ತನ್ನ ಹಿಂದೂ ಮಾಲೀಕನ ಹೆಂಡತಿಯನ್ನೇ ಅಪಹರಿಸಿದ ಮುಸ್ಲಿಂ ನೌಕರ !

ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ) – ಇಲ್ಲಿನ ಛಪಿಯಾನಾ ಗ್ರಾಮದಲ್ಲಿ ಬಿರಿಯಾನಿ ಅಂಗಡಿ ನಡೆಸುವ ಹಿಂದೂ ಅಂಗಡಿಕಾರ ಕುಲದೀಪ್ ಸೈನಿ ಅವರಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ದಾನಿಶ್ ಎಂಬಾತ ಸೈನಿ ಅವರ ಪತ್ನಿಯನ್ನು ಅಪಹರಿಸಿದನು. ಈ ಘಟನೆ ಏಪ್ರಿಲ್ ೧೧ ರಂದು ನಡೆಯಿತು. ನಂತರ ಏಪ್ರಿಲ್ ೧೫ ರಂದು ದಾನಿಶ್ ಮಾಲೀಕನ ಹೆಂಡತಿಯನ್ನು ಬಿಡಲು ಬಂದನು. ಆ ಸಮಯದಲ್ಲಿ ಕುಲದೀಪ ಸೈನಿ ಮತ್ತು ಅವರ ತಂದೆ ದಾನಿಶನನ್ನು ಥಳಿಸಿದರು. ನಂತರ ಅವನನ್ನು ಚಿಕಿತ್ಸೆಗಾಗಿ ದೆಹಲಿಯ ಸಫದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ದಾನಿಶ್‌ನ ಕುಟುಂಬಸ್ಥರು ಸೈನಿ ಮತ್ತು ಅವರ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ನಂತರ ಪೊಲೀಸರು ಕುಲದೀಪ್ ಸೈನಿಯವರನ್ನು ವಶಕ್ಕೆ ತೆಗೆದುಕೊಂಡರು. (ದಂಗೆಗಳು ಅಥವಾ ಇತರ ಪ್ರಕರಣಗಳಲ್ಲಿ ಹಿಂದೂಗಳು ಮುಸ್ಲಿಮರ ವಿರುದ್ಧ ದೂರು ನೀಡಿದಾಗ ಅದರ ಮೇಲೆ ಕ್ರಮ ಕೈಗೊಳ್ಳಲು ವಿಳಂಬ ಮಾಡುವ ಪೊಲೀಸರು, ಮುಸ್ಲಿಮರು ದೂರು ನೀಡಿದಾಗ ಮಾತ್ರ ತಕ್ಷಣ ಅದನ್ನು ದಾಖಲಿಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ! – ಸಂಪಾದಕರು) ಆ ಮಹಿಳೆ ಸ್ವಂತ ಇಚ್ಛೆಯಿಂದ ದಾನಿಶ ಜೊತೆ ಓಡಿಹೋಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಸೈನಿ ಅವರ ಅಂಗಡಿಯಲ್ಲಿ ದಾನಿಶ ಕಳೆದ ೪ ತಿಂಗಳುಗಳಿಂದ ನೌಕರನಾಗಿ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಈ ಘಟನೆಯಿಂದ ‘ಇಂತಹವರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕೇ?’, ಎಂಬ ಪ್ರಶ್ನೆ ವ್ಯಾಪಾರಿಗಳ ಮನಸ್ಸಿನಲ್ಲಿ ಉಂಟಾದರೆ ತಪ್ಪೇನು?