ಮಾಂಸಾಹಾರ ಮಾಡಿದ ಪಾತ್ರೆಗಳನ್ನು ದೇವಸ್ಥಾನದ ಹೊರಗೆ ತೊಳೆಯಲು ಹಿಂದೂಗಳಿಂದ ಆಕ್ಷೇಪ; ಮುಸ್ಲಿಮರಿಂದ ಬೆದರಿಕೆ !

ದೇವಸ್ಥಾನದ ಅರ್ಚಕರಿಗೆ ಜೀವ ಬೆದರಿಕೆ ಮತ್ತು ದೇವಸ್ಥಾನವನ್ನು ಬಾಂಬ್ ಸಿಡಿಸಿ ದ್ವಂಸ ಮಾಡುವ ಬೆದರಿಕೆ ಹಾಕಿದ ಮತಾಂಧ ಮುಸಲ್ಮಾನರು !

ಕೋಟಾ( ರಾಜಸ್ಥಾನ) – ಮಾಂಸಾಹಾರ ತಯಾರಿಸಿದ ಪಾತ್ರೆಗಳನ್ನು ದೇವಸ್ಥಾನದ ಹೊರಗೆ ತೊಳೆಯುತ್ತಿರುವಾಗ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮೋತಿಪುರ ಗ್ರಾಮದಲ್ಲಿನ ಪ್ರಾಚೀನ ಶ್ರೀನಾಥಜಿ ಚರಣ ಚೌಕಿ ದೇವಸ್ಥಾನಕ್ಕೆ ಆಗಸ್ಟ್ ೧೫ ರಂದು ರಾತ್ರಿ ಮತಾಂಧ ಮುಸಲ್ಮಾನರು ನುಗ್ಗಿ ಅಲ್ಲಿನ ಅರ್ಚಕರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ದೇವಸ್ಥಾನವನ್ನು ಬಾಂಬ್ ನಿಂದ ದ್ವಂಸ ಮಾಡುವ ಬೆದರಿಕೆ ಕೂಡ ನೀಡಿದರು. (ಹಿಂದುಗಳು ಅಪ್ಪಿ ತಪ್ಪಿಯೂ ಮಸೀದಿಗೆ ನುಗ್ಗಿ ಹೀಗೆ ವರ್ತಿಸಿದ್ದರೆ ಸಂಪೂರ್ಣ ದೇಶದಲ್ಲಿ ಗಲಭೆಗಳು ಭುಗಿಲೆಳುತ್ತಿದ್ದವು ! – ಸಂಪಾದಕರು)

೧. ಶ್ರೀನಾಥ ಚರಣ ಚೌಕಿ ದೇವಸ್ಥಾನದ ಅರ್ಚಕರು ಸೋಹನ್ ಲಾಲ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಆಗಸ್ಟ್ ೧೫ರ ಸಂಜೆ ದೇವಸ್ಥಾನದ ಹತ್ತಿರದ ಒಂದು ದರ್ಗಾದಲ್ಲಿ ಮುಸಲ್ಮಾನರು ಮಾಂಸಾಹಾರ ಸೇವಿಸುತ್ತಿದ್ದರು ಮತ್ತು ದೇವಸ್ಥಾನದ ಹತ್ತಿರವೇ ಮಾಂಸಕ್ಕಾಗಿ ಬಳಸಿದ್ದ ಪಾತ್ರೆಗಳನ್ನು ತೊಳೆಯುತ್ತಿದ್ದರು. ಇದರಿಂದ ಬಹಳ ದುರ್ಗಂಧ ಬರುತ್ತಿತ್ತು. ನಾನು, ತ್ರಿಲೋಕ್, ತುಳಸಿ ಮತ್ತು ಜಿತೇಂದ್ರ ಇವರು ಪಾತ್ರೆ ತೊಳೆಯುವ ಕುರಿತು ಆಕ್ಷೇಪ ವ್ಯಕ್ತಪಡಿಸಿದೆವು. ಆಗ ಸುಮಾರು ೨೦ ರಿಂದ ೩೦ ಮಂದಿ ಮುಸಲ್ಮಾನರು ಚಾಕು ಹಿಡಿದು ದೇವಸ್ಥಾನಕ್ಕೆ ನುಗ್ಗಿ ಬೈಗುಳ ಬಯ್ಯುತ್ತಾ ನಮಗೆ ಜೀವ ಬೆದರಿಕೆ ನೀಡಿದರು. ದೇವಸ್ಥಾನದ ಬಾಗಿಲು ಒಳಗಿನಿಂದ ಮುಚ್ಚಿ ನಾವು ನಮ್ಮ ಪ್ರಾಣ ರಕ್ಷಿಸಿಕೊಂಡೆವು. ದೇವಸ್ಥಾನಕ್ಕೆ ನುಗ್ಗಿದ ಮುಸಲ್ಮಾನರು ದೇವಸ್ಥಾನವನ್ನು ಬಾಂಬ್ ಸಿಡಿಸಿ ಧ್ವಂಸ ಮಾಡುವ ಬೆದರಿಕೆ ಕೂಡ ನೀಡಿದರು ಎಂದು ಅರ್ಚಕರು ತಿಳಿಸಿದರು.

೨. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪೊಲೀಸ್ ಮಹಾನಿರೀಕ್ಷಕ ಕಾರ್ಯಾಲಯಕ್ಕೆ ಮನವಿ ನೀಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

೩. ಈ ಬಗ್ಗೆ ಪ್ರತಿಕ್ರಿಯಿಸಿದ ಅಲ್ಲಿನ ಪೊಲೀಸ್ ಉಪ ಆಯುಕ್ತರು , ಭಾರತೀಯ ನ್ಯಾಯ ಸಂಹಿತೆ ಕಾನೂನಿನ ಕಲಂ ೨೯೮ ರ ಪ್ರಕಾರ ದೂರು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಹಲವೆಡೆ ನಾವು ದಾಳಿಯನ್ನು ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

  • ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತರಿದ್ದಾರೆ, ಎಂದು ಕಿರಿಚಾಡುವ ರಾಜಕೀಯ ಪಕ್ಷಗಳು ಈಗ ಎಲ್ಲಿವೆ ?
  • ಭಾರತವನ್ನು ಬಾಂಗ್ಲಾದೇಶವನ್ನಾಗಿ ಮಾಡಲಾಗುವುದು ಎಂಬುದು ಇಂತಹ ಘಟನೆಯಿಂದ ಸ್ಪಷ್ಟವಾಗಿ ಕಂಡು ಬರುತ್ತಿದ್ದು ಹಿಂದುಗಳು ಇಂತಹ ಘಟನೆಗಳಿಂದ ಸ್ವಂತ ಮತ್ತು ದೇವಸ್ಥಾನದ ರಕ್ಷಣೆ ಮಾಡಲು ಸಿದ್ದರಾಗಿದ್ದಾರೆಯೇ ?
  • ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗಲೇ ಹಿಂದುಗಳ ಈ ಸ್ಥಿತಿ ಇದೆ, ಇನ್ನು ಬಂಗಾಳ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದರ ಯೋಚನೆ ಮಾಡದಿದ್ದರೆ ಒಳ್ಳೆಯದು !