ಬಾಗಲಕೋಟೆಯಲ್ಲಿ ಮೌಲಾನಾಗೆ ಥಳಿತ: ಇಬ್ಬರು ಯುವಕರ ಬಂಧನ

(ಮೌಲಾನಾ ಎಂದರೆ ಇಸ್ಲಾಮಿನ ವಿದ್ವಾಂಸ ಎಂದರ್ಥ)

ಬಾಗಲಕೋಟೆ – ನವನಗರ ಸೆಕ್ಟರ್ ನಂ.4ರ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿ ತೆರೆಯುವ ವಿಚಾರದಲ್ಲಿ ಸಣ್ಣಪುಟ್ಟ ಜಗಳ ತಾರಕಕ್ಕೇರಿದ್ದು, ಮೌಲಾನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಕಾರ್ತಿಕ್, ಪ್ರೀತಮ್ ಮತ್ತು ನಾಗರಾಜ್ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯ ನಂತರ ಮುಸ್ಲಿಂ ಸಮುದಾಯದ ಪ್ರಮುಖರು ರಾತ್ರಿ ನವನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಿಂದಾಗಿ ನವನಗರ ಪೊಲೀಸ್ ಠಾಣೆ ಎದುರು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮುಸ್ಲಿಮರನ್ನು ಶಾಂತಗೊಳಿಸಿ ಕಾರ್ತಿಕ್ ಮತ್ತು ಪ್ರೀತಮ್ ಅವರನ್ನು ಬಂಧಿಸಿದರು. ನಾಗರಾಜ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.