ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಮಹತ್ವ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈಶ್ವರನ ಆಧ್ಯಾತ್ಮಿಕ ಮಟ್ಟ ಶೇ. ೧೦೦ ಎಂದು ತಿಳಿದರೆ ಮತ್ತು ಜಡ ವಸ್ತುಗಳ ಆಧ್ಯಾತ್ಮಿಕ ಮಟ್ಟ ಶೇ. ೦ ಎಂದು ತಿಳಿದರೆ ಸಾಮಾನ್ಯ ಮನುಷ್ಯನ ಆಧ್ಯಾತ್ಮಿಕ ಮಟ್ಟ ಶೇ. ೨೦ ಇರುತ್ತದೆ. ಈ ಮಟ್ಟದ ವ್ಯಕ್ತಿ ಕೇವಲ ತನ್ನದೆ ಆದ ಸುಖ-ದುಃಖಗಳ ಬಗ್ಗೆ ಯೋಚಿಸುತ್ತಾನೆ. ಸಮಾಜದೊಂದಿಗೆ ಅವನ ಯಾವುದೇ ಕೊಡುಕೊಳ್ಳುವ ಇರುವುದಿಲ್ಲ ಮತ್ತು ‘ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ’ ಎಂದು ವ್ಯಕ್ತಿಯ ವಿಚಾರ ಇರುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೩೦ ರಷ್ಟು ಇದ್ದಾಗ, ಅವನು ಈಶ್ವರನ ಅಸ್ತಿತ್ವವನ್ನು ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಲು ಆರಂಭಿಸುತ್ತಾನೆ, ಹಾಗೆಯೇ ಸಾಧನೆ ಮತ್ತು ಸೇವೆ ಮಾಡುತ್ತಾನೆ. ಮಾಯೆಯ ಮತ್ತು ಈಶ್ವರಪ್ರಾಪ್ತಿಯ ಸೆಳೆತ ಸಮಾನವಾದಾಗ, ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೫೦ ರಷ್ಟು ಆಗುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇದ್ದಾಗ, ಆ ವ್ಯಕ್ತಿ ಮಾಯೆಯಿಂದ ದೂರವಾಗಲು ಆರಂಭಿಸುತ್ತಾನೆ. ಅವನ ಮನೋಲಯವಾಗಲು ಪ್ರಾರಂಭವಾಗುತ್ತದೆ ಮತ್ತು ವಿಶ್ವಮನಸ್ಸಿನ ವಿಚಾರ ಗ್ರಹಿಸಲು ಪ್ರಾರಂಭವಾಗುತ್ತದೆ. ಮರಣದ ನಂತರ, ಆ ವ್ಯಕ್ತಿ ಜನನ-ಮರಣ ಚಕ್ರದಿಂದ ಮುಕ್ತನಾಗಿ ಅವನಿಗೆ ಮಹರ್ಲೋಕದಲ್ಲಿ ಸ್ಥಾನ ಪ್ರಾಪ್ತವಾಗುತ್ತದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ