ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಸುಶೀಲ ಕುಮಾರ ಶಿಂದೆ ಅವರಿಗೆ ಈಗ ಜ್ಞಾನೋದಯ

ಮುಂಬಯಿ – ನಾನು ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಸಬಾರದಾಗಿತ್ತು. ನನಗೆ ನನ್ನ ಪಕ್ಷವೇ ಕೇಸರಿ ಭಯೋತ್ಪಾದನೆಯಾಗುತ್ತಿದೆಯೆಂದು ಹೇಳಿತ್ತು. ಪಕ್ಷದ ಹೇಳಿದ್ದರಿಂದಲೇ ನಾನು ಆ ಶಬ್ದವನ್ನು ಉಪಯೋಗಿಸಿದ್ದೆನು; ಆದರೆ ನಾನು ಅದನ್ನು ಏತಕ್ಕೆ ಉಪಯೋಗಿಸಿದೆನು ಎನ್ನುವುದು ನನಗೂ ತಿಳಿದಿಲ್ಲ. ಆ ಶಬ್ದ ತಪ್ಪಾಗಿತ್ತು. ಅದು ಆ ಪಕ್ಷದ ಸಿದ್ಧಾಂತವಾಗಿರುತ್ತದೆ. ಬಿಳಿ, ಕೆಂಪು ಅಥವಾ ಕೇಸರಿ ಹೀಗೆ ಯಾವುದೇ ಭಯೋತ್ಪಾದಕತೆ ಇರುವುದಿಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ಗೃಹಸಚಿವ ಸುಶೀಲಕುಮಾರ ಶಿಂದೆಯವರು ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಆಗಿನ ಯು.ಪಿ.ಎ. ಸರಕಾರದ ಅವಧಿಯಲ್ಲಿ, ‘ಕೇಸರಿ ಭಯೋತ್ಪಾದನೆ’ ಅಸ್ತಿತ್ವದಲ್ಲಿದೆ ಎಂದು ಹೇಳುತ್ತಾ ಅವರು ಟೀಕಿಸಿದ್ದರು. (ಇಸ್ಲಾಮಿಕ್ ಭಯೋತ್ಪಾದನೆ ಅಸ್ತಿತ್ವದಲ್ಲಿದ್ದರೂ, ಆ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ‘ಚಕಾರ’ ಎತ್ತುವುದಿಲ್ಲ, ಎಂಬುದು ಗಮನಿಸಬೇಕು ! – ಸಂಪಾದಕರು) ಅವರು ಇತ್ತೀಚೆಗೆ ಈ ವಿಷಯದಲ್ಲಿ ಸಂದರ್ಶನ ನೀಡಿದ್ದಾರೆ. ಅದು ಇನ್ನೂ ಪ್ರಸಾರವಾಗಬೇಕಾಗಿದೆ; ಆದರೆ ಅದರಲ್ಲಿನ ಕೆಲವು ಕ್ಲಿಪ್ಸ (ತುಣುಕು) ಪ್ರಸಾರವಾಗಿದ್ದು, ಅದರಲ್ಲಿ ಶಿಂದೆಯವರು ಮೇಲಿನ ಹೇಳಿಕೆ ನೀಡಿರುವುದು ಕಂಡು ಬಂದಿದೆ.
‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಯಾವಾಗ ಉಚ್ಚರಿಸಿದ್ದರು ?
ಜನವರಿ 2013 ರಲ್ಲಿ, ಜೈಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಸುಶೀಲಕುಮಾರ ಶಿಂದೆ ಅವರು ದೇಶದಲ್ಲಿ ನಡೆದ ಭಯೋತ್ಪಾದನೆಯ ಪ್ರಕರಣಗಳಲ್ಲಿ ಕೆಲವು ಹಿಂದೂ ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡಿ ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಸಿದ್ದರು ಈ ಶಬ್ದವನ್ನು ಅವರು ಕಾಂಗ್ರೆಸ್ಸಿನ ಚಿಂತನ ಶಿಬಿರದ ಕೊನೆಯ ದಿನದ ಭಾಷಣದಲ್ಲಿ ಬಳಸಿದ್ದರು. `ಕೆಲವು ಹಿಂದುತ್ವವಾದಿ ಸಂಘಟನೆಗಳು ಭಯೋತ್ಪಾದನೆಯನ್ನು ಹರಡಲು ತರಬೇತಿ ಶಿಬಿರಗಳನ್ನು ನಡೆಸುತ್ತಿದೆಯೆಂದು ಗೃಹಸಚಿವಾಲಯ ತನಿಖೆಯಿಂದ ಬಹಿರಂಗವಾಗಿದೆ’ ಎಂದು ಅವರು ಹೇಳಿದ್ದರು.
ಸಂಪಾದಕೀಯ ನಿಲುವು
|
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath