ಯುದ್ಧದ ೨೫ ವರ್ಷಗಳ ನಂತರ ಕಾರ್ಗಿಲ್ ಯುದ್ಧದ ವಾಸ್ತವನ್ನು ಬಾಯಿಬಿಟ್ಟ ಪಾಕಿಸ್ತಾನದ ಸೈನ್ಯದಳ ಪ್ರಮುಖ ಅಸೀಮ ಮುನಿರ್

ಇಸ್ಲಾಮಾಬಾದ್ (ಪಾಕಿಸ್ತಾನ) – ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೈನ್ಯದ ಸಹಭಾಗ ಇತ್ತು, ಎಂದು ಪಾಕಿಸ್ತಾನದ ಸೈನ್ಯ ಪ್ರಮುಖ ಆಸೀಮ ೨೫ ವರ್ಷದ ನಂತರ ಮೊದಲ ಬಾರಿ ಒಪ್ಪಿಕೊಂಡರು. ಈ ಹಿಂದೆ ಈ ಯುದ್ಧ ಪಾಕಿಸ್ತಾನ ಸೈನ್ಯ ಮಾಡಿಲ್ಲ, ಅದು ಜಿಹಾದಿ ಭಯೋತ್ಪಾದಕರು ಮಾಡಿದ್ದು ಎಂದು ಪಾಕಿಸ್ತಾನ ದಾವೆ ಮಾಡಿತ್ತು. ಯುದ್ಧದಲ್ಲಿ ೫೨೭ ಭಾರತೀಯ ಸೈನಿಕರು ವೀರ ಮರಣ ಹೊಂದಿದರು ಹಾಗೂ ಪಾಕಿಸ್ತಾನದ ೪೫೦ ಸೈನಿಕರನ್ನು ಕೊಲ್ಲಲಾಗಿತ್ತು.
ಮುನೀರ್ ಇವರು, ಪಾಕಿಸ್ತಾನದಲ್ಲಿ ದೇಶಕ್ಕಾಗಿ ಏನು ಬೇಕಿದ್ದರೂ ಮಾಡಲು ಸಿದ್ಧರಿರುವ ವೀರ ಸೈನಿಕರ ಒಂದು ಸಮೂಹ ಇದೆ, ೧೯೪೮, ೧೯೬೫, ೧೯೭೧ ಯುದ್ಧ ಆಗಿರಲಿ ಅಥವಾ ೧೯೯೯ ರ ಕಾರ್ಗಿಲ ಯುದ್ಧವಾಗಿರಲಿ, ದೇಶದಲ್ಲಿನ ಸಾವಿರಾರು ಸೈನಿಕರು ದೇಶ ಮತ್ತು ಇಸ್ಲಾಂಗಾಗಿ ಬಲಿದಾನ ನೀಡಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನವು ಒಪ್ಪಿಕೊಂಡ ನಂತರ ಕೂಡ ಭಾರತ ಪಾಕಿಸ್ತಾನದ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳುವುದೇ ? ಕಾರಣ ಈ ವಿಷಯ ಭಾರತದ ದೃಷ್ಟಿಯಿಂದ ಜಾಹಿರವಾಗಿಯೇ ಇತ್ತು ! ಭಾರತ ಅದರ ಸೇಡು ಎಂದು ತೀರಿಸಿಕೊಳ್ಳುವುದೇ ? ಪಾಕಿಸ್ತಾನಕ್ಕೆ ನುಗ್ಗಿ ಪಾಕಿಸ್ತಾನವನ್ನು ನಾಶ ಮಾಡುವುದೇ ? |
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ