
ಪ್ರಯಾಗರಾಜ, ಜನವರಿ 18 (ಸುದ್ದಿ.) – ಮಹಾಕುಂಭ ಮೇಳದಲ್ಲಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿನ ವಿವಿಧ ಅಖಾಡಗಳು ಮತ್ತು ವಿವಿಧ ಮಂಟಪಗಳಿಗೆ ಭೇಟಿ ನೀಡಿ ರುದ್ರಪಾಠ, ಸ್ತೋತ್ರಪಠಣ, ಪೂಜೆ, ಸಂಸ್ಕೃತ ಗೀತೆಗಳ ಗಾಯನ, ವೇದ ಮಂತ್ರಗಳನ್ನು ಪಠಿಸುವುದು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿ ಸಂಸ್ಕೃತ ಭಾಷೆಯ ಪ್ರಚಾರ ಮತ್ತು ಪ್ರಸಾರ ಮಾಡುತ್ತಿದ್ದಾರೆ. ಎಂದು ಜಯಪುರದ ಪ್ರಾ. ಡಾ. ದೇವಕರಣ ಶರ್ಮಾ ಇವರು ಮಾಹಿತಿ ನೀಡಿದರು. ‘ಸಂಸ್ಕೃತ ಭಾಷಾ ಪ್ರಸಾರ ಅಭಿಯಾನ’ದ ಮೂಲಕ ಸಂಸ್ಕೃತ ಭಾಷೆಯನ್ನು ಉತ್ತೇಜಿಸಲಾಗುತ್ತಿದೆ.
ಡಾ. ಶರ್ಮಾ ಮಾತು ಮುಂದುವರೆಸಿ,
1. ಕುಲಪತಿ ಪ್ರಾ. ಡಾ. ಶ್ರೀನಿವಾಸ್ ವರಖೆಡೆ ಅವರ ಮಾರ್ಗದರ್ಶನದಲ್ಲಿ, ಒಟ್ಟು 13 ಶಾಖೆಗಳಿದ್ದು, ಅವುಗಳ ಮೂಲಕ ಒಟ್ಟು 27 ಸಂಸ್ಕೃತ ಕಾಲೇಜುಗಳು ಮತ್ತು 100 ಕ್ಕೂ ಹೆಚ್ಚು ಸಂಸ್ಕೃತ ಭಾಷಾ ಶಿಕ್ಷಣ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಈ ಕೇಂದ್ರಗಳನ್ನು ಐ.ಐ.ಟಿ., ಐ.ಐ.ಎಂ. ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುತ್ತದೆ.
2. ಸಂಸ್ಕೃತ ವಿಶ್ವವಿದ್ಯಾಲಯದ ಎಲ್ಲಾ ಶಾಖೆಗಳ ವಿದ್ಯಾರ್ಥಿಗಳನ್ನು ಕುಂಭ ಮೇಳದಲ್ಲಿ ಜನವರಿ 13 ರಿಂದ ಫೆಬ್ರವರಿ 26, 2025 ರವರೆಗೆ 2 ದಿನಗಳ ಕಾಲ ಭಾಗವಹಿಸಲು 50 ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ಕರೆತರಲು ಯೋಜಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ವಿದ್ಯಾಲಯದ ಹೆಸರನ್ನು ಹೊಂದಿರುವ ಟಿ-ಶರ್ಟ್ಗಳನ್ನು ಹಾಕಲು ಒದಗಿಸಲಾಗಿದೆ.
3. ಸಂಸ್ಕೃತ ಭಾಷೆಯ ಪ್ರಸಾರ ಮತ್ತು ಪ್ರಭಾವ ಈ ಆಧುನಿಕ ಯುಗದಲ್ಲೂ ಹೆಚ್ಚುತ್ತಿದ್ದು, ಅನೇಕ ವಿದ್ವಾಂಸರು, ಬುದ್ಧಿಜೀವಿಗಳು ಹಾಗೂ ತಂತ್ರಜ್ಞಾನ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿರುವವರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎಂಬುದು ಜಾಗತಿಕ ಚಿತ್ರಣವಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ