
‘ಆಧ್ಯಾತ್ಮಿಕ ಉಪಾಯವನ್ನು ಮಾಡುವಾಗ ಮೊದಲು ನಮ್ಮ ದೇಹದ ಮೇಲಿನ ಆವರಣವನ್ನು ತೆಗೆಯುವುದು ಮಹತ್ವದ್ದಾಗಿರುತ್ತದೆ; ಏಕೆಂದರೆ ಅದನ್ನು ತೆಗೆಯದಿದ್ದರೆ ಉಪಾಯಗಳ ಸಮಯದಲ್ಲಿ ಈಶ್ವರೀ ಶಕ್ತಿಯನ್ನು ಪರಿಣಾಮಕಾರಿಯಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಮುದ್ರೆಯನ್ನು ಮಾಡುವಾಗ ನ್ಯಾಸವಿದ್ದರೆ ಅದನ್ನು ಮಾಡುವುದೂ ಆವಶ್ಯಕವಿರುತ್ತದೆ; ಏಕೆಂದರೆ ನ್ಯಾಸದಿಂದ ಉಪಾಯದ ಸಮಯದಲ್ಲಿ ಗ್ರಹಿಸಲ್ಪಟ್ಟ ಈಶ್ವರೀ ಶಕ್ತಿಯು ದೇಹದಲ್ಲಿರುವ ತೊಂದರೆಯಿರುವ ಮೂಲಸ್ಥಾನಕ್ಕೆ ಪರಿಣಾಮಕಾರಿಯಾಗಿ ಪ್ರಕ್ಷೇಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತೊಂದರೆಯು ಸ್ವಲ್ಪ ಸಮಯದಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ.
ಕೆಲವೊಮ್ಮೆ ವ್ಯಕ್ತಿಗೆ ಅತೀ ದಣಿವು ಆಗಿರುವುದರಿಂದ ಅಥವಾ ಕೈ ನೋಯುತ್ತಿರುವುದರಿಂದ ಆವರಣ ತೆಗೆಯಲು ಅಥವಾ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಪ್ರವಾಸವನ್ನು ಮಾಡುವಾಗ, ಯಾವುದಾದರೊಂದು ಕಚೇರಿಗೆ ಹೋದನಂತರ ಅಲ್ಲಿ ನಾಮಜಪವನ್ನು ಮಾಡಲು ಸ್ವಲ್ಪ ಸಮಯ ಸಿಕ್ಕಿದರೂ ಅಂತಹ ಸ್ಥಳದಲ್ಲಿಯೂ ಹೆಚ್ಚಾಗಿ ಆವರಣ ತೆಗೆಯಲು ಮತ್ತು ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಸೂಕ್ಷ್ಮದಿಂದ ಆವರಣ ತೆಗೆಯುವುದು ಮತ್ತು ನ್ಯಾಸವನ್ನು ಮಾಡಬೇಕು. ಈ ಎರಡೂ ಕ್ರಿಯೆಗಳು ಸೂಕ್ಷ್ಮದಿಂದ ಮಾಡುವುದು, ಅಂದರೆ ಈ ಕ್ರಿಯೆಯನ್ನು ನಾವು ಸ್ಥೂಲದಿಂದ ಹೇಗೆ ಮಾಡುತ್ತೇವೆಯೋ, ಹಾಗೆಯೇ ಮನಸ್ಸಿನಿಂದ ಮಾಡಬೇಕು. ‘ನಾವು ಈ ಕ್ರಿಯೆಯನ್ನು ಸ್ಥೂಲದಿಂದ ಮಾಡಿದ ನಂತರ ಎಷ್ಟು ಲಾಭವಾಗುತ್ತದೆಯೋ, ಸೂಕ್ಷ್ಮದಿಂದ ಮಾಡುವುದರಿಂದಲೂ ಅಷ್ಟೇ ಲಾಭವಾಗುತ್ತದೆ’, ಹೀಗೆ ನಾನು ಅನೇಕಬಾರಿ ಅನುಭವಿಸಿದ್ದೇನೆ.
‘ಗುರುದೇವರು ನಮಗೆ ಸೂಕ್ಷ್ಮದಿಂದ ಉಪಾಯದ ಮಹತ್ವವನ್ನು ಹೇಳಿ ಮತ್ತು ಕಲಿಸಿ ನಮ್ಮ ಮೇಲೆ ಎಷ್ಟು ಕೃಪೆಯನ್ನು ಮಾಡಿದ್ದಾರೆ’, ಎಂಬ ಕೃತಜ್ಞತಾಭಾವವನ್ನು ಮನಸ್ಸಿನಲ್ಲಿಟ್ಟು ಉಪಾಯವನ್ನು ಮಾಡಬೇಕು.’
– (ಪೂ.) ಸಂದೀಪ ಆಳಶಿ (೨.೧೧.೨೦೨೪)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !