ವಿವಾಹಿತ ಮುಸಲ್ಮಾನನೊಂದಿಗೆ ವಿವಾಹಿತ ಹಿಂದೂ ಮಹಿಳೆ ಪರಾರಿ

ಧಾರವಾಡದಲ್ಲಿ ಪೋಲೀಸ್ ಠಾಣೆ ಎದುರು ಶ್ರೀರಾಮ ಸೇನೆಯಿಂದ ಲವ್ ಜಿಹಾದ್ ವಿರುದ್ಧ ಪ್ರತಿಭಟನೆ

ಧಾರವಾಡ – ಶ್ರೀರಾಮ ಸೇನೆಯ ಕಾರ್ಯಕರ್ತರು ಆಗಸ್ಟ್ 30 ರಂದು ಧಾರವಾಡದ ಪೊಲೀಸ್ ಠಾಣೆ ಎದುರು ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ನಡೆಸಿದರು. ಜುಲೈ 11 ರಂದು ಆಂಜನೇಯ ನಗರದಲ್ಲಿ 20 ವರ್ಷದ ವಿವಾಹಿತ ಮಹಿಳೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಮುನ್ನಾ ಹೆಸರಿನ ಮುಸಲ್ಮಾನ ವ್ಯಕ್ತಿಯೊಂದಿಗೆ ಓಡಿಹೋದಳು. (ಧರ್ಮ ಶಿಕ್ಷಣ ಇಲ್ಲದಿರುವುದರಿಂದ ವಿವಾಹಿತ ಹಿಂದೂ ಮಹಿಳೆ ಲವ್ ಜಿಹಾದ್ ಬಲೆಗೆ ಸಿಲುಕಿ ಒಬ್ಬ ವಿವಾಹಿತ ಮುಸಲ್ಮಾನನೊಂದಿಗೆ ಓಡಿಹೋಗುತ್ತಾಳೆ ! – ಸಂಪಾದಕರು) ಇದು ಲವ್ ಜಿಹಾದ್ ಇರುವುದರಿಂದ ಶ್ರೀರಾಮ ಸೇನೆ ಪ್ರತಿಭಟನೆ ಮಾಡಿತು. ಮುನ್ನಾ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿ ಒಂದುವಾರದೊಳಗೆ ಇಬ್ಬರನ್ನೂ ವಾಪಸ್ ಕರೆತರಬೇಕು ಎಂದು ಒತ್ತಾಯಿಸಿದರು.
3 ತಿಂಗಳ ಹಿಂದೆ ತಂಗೆಮ್ಮ ಎಂಬ ವಿವಾಹಿತ ಮಹಿಳೆಯ ಎದುರಿನ ಮನೆಯಲ್ಲಿ ಮುನ್ನಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ಅವಧಿಯಲ್ಲಿ ಅವರ ಪರಿಚಯ ಆಗಿತ್ತು.