ಈಗಿನ ಪ್ರಸ್ತುತ ಇಂಗ್ಲಿಷ್ ಶಿಕ್ಷಣ ಪದ್ಧತಿ ಬದಲಾಯಿಸಿ ಅದು ಕೂಡ ಸಂಪೂರ್ಣವಾಗಿ ಭಾರತೀಯ ಮಾಡುವುದಕ್ಕಾಗಿ ಕ್ರಮ ಕೈಗೊಳ್ಳಬೇಕು !

ನವ ದೆಹಲಿ – ದೇಶದಲ್ಲಿನ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಿಶೇಷವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುವ ದೀಕ್ಷಾಂತ ಸಮಾರಂಭಗಳಲ್ಲಿ ವಿದ್ಯಾರ್ಥಿಗಳಿಗೆ ಕಪ್ಪು ಅಂಗಿ ಮತ್ತು ಟೋಪಿ ಹಾಕಿಕೊಳ್ಳುವ ಆವಶ್ಯಕತೆ ಇಲ್ಲ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಒಂದು ಆದೇಶದ ಮೂಲಕ ಎಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ದೀಕ್ಷಾಂತ ಸಮಾರಂಭದಲ್ಲಿ ಈ ಬ್ರಿಟಿಷ ವಸಾಹತವಾದಿ ಚಿಹ್ನೆಗಳನ್ನು ಅವಲಂಬಿಸುವ ಬದಲು ಭಾರತೀಯ ಉಡುಪು ಧರಿಸಲು ಆದೇಶ ನೀಡಲಾಗಿದೆ.
ಆರೋಗ್ಯ ಸಚಿವಾಲಯವು, ಕಪ್ಪು ಅಂಗಿ ಮತ್ತು ಟೋಪಿ ಹಾಕಿಕೊಳ್ಳುವುದು, ಇದು ವಸಾಹತಶಾಹಿ ಕಾಲದ ಪರಂಪರೆ ಆಗಿದೆ. ಇದು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಇಲ್ಲ. ದೀಕ್ಷಾಂತ ಸಮಾರಂಭದಲ್ಲಿ ಧರಿಸುವ ಉಡುಪು ಈ ಸಂಸ್ಥೆ ಯಾವ ರಾಜ್ಯದಲ್ಲಿದೆ, ಆ ರಾಜ್ಯದಲ್ಲಿನ ಉಡುಪು ಮತ್ತು ಪರಂಪರೆ ಇದರ ಮೇಲೆ ಆಧಾರಿತವಾಗಿರಬೇಕು. ಈಗ ಈ ವಸಾಹತವಾದಿ ಪರಂಪರೆ ಬದಲಾಯಿಸುವ ಆವಶ್ಯಕತೆ ಇದೆ. ಈ ನಿರ್ಣಯ ಎಂದರೆ ಭಾರತದ ವಸಾಹತಶಾಹಿ ಪರಂಪರೆಯಿಂದ ದೂರ ಸರಿಯುವ ದಿಶೆಗೆ ಹಾಕಿರುವ ಮೊದಲ ಹೆಜ್ಜೆ ಆಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈಗ ದೀಕ್ಷಾಂತ ಸಮಾರಂಭದಲ್ಲಿ ಬ್ರಿಟಿಷಕಾಲದ ಕಪ್ಪು ಅಂಗಿಯಲ್ಲಿ (ಗೌನ್ನಲ್ಲಿ) ಅಲ್ಲದೆ, ಭಾರತೀಯ ಉಡುಪಿನಲ್ಲಿ ನಡೆಯಲಿದೆ ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ