮಾತ್-ಎ-ಇಸ್ಲಾಮಿ’ಗೆ ಸಂಬಂಧಿಸಿದ ಭಯೋತ್ಪಾದನಾ ಆರ್ಥಿಕ ನೆರವು ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಅನೇಕ ಭಾಗಗಳಲ್ಲಿ ದಾಳಿ ನಡೆಸಿತು. ಶೋಪಿಯಾನ್ ಮತ್ತು ಶ್ರೀನಗರದ ೩ ಸ್ಥಳಗಳಲ್ಲಿ ನಡೆಸಿದ ಈ ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದನಾ ಆರ್ಥಿಕ ನೆರವಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಉಪಕರಣಗಳನ್ನು ಜಪ್ತಿ ಮಾಡಲಾಯಿತು. ಶೋಪಿಯಾನ್‌ನಲ್ಲಿ ‘ಭಯೋತ್ಪಾದಕರ ಅಡ್ಡೆ’ಯಾಗಿದ್ದ ‘ದಾರುಲ್-ಉಲೂಮ್-ಸಿರಾಜುಲ್-ಉಲೂಮ್’ ಎಂಬ ಮದರಸಾದ ಮೇಲೆ ದಾಳಿ ನಡೆಸಲಾಯಿತು. ‘ಜಮಾತ್-ಎ-ಇಸ್ಲಾಮಿ’ ಮುಖ್ಯಸ್ಥ ಶಹಜಾದಾ ಔರಂಗಜೇಬ್ ಅವನ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು. ಹಾಗೆಯೇ ಶ್ರೀನಗರದಲ್ಲಿನ ‘ಜಮಿಯತ್-ಉಲ್-ಬನಾತ್’ ಎಂಬ ಹುಡುಗಿಯರ ಮದರಸಾದ ಮೇಲೂ ದಾಳಿ ನಡೆಸಲಾಯಿತು.

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ‘ಜಮಾತ್-ಎ-ಇಸ್ಲಾಮಿ’ ಮೇಲೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು, ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಬೆಂಬಲಿಸುವುದು ಮತ್ತು ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಮುಂತಾದ ಆರೋಪಗಳಿವೆ.

ಸಂಪಾದಕೀಯ ನಿಲುವು

ಮದರಸಾಗಳು ಭಯೋತ್ಪಾದನೆಯ ಕೇಂದ್ರಗಳಾಗಿರುವ ಕುರಿತು ಅನೇಕ ಪುರಾವೆಗಳು ಮುನ್ನೆಲೆಗೆ ಬಂದಿವೆ. ಆದ್ದರಿಂದ ದೇಶದಲ್ಲಿನ ಮದರಸಾಗಳನ್ನು ನಿಷೇಧಿಸುವುದೇ ರಾಷ್ಟ್ರಹಿತದ ದೃಷ್ಟಿಯಿಂದ ಯೋಗ್ಯವಾಗಿದೆ !