ಪ.ಪೂ. ಡಾಕ್ಟರರು ಸಿದ್ಧಿ ಬಳಸಿ ಸಾಧನೆ ವ್ಯಯ ಮಾಡಬಾರದೆಂದು ಪ್ರತ್ಯಕ್ಷ ಕಲಿಸುವುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

’೨೫ ವರ್ಷಗಳ ಹಿಂದೆ ನಾನು ಮುಂಬೈ ಸೇವಾಕೇಂದ್ರದಲ್ಲಿದ್ದಾಗ, ಒಮ್ಮೆ ಓರ್ವ ಸಾಧಕನಿಂದ ಬ್ಯಾಂಕ್ ’ಚೆಕ್‌ಬುಕ್’ ಕಳೆದುಹೋಗಿತ್ತು. ಅವನಿಗೆ ಅದನ್ನು ಎಲ್ಲಿಟ್ಟಿದ್ದೇನೆ ಎಂಬುದು ಏನೇ ಮಾಡಿದರೂ ನೆನಪಾಗುತ್ತಿರಲಿಲ್ಲ. ಪ.ಪೂ. ಡಾಕ್ಟರರು ಎಲ್ಲಾ ಸಾಧಕರಿಗೆ ಮತ್ತೊಮ್ಮೆ ಎಲ್ಲಾ ಕಡೆಗೆ ನೋಡಲು ಹೇಳಿದರು; ಆದರೆ ಆ ’ಚೆಕ್‌ಬುಕ್’ ಏನೇ ಮಾಡಿದರೂ ಸಿಗುತ್ತಿರಲಿಲ್ಲ. ಪ.ಪೂ. ಡಾಕ್ಟರರು ಕೊನೆಯ ಆಯ್ಕೆ ಎಂದು ಧ್ಯಾನದಲ್ಲಿ ಹೋಗಿ ಆ ’ಚೆಕ್‌ಬುಕ್’ ಎಲ್ಲಿ ಇಡಲಾಗಿದೆ ಎಂಬುದನ್ನು ಹೇಳಿದರು. ಅದರಂತೆ ನೋಡಿದಾಗ ಆ ’ಚೆಕ್‌ಬುಕ್’ ಸಿಕ್ಕಿತು. ಆಗ ಪ.ಪೂ. ಡಾಕ್ಟರರು ಎಲ್ಲಾ ಸಾಧಕರನ್ನು ಕರೆದರು ಮತ್ತು ”ನೀವು ವಸ್ತುವನ್ನು ಸರಿಯಾಗಿ ಇಡದ ಕಾರಣ ನನ್ನ ೩ ತಿಂಗಳ ಸಾಧನೆ ಒಂದು ’ಚೆಕ್‌ಬುಕ್’ ಹುಡುಕುವುದಕ್ಕೆ ವ್ಯಯ (ಖರ್ಚು) ಆಯಿತು. ಸಾಧನೆ ಈ ರೀತಿ ವ್ಯಯವಾಗದಂತೆ, ಎಲ್ಲಾ ಸಾಹಿತ್ಯ ಮತ್ತು ದಾಖಲೆಗಳನ್ನು ಆಯಾ ಸಮಯಕ್ಕೆ ನಿಗದಿತ ಸ್ಥಳದಲ್ಲೇ ಇಡಬೇಕು,” ಎಂದರು, – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
(ಪ.ಪೂ. ಡಾಕ್ಟರರು ಹೀಗೆ ೨೦ ರಿಂದ ೨೫ ವರ್ಷಗಳ ಹಿಂದೆ ಅಪರೂಪಕ್ಕೆ ಮಾಡಿದರು. ನಂತರ ಎಂದಿಗೂ ಮಾಡಲಿಲ್ಲ. – ಸಂಕಲನಕಾರರು)