Indian Student Killed In Canada : ಕೆನಡಾದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಗುಂಡು ತಗುಲಿ ಭಾರತೀಯ ವಿದ್ಯಾರ್ಥಿನಿ ಸಾವು

ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವ ಕೊಲೆ

ಒಟ್ಟಾವ (ಕೆನಡಾ) – ಕೆನಡಾದ ಒಂಟಾರಿಯೊದ ಹ್ಯಾಮಿಲ್ಟನ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ 21 ವರ್ಷದ ಹರಸಿಮರತ್ ರಂಧಾವಾ ಎಂಬ ಭಾರತೀಯ ವಿದ್ಯಾರ್ಥಿನಿಗೆ ಗುಂಡು ತಗುಲಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಳು. 2 ವಾಹನಗಳಿಂದ ಪರಸ್ಪರ ಗುಂಡಿನ ಚಕಮಕಿ ನಡೆಯುತ್ತಿದ್ದಾಗ, ಅವುಗಳಲ್ಲಿ ಒಂದು ಗುಂಡು ಹರಸಿಮರತ್ ಳಿಗೆ ತಗುಲಿತು. ಕಳೆದ 4 ತಿಂಗಳಲ್ಲಿ 4 ಭಾರತೀಯ ವಿದ್ಯಾರ್ಥಿಗಳು ಬೇರೆ ಬೇರೆ ಘಟನೆಗಳಲ್ಲಿ ಮೃತಪಟ್ಟಿದ್ದಾರೆ.

ಸದರಿ ಘಟನೆ ನಂತರ ಟೊರೊಂಟೊದಲ್ಲಿರುವ ಭಾರತೀಯ ವಾಣಿಜ್ಯ ರಾಯಭಾರ ಕಚೇರಿಯು ಸಂತಾಪ ವ್ಯಕ್ತಪಡಿಸಿ, ಹರಸಿಮರತ್ ಮುಗ್ಧಳಾಗಿದ್ದು ಗುಂಡಿನ ಚಕಮಕಿಗೂ ಆಕೆಗೂ ಯಾವುದೇ ಸಂಬಂಧವಿರಲಿಲ್ಲ. ನಾವು ಆಕೆಯ ಕುಟುಂಬದವರ ಸಂಪರ್ಕದಲ್ಲಿದ್ದೇವೆ. ಅವರಿಗೆ ಅಗತ್ಯವಿರುವ ಎಲ್ಲ ನೆರವನ್ನು ಮಾಡಲಾಗುತ್ತಿದೆ, ಎಂದು ಹೇಳಿದೆ.