ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದದಲ್ಲಿ ಅವ್ಯವಹಾರ; 4 ನೌಕರರಿಗೆ ನೋಟಿಸ್ ಜಾರಿ

ದಕ್ಷಿಣ ಕನ್ನಡ – ಇಲ್ಲಿನ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಸಾದದಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ನಾಲ್ವರು ನೌಕರರಿಗೆ ದೇವಸ್ಥಾನದ ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಇಲ್ಲಿನ ನೌಕರರನ್ನು ಕೆಲಸದಲ್ಲಿ ಬದಲಾಯಿಸಲಾಗಿದೆ. ಲಡ್ಡುಗಳ ಸಂಖ್ಯೆ ಮತ್ತು ವಿತರಣೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಹೆಚ್ಚುವರಿ ಲಡ್ಡುಗಳ ವಿತರಣೆಗೆ ರಸೀದಿ ಮತ್ತು ಲೆಕ್ಕಪತ್ರದಲ್ಲಿ ದೋಷ ಕಂಡುಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅವ್ಯವಹಾರ ನಡೆದ ಸ್ಥಳದಲ್ಲಿ ಹಾಗೂ ಲಾಡು ತಯಾರಿಸಲಾದ ಸ್ಥಳದಲ್ಲಿ 4 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಹಗರಣಗಳಿಲ್ಲದ ಯಾವುದೇ ಕ್ಷೇತ್ರ ಉಳಿದಿದೆಯೇ ? ಭ್ರಷ್ಟರಿಗೆ ಗಲ್ಲು ಶಿಕ್ಷೆಯಾಗದ ಕಾರಣ ಭ್ರಷ್ಟಾಚಾರ ನಾಶವಾಗುವ ಬದಲು ಹೆಚ್ಚುತ್ತಿದೆ !