
ಮುಂಬಯಿ – ಮಹಾರಾಷ್ಟ್ರ ಸರಕಾರವು ಸ್ಥಳೀಯ ಗೋವುಗಳನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸಲು ಮಾನ್ಯತೆ ನೀಡಿದೆ. ಮಹಾರಾಷ್ಟ್ರ ಸರಕಾರವು ಸಪ್ಟೆಂಬರ 30 ರಂದು ಈ ವಿಷಯದ ಆದೇಶ ಹೊರಡಿಸಿದೆ.

ದೇಶಿ ಹಸುಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವೈದಿಕ ಕಾಲದಿಂದ ಇರುವ ಸ್ಥಾನ, ದೇಶಿ ಗೋವಿನ ಹಾಲು ಮಾನವನ ಆಹಾರದಲ್ಲಿ ಉಪಯುಕ್ತತೆ, ಆಯುರ್ವೇದ ಚಿಕಿತ್ಸಪದ್ಧತಿ, ಪಂಚಗವ್ಯ ಉಪಚಾರಪದ್ಧತಿ ಹಾಗೆಯೇ ಗೋವಿನ ಸೆಗಣಿ ಮತ್ತು ಗೋಮೂತ್ರ ಇವುಗಳ ಸಾವಯವ ಗೊಬ್ಬರದ ಮಹತ್ವದ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಗೋವನ್ನು `ರಾಜ್ಯಮಾತೆ- ಗೋಮಾತೆ’ ಎಂದು ಘೋಷಿಸಲಾಗಿದೆಯೆಂದು ಸರಕಾರದ ಆದೇಶದಲ್ಲಿ ನಮೂದಿಸಿದೆ.
Maharashtra Government Declares #DesiCows as ‘Rajya Mata’! 🕉
A historic move to honor our sacred cows! 🙏
While declaring the cow as ‘Rajyamata-Gomata’, the government should also take strict steps to prevent cow slaughter !
महाराष्ट्र सरकार I राज्यमाता #EknathShinde… pic.twitter.com/vp34QVo3Zr
— Sanatan Prabhat (@SanatanPrabhat) September 30, 2024
ಪ್ರಾಚೀನ ಕಾಲದಿಂದಲೂ, ಮಾನವನ ದಿನನಿತ್ಯದ ಜೀವನದಲ್ಲಿ ಗೋವಿನ ಅಸಾಧಾರಣ ಮಹತ್ವವಿದೆ. ವೈದಿಕ ಕಾಲದಿಂದಲೂ ಗೋವಿನ ಧಾರ್ಮಿಕ, ವೈಜ್ಞಾನಿಕ ಮತ್ತು ಆರ್ಥಿಕ ಮಹತ್ವವನ್ನು ಗಮನಿಸಿ, ಅದನ್ನು `ಕಾಮಧೇನು’ ಎಂದು ಸಂಬೋಧಿಸಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಿವಿಧ ದೇಶಿ ಜಾತಿಯ ಗೋವುಗಳು ಕಂಡು ಬರುತ್ತವೆ. ಮರಾಠವಾಡಾದಲ್ಲಿ `ದೇವಣಿ’ `ಲಾಲಕಂಧಾರಿ’ ಪಶ್ಚಿಮ ಮಹಾರಾಷ್ಟ್ರದಲ್ಲಿ `ಖಿಲ್ಲಾರ’ ಉತ್ತರ ಮಹಾರಾಷ್ಟ್ರದಲ್ಲಿ `ಡಾಂಗಿ’ ಹಾಗೂ ವಿದರ್ಭದಲ್ಲಿ `ಗವಳಾವೂ’ ಈ ಪ್ರಕಾರದ ದೇಶಿ ಗೋವುಗಳು ಕಂಡು ಬರುತ್ತವೆ. ಮನುಷ್ಯರಿಗೆ ಆಹಾರದಲ್ಲಿ ಪೌಷ್ಟಿಕತೆಯ ದೃಷ್ಟಿಯಿಂದ ದೇಶಿ ಹಸುವಿನ ಹಾಲು ಮಹತ್ವವಿದೆ. ಇದರಿಂದ ಹಸುವಿನ ಹಾಲನ್ನು `ಸಂಪೂರ್ಣ ಆಹಾರ’ ಎಂದು ಹೇಳಲಾಗುತ್ತದೆ; ಆದರೆ ದಿನದಿಂದ ದಿನಕ್ಕೆ ದೇಶಿ ಹಸುವಿನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದರಿಂದ ಪಾಲನೆ ಪೋಷಣೆಗೆ ಪ್ರೇರೇಪಿಸಲು ದೇಶಿ ಹಸುವನ್ನು `ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸಲಾಗಿದೆ ಎಂದು ಸರಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಂಪಾದಕೀಯ ನಿಲುವುಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸುವಾಗ ಗೋಹತ್ಯೆ ತಡೆಯಲು ಸರಕಾರವು ಕಠಿಣ ಕ್ರಮಗಳನ್ನು ಕೈಕೊಳ್ಳಬೇಕು ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ