
‘ಆಧ್ಯಾತ್ಮಿಕ ಉಪಾಯವನ್ನು ಮಾಡುವಾಗ ಮೊದಲು ನಮ್ಮ ದೇಹದ ಮೇಲಿನ ಆವರಣವನ್ನು ತೆಗೆಯುವುದು ಮಹತ್ವದ್ದಾಗಿರುತ್ತದೆ; ಏಕೆಂದರೆ ಅದನ್ನು ತೆಗೆಯದಿದ್ದರೆ ಉಪಾಯಗಳ ಸಮಯದಲ್ಲಿ ಈಶ್ವರೀ ಶಕ್ತಿಯನ್ನು ಪರಿಣಾಮಕಾರಿಯಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಮುದ್ರೆಯನ್ನು ಮಾಡುವಾಗ ನ್ಯಾಸವಿದ್ದರೆ ಅದನ್ನು ಮಾಡುವುದೂ ಆವಶ್ಯಕವಿರುತ್ತದೆ; ಏಕೆಂದರೆ ನ್ಯಾಸದಿಂದ ಉಪಾಯದ ಸಮಯದಲ್ಲಿ ಗ್ರಹಿಸಲ್ಪಟ್ಟ ಈಶ್ವರೀ ಶಕ್ತಿಯು ದೇಹದಲ್ಲಿರುವ ತೊಂದರೆಯಿರುವ ಮೂಲಸ್ಥಾನಕ್ಕೆ ಪರಿಣಾಮಕಾರಿಯಾಗಿ ಪ್ರಕ್ಷೇಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತೊಂದರೆಯು ಸ್ವಲ್ಪ ಸಮಯದಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ.
ಕೆಲವೊಮ್ಮೆ ವ್ಯಕ್ತಿಗೆ ಅತೀ ದಣಿವು ಆಗಿರುವುದರಿಂದ ಅಥವಾ ಕೈ ನೋಯುತ್ತಿರುವುದರಿಂದ ಆವರಣ ತೆಗೆಯಲು ಅಥವಾ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಪ್ರವಾಸವನ್ನು ಮಾಡುವಾಗ, ಯಾವುದಾದರೊಂದು ಕಚೇರಿಗೆ ಹೋದನಂತರ ಅಲ್ಲಿ ನಾಮಜಪವನ್ನು ಮಾಡಲು ಸ್ವಲ್ಪ ಸಮಯ ಸಿಕ್ಕಿದರೂ ಅಂತಹ ಸ್ಥಳದಲ್ಲಿಯೂ ಹೆಚ್ಚಾಗಿ ಆವರಣ ತೆಗೆಯಲು ಮತ್ತು ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಸೂಕ್ಷ್ಮದಿಂದ ಆವರಣ ತೆಗೆಯುವುದು ಮತ್ತು ನ್ಯಾಸವನ್ನು ಮಾಡಬೇಕು. ಈ ಎರಡೂ ಕ್ರಿಯೆಗಳು ಸೂಕ್ಷ್ಮದಿಂದ ಮಾಡುವುದು, ಅಂದರೆ ಈ ಕ್ರಿಯೆಯನ್ನು ನಾವು ಸ್ಥೂಲದಿಂದ ಹೇಗೆ ಮಾಡುತ್ತೇವೆಯೋ, ಹಾಗೆಯೇ ಮನಸ್ಸಿನಿಂದ ಮಾಡಬೇಕು. ‘ನಾವು ಈ ಕ್ರಿಯೆಯನ್ನು ಸ್ಥೂಲದಿಂದ ಮಾಡಿದ ನಂತರ ಎಷ್ಟು ಲಾಭವಾಗುತ್ತದೆಯೋ, ಸೂಕ್ಷ್ಮದಿಂದ ಮಾಡುವುದರಿಂದಲೂ ಅಷ್ಟೇ ಲಾಭವಾಗುತ್ತದೆ’, ಹೀಗೆ ನಾನು ಅನೇಕಬಾರಿ ಅನುಭವಿಸಿದ್ದೇನೆ.
‘ಗುರುದೇವರು ನಮಗೆ ಸೂಕ್ಷ್ಮದಿಂದ ಉಪಾಯದ ಮಹತ್ವವನ್ನು ಹೇಳಿ ಮತ್ತು ಕಲಿಸಿ ನಮ್ಮ ಮೇಲೆ ಎಷ್ಟು ಕೃಪೆಯನ್ನು ಮಾಡಿದ್ದಾರೆ’, ಎಂಬ ಕೃತಜ್ಞತಾಭಾವವನ್ನು ಮನಸ್ಸಿನಲ್ಲಿಟ್ಟು ಉಪಾಯವನ್ನು ಮಾಡಬೇಕು.’
– (ಪೂ.) ಸಂದೀಪ ಆಳಶಿ (೨.೧೧.೨೦೨೪)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು