ಇಂದೋರ್ (ಮಧ್ಯಪ್ರದೇಶ) – ಚಲನಚಿತ್ರ ನಿರ್ದೇಶಕ ಅನುರಾಗ ಕಶ್ಯಪ ಅವರು ಬ್ರಾಹ್ಮಣರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಇಲ್ಲಿನ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಶ್ಯಪ ಅವರು ಇಂದೋರ್ಗೆ ಬಂದಾಗ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ದೂರುದಾರರು ಸವಾಲು ಹಾಕಿದ್ದಾರೆ. ‘ಫುಲೆ’ ಚಿತ್ರದ ಪ್ರದರ್ಶನಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ತಡೆ ನೀಡಿದ ನಂತರ ಕಶ್ಯಪ್ ಅವರು ಬ್ರಾಹ್ಮಣರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಟೀಕೆ ವ್ಯಕ್ತವಾದ ನಂತರ ಅವರು ಕ್ಷಮೆಯಾಚಿಸಿದ್ದಾರೆ.