ಅತ್ಯಧಿಕ ಮುಸಲ್ಮಾನರಿರುವ ಇಂಡೋನೇಷ್ಯಾದಲ್ಲಿ ಭವ್ಯ ಮುರುಗನ ದೇವಸ್ಥಾನ ಕಟ್ಟಿದ ಪ್ರಕರಣ

ಜಕಾರ್ತ (ಇಂಡೋನೇಷ್ಯಾ) – ಅತಿ ಹೆಚ್ಚು ಮುಸಲ್ಮಾನರಿರುವ ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಮುರುಗನ್ ದೇವರ ಭವ್ಯ ದೇವಸ್ಥಾನವನ್ನು ಇತ್ತೀಚೆಗೆ ಭಕ್ತರಿಗಾಗಿ ತೆರೆಯಲಾಗಿದೆ. ಈ ದೇವಸ್ಥಾನವು ಸುಮಾರು 4 ಸಾವಿರ ಚದರ ಮೀಟರ್ ವಿಸ್ತೀರ್ಣ ಪ್ರದೇಶವನ್ನು ವ್ಯಾಪಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದರು. ಇದಾದ ನಂತರ, ಈ ದೇವಸ್ಥಾನದ ಬಗ್ಗೆ
My remarks during Maha Kumbabhishegam of Shri Sanathana Dharma Aalayam in Jakarta, Indonesia. https://t.co/7LduaO6yaD
— Narendra Modi (@narendramodi) February 2, 2025
ಪಾಕಿಸ್ತಾನದಲ್ಲಿ ಟೀಕೆಯಾಗುತ್ತಿದೆ. “ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನವನ್ನು ಕಟ್ಟಿದರೆ, ಅದನ್ನು ಧ್ವಂಸಗೊಳಿಸಲಾಗುವುದು” ಎಂದು ಬೆದರಿಕೆ ಹಾಕುತ್ತಿದ್ದಾರೆ.
ಪಾಕಿಸ್ತಾನದ ಓರ್ವ ಮೌಲಾನಾ (ಇಸ್ಲಾಮಿಕ್ ವಿದ್ವಾಂಸ) ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಯಲ್ಲಿ ನಮಾಜು ಪಠಣದ ನಂತರದ ಭಾಷಣದ ಒಂದು ವೀಡಿಯೊ ತುಣುಕು ಪ್ರಸಾರ ಮಾಡಲಾಗಿದೆ. ಇದರಲ್ಲಿ, ಈ ಮೌಲಾನಾ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಹಿಂದೂ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ‘ಸ್ಮಾರ್ಟ್ ಸಿಟಿ’ ನಿರ್ಮಾಣವಾಗುತ್ತಿದ್ದು, ಅಲ್ಲಿಯೂ ಒಂದು ದೇವಸ್ಥಾನ ನಿರ್ಮಾಣವಾಗುತ್ತಿದೆ, ಮತ್ತು ಈಗ ಇಂಡೋನೇಷ್ಯಾದಲ್ಲಿಯೂ ಒಂದು ಭವ್ಯ ದೇವಸ್ಥಾನ ನಿರ್ಮಾಣವಾಗಿದೆ. ಇಂಡೋನೇಷ್ಯಾ ಮೊದಲು ಹಿಂದೂ ರಾಷ್ಟ್ರವಾಗಿತ್ತು; ಆದರೆ ಅದು ಈಗ ಇಸ್ಲಾಮಿಕ್ ರಾಷ್ಟ್ರವಾಗಿದೆ. ಅಲ್ಲಾಹನ ಧರ್ಮ ನಿಜವಾಗಿದೆ. ಅಲ್ಲಾಹನ ಧರ್ಮವೇ ಯೋಗ್ಯವಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮವಿರಲಿ ಅದು ತಪ್ಪು. ಕೇವಲ ಒಂದೇ ಧರ್ಮವಿದೆ, ಅದು ಇಸ್ಲಾಂ. (ಎಲ್ಲಿ ‘ವಸುಧೈವ ಕುಟುಂಬಕಂ’ (ಇಡೀ ಪೃಥ್ವಿ ಒಂದೇ ಕುಟುಂಬ) ಎಂದು ಹೇಳುವ ಹಿಂದೂ ಧರ್ಮ ಮತ್ತು ಎಲ್ಲಿಯ ‘ನಮ್ಮ ಧರ್ಮ ಮಾತ್ರ ಶ್ರೇಷ್ಠ’ ಎಂದು ಹೇಳುವ ಇತರ ಧರ್ಮಗಳು! – ಸಂಪಾದಕರು) ಪಾಕಿಸ್ತಾನದಲ್ಲಿ ದೇವಸ್ಥಾನಗಳನ್ನು ಕಟ್ಟಲು ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನ ಕಟ್ಟಿದರೆ ಜನ ಅದನ್ನು ಕೆಡವುತ್ತಾರೆ. ದೇವಸ್ಥಾನಗಳನ್ನು ಕೆಡವಬೇಕು. ಎಲ್ಲೆಲ್ಲಿ ದೇವಸ್ಥಾನಗಳಿವೆಯೋ, ಅವುಗಳನ್ನು ಕೆಡವಬೇಕು ಎಂದು ಹೇಳಿದ್ದಾನೆ.
ಸಂಪಾದಕೀಯ ನಿಲುವು
|
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!