ತನ್ನ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕುವವನ ದೇವಸ್ಥಾನ ಕಟ್ಟುತ್ತೇವೆ. ಇದು ನಾಚಿಕೆಗೇಡು !’ ಪ್ರಭು ಶ್ರೀರಾಮನ ಕುರಿತು ಅವಹೇಳನಕಾರಿ ಹೇಳಿಕೆ

ಸಂಭಾಜಿ ಬ್ರಿಗೇಡ್ ಅಧಿವೇಶನದಲ್ಲಿ ವಾರಪತ್ರಿಕೆ ಚಿತ್ರಲೇಖಾದ ಮಾಜಿ ಸಂಪಾದಕ ಜ್ಞಾನೇಶ ಮಹಾರಾವ ಅವರಿಂದ ಪ್ರಭು ಶ್ರೀರಾಮನ ಅವಹೇಳನೆ

ಮುಂಬಯಿ – ಓರ್ವ ವ್ಯಕ್ತಿ ಅಗಸನ ಮಾತನ್ನು ಕೇಳಿ ತನ್ನ ಗರ್ಭಿಣಿ ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕುತ್ತಾನೆಯೋ, ಅಂತಹ ವ್ಯಕ್ತಿ ಹೇಗೆ ದೇವರಾಗುತ್ತಾನೆ ? ಮತ್ತು ನಾವು ದೇಶದಲ್ಲಿ ಇಂತಹ ವ್ಯಕ್ತಿಯ ಮಂದಿರವನ್ನು ನಿರ್ಮಿಸುತ್ತೇವೆ. ಇದರ ಬಗ್ಗೆ ನಮಗೆ ನಾಚಿಕೆಯಾಗಬೇಕು ಎಂದು ಅಂದಿನ ಸಾಪ್ತಾಹಿಕ ಚಿತ್ರಲೇಖಾ ಮಾಜಿ ಸಂಪಾದಕ ಜ್ಞಾನೇಶ ಮಹಾರಾವ ಇವರು ಕೀಳುಮಟ್ಟದ ಟೀಕೆಯನ್ನು ಮಾಡಿದ್ದಾರೆ. ಅವರು ಮುಂಬಯಿಯಲ್ಲಿನ ಸಂಭಾಜಿ ಬ್ರಿಗೆಡ್ ನ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ ಆಘಾತಕಾರಿ ಪ್ರಕಾರವೆಂದರೆ ಈ ಹೇಳಿಕೆ ಮಹಾರಾವ ಇವರು ರಾಷ್ಟ್ರವಾದಿ ಕಾಂಗ್ರೆಸ ಶರದಚಂದ್ರ ಪವಾರ ಪಕ್ಷದ ಮುಖಂಡ ಸಂಸದ ಶರದ ಪವಾರ ಮತ್ತು ಕಾಂಗ್ರೆಸ ಕೋಲ್ಹಾಪುರ ಸಂಸದ ಶ್ರೀಮಂತ ಛತ್ರಪತಿ ಶಾಹೂ ಮಹಾರಾಜರ ಉಪಸ್ಥಿತಿಯಲ್ಲಿ ಹೇಳಿದರು. (ಹಿಂದೂಗಳೇ, ಪ್ರಗತಿಪರರ ಹೆಸರಿನಡಿಯಲ್ಲಿ ಹಿಂದೂಗಳ ದೇವರನ್ನು ಅವಮಾನಿಸಲು ಅನುವು ಮಾಡಿಕೊಡುವ ಇಂತಹ ರಾಜಕಾರಣಿಗಳನ್ನು ಚುನಾವಣೆಯಲ್ಲಿ ನೆನಪಿನಲ್ಲಿಡಿರಿ! – ಸಂಪಾದಕರು)

ಸಂಪಾದಕೀಯ ನಿಲುವು

  • ನಿಜವಾದ ರಾಮಾಯಣದ ಉತ್ತರಕಾಂಡದಲ್ಲಿನ ಪ್ರಸಂಗ ನಿಜವಾಗಿಯೂ ನಡೆದಿದೆಯೇ? ಈ ವಿಷಯದಲ್ಲಿ ಅಭಿಪ್ರಾಯ ವಿಭಿನ್ನವಾಗಿದೆ; ಆದರೆ ಬೇಕಂತಲೇ ಇದನ್ನು ನಿರ್ಲಕ್ಷಿಸಿ ತನ್ನ ಬೇಳೆ ಬೆಯಿಸಲು ಮಹಾರಾವ ತನ್ನ ಸ್ವಂತ ಜ್ಞಾನವನ್ನು ಬೆಳಗಿಸುತ್ತಿದ್ದಾರೆ !
  • ಈಗಿನ ರಾಜಕಾರಣಿಗಳು ಅಗಸರನ್ನು ಬಿಡಿರಿ, ಜನಸಾಮಾನ್ಯರ ದೂರುಗಳೂ ಕಸದ ಬುಟ್ಟಿಯಲ್ಲಿ ಹಾಕುತ್ತಾರೆ, ಹಾಗೆಯೇ ವಿವಿಧ ಬೇಡಿಕೆಗಳಿಗಾಗಿ ಧರಣಿ ಮಾಡುವವರನ್ನೂ ನಿರ್ಲಕ್ಷಿಲಸಾಗುತ್ತದೆ ! ಇಂತಹ ಪರಿಸ್ಥಿತಿಯಲ್ಲಿ ಪ್ರಭು ಶ್ರೀರಾಮನು ಯಾವ ರೀತಿಯ ಕನಿಕರವನ್ನು ತೋರಿಸಿದನೋ, ಅದರ ಒಳಾರ್ಥವನ್ನು ಏಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ?
  • ಜ್ಞಾನೇಶ್ವರ ಮಹಾರಾವ ಅವರು ಇಂತಹ ಧೈರ್ಯ ಇತರ ಧರ್ಮಗಳ ಬಗ್ಗೆ ಮಾತನಾಡುತ್ತಾರೆಯೇ ? ಹಿಂದೂಗಳ ಶ್ರದ್ಧಾಸ್ಥಾನಗಳ ಅಗೌರವ ತೋರುವವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನಿನ ಆವಶ್ಯಕತೆಯಿದೆ. ಹಿಂದೂಗಳು ಸಹಿಷ್ಣುಗಳಾಗಿರುವುದರಿಂದಲೇ ಮಹಾರಾವ ಅವರಿಗೆ ಇಂತಹ ಹೇಳಿಕೆಗಳನ್ನು ನೀಡಲು ಧೈರ್ಯ ಬರುತ್ತದೆ !