ಸಾಧಕರೇ, ಅಪಘಾತಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ನಾಮಜಪಾದಿ ಉಪಾಯ ಮಾಡಿರಿ !

ಸಾಧಕರಿಗೆ ಸೂಚನೆ

(ಸದ್ಗುರು) ಡಾ. ಮುಕುಲ ಗಾಡಗೀಳ

‘ಸನಾತನದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯ ಹೆಚ್ಚುತ್ತಾ ಹೋಗುತ್ತಿದೆ, ಜೊತೆಗೆ ಈ ಕಾರ್ಯದಲ್ಲಿ ಅಡಚಣೆಯನ್ನುಂಟು ಮಾಡಲು ಕೆಟ್ಟ ಶಕ್ತಿಗಳು ಸಹ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿವೆ. ಈ ಕೆಟ್ಟ ಶಕ್ತಿಗಳು ಸಾಧನೆ ಮತ್ತು ಸಮಷ್ಟಿ ಸೇವೆ ಮಾಡುವ ಸಾಧಕರಿಗೆ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಈ ಮೂರೂ ಸ್ತರಗಳಲ್ಲಿ ತೊಂದರೆ ಕೊಡಲು ಪ್ರಯತ್ನಿಸುತ್ತಿವೆ. ಈ ತೊಂದರೆಗಳಲ್ಲಿನ ಒಂದು ವಿಧಾನವೆಂದರೆ, ಕಳೆದ ಕೆಲವು ದಿನಗಳಿಂದ ಸಾಧಕರಿಗೆ ಅಪಘಾತವಾಗುವ ಪ್ರಮಾಣದಲ್ಲಾಗುತ್ತಿರುವ ಹೆಚ್ಚಳ, ಉದಾ. ವಾಹನ ನಡೆಸುವಾಗ ಜಾರಿ ಬೀಳುವುದರಿಂದ ಪೆಟ್ಟಾಗುವುದು, ಪಾಯಖಾನೆಯಲ್ಲಿ ಅಥವಾ ಇತರ ಕಡೆಗಳಲ್ಲಿ ಕಾಲು ಜಾರಿ ಬಿದ್ದು ಅಸ್ಥಿಭಂಗವಾಗುವುದು ಅಥವಾ ಗಾಯಗೊಳ್ಳುವುದು ಇತ್ಯಾದಿ ತೊಂದರೆಗಳಿಂದ ಸಾಧಕರಿಗೆ ಅನೇಕ ದಿನಗಳ ವರೆಗೆ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅವರಿಗೆ ಗುರುಕಾರ್ಯ ಮಾಡಲು ಅಡಚಣೆಗಳು ಬರುತ್ತಿವೆ. ಕೆಟ್ಟಶಕ್ತಿಗಳು ಸಾಧಕರಿಗೆ ಎಷ್ಟೇ ತೊಂದರೆ ಕೊಡಲು ಪ್ರಯತ್ನಿಸಿದರೂ ಕೆಟ್ಟ ಶಕ್ತಿಗಳಿಗಿಂತ ಈಶ್ವರನು ಅನಂತ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರುವುದರಿಂದ ಅವನು ಸಾಧಕರನ್ನು ರಕ್ಷಣೆ ಮಾಡಿಯೇ ಮಾಡುತ್ತಾನೆ. ಸಾಧಕರು ಮಾತ್ರ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಸಾಧನೆ ಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ.

ವಿವಿಧ ಪ್ರಕಾರದ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಸಾಧಕರು ಉಪಾಸ್ಯ ದೇವತೆಯಲ್ಲಿ ಪ್ರಾರ್ಥನೆ ಮಾಡಬೇಕು ಹಾಗೂ ವೈಯಕ್ತಿಕ ನಾಮಜಪದ ಜೊತೆಗೆ ಈ ಮುಂದಿನ ನಾಮಜಪವನ್ನೂ ಮಾಡಬೇಕು.

೧. ನಾಮಜಪ : ಮಹಾಶೂನ್ಯ
೨. ನ್ಯಾಸ : ತುಟಿಯ ಎದುರಿಗೆ ೧-೨ ಸೆಂ.ಮೀ. ಅಂತರದಲ್ಲಿ ಬಲಗೈಯ ಅಂಗೈಯನ್ನು ಹಿಡಿಯುವುದು
೩. ಅವಧಿ : ೬.೯.೨೦೨೪ ರ ವರೆಗೆ ಪ್ರತಿದಿನ ೧ ಗಂಟೆ
ಎಲ್ಲ ಸಾಧಕರು ಈ ಮೇಲಿನ ನಾಮಜಪವನ್ನು ೨ ತಿಂಗಳು ಪ್ರತಿದಿನ ೧ ಗಂಟೆ ಮಾಡಿದ ನಂತರ ಅದರ ಪರಿಣಾಮದ ವರದಿಯನ್ನು ತೆಗೆದುಕೊಳ್ಳಲಾಗುವುದು ಹಾಗೂ ‘ನಂತರ ಅದನ್ನೇ ಮುಂದುವರಿಸಬೇಕೇ ಅಥವಾ ಬದಲಾಯಿಸಬೇಕೇ ?’,
ಎಂಬುದನ್ನು ನಿರ್ಧರಿಸಿ ಪುನಃ ಸಾಧಕರಿಗೆ ಸೂಚನೆ ನೀಡಲಾಗುವುದು.’

ಸಾಮಾನ್ಯ ಸಂಜ್ಞೆಗಳು

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣ ಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯ ಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನ ಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು  ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.