ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇವರು ಮೊದಲ ಬಾರಿಗೆ ಮಾಹಿತಿ ಪ್ರಕಟ !

ನವದೆಹಲಿ – ನನ್ನನ್ನು ಮತ್ತು ನನ್ನ ತಂಗಿ ಶೇಖ್ ರೆಹಾನಾ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ನಾವು ಸ್ವಲ್ಪದರಲ್ಲೇ ಪಾರಾದೆವು. 20 ರಿಂದ 25 ನಿಮಿಷಗಳಲ್ಲಿ ನಮ್ಮ ಜೀವ ಉಳಿಯಿತು. ಇಲ್ಲದಿದ್ದರೆ ನಾವು ಸಾಯುತ್ತಿದ್ದೆವು, ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇದೇ ಮೊದಲ ಬಾರಿಗೆ ಮಾಹಿತಿ ನೀಡಿದ್ದಾರೆ. ಶೇಖ್ ಹಸೀನಾ ಅವರು ಬಾಂಗ್ಲಾದೇಶದಿಂದ ಪಲಾಯನಗೈದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಜನವರಿ 17 ರ ರಾತ್ರಿ, ಅವರ ಆಡಿಯೊ ಸಂದೇಶವನ್ನು ಅವರ ‘ಅವಾಮಿ ಲೀಗ್ ಪಕ್ಷ’ದ ಫೇಸ್ಬುಕ್ ಖಾತೆಯ ಪುಟದಿಂದ ಪ್ರಸಾರ ಮಾಡಿದರು. ಇದರಲ್ಲಿ ಅವರು ಮೇಲಿನ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಶೇಖ್ ಹಸೀನಾ ಪಲಾಯನ ಮಾಡಬೇಕಾಗಿತ್ತು.
ಶೇಖ್ ಹಸೀನಾ ಅವರು ಮಾತನಾಡಿ, ನನ್ನನ್ನು ಕೊಲ್ಲುವುದಕ್ಕಾಗಿ ಹಲವು ಸಲ ಸಂಚು ರೂಪಿಸಲಾಯಿತು. ಆಗಸ್ಟ್ 21 ರಂದು ನನ್ನನ್ನು ಕೊಲ್ಲಲು ಪ್ರಯತ್ನಿಸಲಾಗಿತ್ತು. ಕೊಟ್ಲಿಪಾರಾದಲ್ಲಿ ನಡೆದ ಬಾಂಬ್ ಸ್ಫೋಟದಿಂದ ನಾನು ಸ್ವಲ್ಪದರಲ್ಲೇ ಪಾರಾದೆ. ಆಗಸ್ಟ್ 5 ರಂದು ನನ್ನ ಹತ್ಯೆಯ ಪ್ರಯತ್ನವೂ ನಡೆದಿತ್ತು; ಆದರೆ ಅಲ್ಲಾಹನ ಆಶೀರ್ವಾದದಿಂದ ನಾನು ಬದುಕುಳಿದೆ. ಬಹುಶಃ ನಾನು ಬೇರೆ ಏನಾದರೂ ಮಾಡಬೇಕೆಂದು ಅಲ್ಲಾನ ಇಚ್ಚೆ ಇರಬಹುದು. ನನಗೆ ನನ್ನ ದೇಶದ ಸ್ಥಿತಿಯನ್ನು ನೋಡಿ ತುಂಬಾ ನೋವಾಗಿದೆ. ನನ್ನ ದೇಶದಿಂದ ಮತ್ತು ನನ್ನ ಜನರಿಂದ ದೂರ ಬದುಕುವುದು, ತುಂಬಾ ಕಷ್ಟಕರವಾಗಿದೆ. ಎಲ್ಲವೂ ಸುಟ್ಟು ಬೂದಿಯಾಗಿದೆ ಎಂದು ಹೇಳಿದ್ದಾರೆ.
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!