|

ತಿರುವನಂತಪುರಂ (ಕೇರಳ) – ದೇವಸ್ಥಾನ ಇದು ಮುಖ್ಯವಾಗಿ ಪ್ರಾರ್ಥನಾ ಸ್ಥಳಗಳಾಗಿವೆ. ಅಧಾರ್ಮಿಕ ಚಲನಚಿತ್ರಗಳ ಚಿತ್ರೀಕರಣದ ಸ್ಥಳಗಳಾಗಲು ಸಾಧ್ಯವಿಲ್ಲ, ಎಂದು ಮಹತ್ವಪೂರ್ಣ ನಿರೀಕ್ಷಣೆಯನ್ನು ಕೇರಳ ಉಚ್ಚ ನ್ಯಾಯಾಲಯದಿಂದ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಚಲನಚಿತ್ರಗಳ ಚಿತ್ರೀಕರಣ ನಡೆಸುವ ಅನುಮತಿ ಹೇಗೆ ನೀಡಲಾಯಿತು, ಇದರ ಸ್ಪಷ್ಟನೆ ಕೂಡ ನ್ಯಾಯಾಲಯವು ಕೇರಳ ಸರಕಾರ ಮತ್ತು ಕೋಚಿನ ದೇವಸ್ಥಾನ ಬೋರ್ಡಿಗೆ ನೀಡಲು ಹೇಳಿದೆ. ತ್ರಿಪುನಿಥುರಾ ಶ್ರೀ ಪೂರ್ಣನಾಥಾಯಸ ದೇವಸ್ಥಾನದಲ್ಲಿ ಚಲನಚಿತ್ರದ ಚಿತ್ರೀಕರಣಕ್ಕೆ ನೀಡಿರುವ ಅನುಮತಿಗೆ ಸವಾಲು ಹಾಕುವ ಅರ್ಜಿ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಅದರ ಬಗ್ಗೆ ನ್ಯಾಯಾಲಯವು ಮೇಲಿನ ಟಿಪ್ಪಣಿ ನೀಡಿದೆ.
೧. ಈ ಅರ್ಜಿಯಲ್ಲಿ ದೇವಸ್ಥಾನ ಪರಿಸರದಲ್ಲಿ ಆಧಾರ್ಮಿಕ ಚಲನಚಿತ್ರ ಚಿತ್ರಿಕರಣಕ್ಕೆ ಅನುಮತಿ ನೀಡಿರುವ ಕುರಿತು ಪ್ರಶ್ನೆ ಕೇಳಲಾಗಿದೆ. ಅರ್ಜಿದಾರರು ನಡೆಸಿರುವ ಯುಕ್ತಿವಾದದಲ್ಲಿ, ಇಂತಹ ಕೃತಿಗಳಿಂದ ಕೇವಲ ಉಪಾಸನೆಯ ಪಾವಿತ್ರ್ಯದ ಅವಮಾನ ಆಗಿದೆ ಎಂದು ಅಲ್ಲ, ಬದಲಾಗಿ ಆಧ್ಯಾತ್ಮಿಕ ಪದ್ಧತಿಗಳಿಗಾಗಿ ಈ ಸ್ಥಳಗಳಿಗೆ ಭೇಟಿ ನೀಡುವ ಶ್ರದ್ಧಾವಂತರ ಭಾವನೆಗೆ ಕೂಡ ನೋವು ಉಂಟಾಗುವ ಅಪಾಯ ಇರುತ್ತದೆ.
೨. ವ್ಯಾಪಾರಿ ಚಿತ್ರೀಕರಣದಿಂದ ಆಗುವ ಅಗೌರವದ ಕಡೆಗೆ ಗಮನಹರಿಸುತ್ತಾ ನ್ಯಾಯಾಲಯವು ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆ ಕಾಪಾಡುವ ಮಹತ್ವದ ಬಗ್ಗೆ ಪುನರುಚ್ಚರಿಸಿತು.
೩. ಅರ್ಜಿಯಲ್ಲಿ ವಿಶಿಷ್ಟ ಘಟನೆಗಳ ಮೇಲೆ ಬೆಳಕು ಚೆಲ್ಲಲಾಯಿತು, ಅದರಲ್ಲಿ ಅವರು ಹಬ್ಬ ಹರಿದಿನದ ಸಮಯದಲ್ಲಿ ಚಲನಚಿತ್ರದಲ್ಲಿ ಕೆಲಸ ಮಾಡುವ ಕೆಲವು ಕಲಾವಿದರು ಮದ್ಯಪಾನ ಮಾಡಿ ಮತ್ತು ಚಪ್ಪಲಿ ಧರಿಸಿ ದೇವಸ್ಥಾನಗಳಲ್ಲಿ ಪ್ರವೇಶ ಮಾಡಿರುವ ಸಮಾಚಾರಗಳು ಇವೆ.
ಸಂಪಾದಕೀಯ ನಿಲುವುಹಿಂದುಗಳ ದೇವಸ್ಥಾನದ ಸರಕಾರಿಕರಣದಿಂದ ಇಂತಹ ದುಷ್ಪರಿಣಾಮಗಳ ಆಗುತ್ತವೆ. ಇದಕ್ಕಾಗಿ ಈಗ ಎಲ್ಲಾ ಕಡೆಗೆ ಹಿಂದುಗಳು ಸಂಘಟಿತರಾಗಿ ವಿರೋಧಿಸಬೇಕು ಮತ್ತು ದೇವಸ್ಥಾನಗಳು ಒಳ್ಳೆಯ ಹಿಂದೂ ಭಕ್ತರ ವಶಕ್ಕೆ ನೀಡುವುದಕ್ಕಾಗಿ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ