ಸ್ವಯಂಸೇವಕ ಸಂಘದ ಮೇಲೆ ದಾಳಿ ಮಾಡಿದ್ದ ನಸೀಬ್ ಚೌಧರಿಯ ಅಕ್ರಮ ಮನೆ ನೆಲಸಮ !

ಜೈಪುರ (ರಾಜಸ್ಥಾನ) – ಇಲ್ಲಿನ ಶಿವನ ದೇವಾಲಯದಲ್ಲಿ ಸ್ವಯಂ ಸೇವಕ ಸಂಘವು ಶರದ್ ಪೂರ್ಣಿಮಾ ಆಚರಿಸುತ್ತಿದ್ದಾಗ ಪಕ್ಕದಲ್ಲಿ ವಾಸಿಸುತ್ತಿದ್ದ ನಸೀಬ್ ಚೌಧರಿ ತನ್ನ ಮಕ್ಕಳೊಂದಿಗೆ ಸ್ವಯಂಸೇವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದನು. ಈ ದಾಳಿಯಲ್ಲಿ 10 ಸ್ವಯಂಸೇವಕರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಈಗ ಆಡಳಿತವು ನಸೀಬ್ ಚೌಧರಿಯ ಅಕ್ರಮ ಮನೆ ಮೇಲೆ ಕ್ರಮ ಕೈಗೊಂಡು ನೆಲಸಮಗೊಳಿಸಿದೆ. ಇದಕ್ಕೂ ಮೊದಲು ಅವನಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಸಂಪಾದಕೀಯ ನಿಲುವು

ಕೇವಲ ಮನೆ ಕೆಡವಿ ನಿಲ್ಲಿಸಬಾರದು, ಬದಲಾಗಿ ಅಂತಹ ಮನೆಗಳನ್ನು ಮತ್ತೆ ನಿರ್ಮಿಸದಂತೆ ನೋಡಿಕೊಳ್ಳಬೇಕು, ಇದಕ್ಕಾಗಿ ಸರಕಾರವೇ ಪ್ರಯತ್ನ ಮಾಡಬೇಕು ! ಹಾಗೆಯೇ ಇತರೆ ಅತಿಕ್ರಮಣಗಳನ್ನು ಸರಕಾರವೇ ನೆಲಸಮಗೊಳಿಸಬೇಕು !