
ಢಾಕಾ – ಭಾರತ ಉಪಖಂಡದಲ್ಲಿ ಸಕ್ರಿಯವಾಗಿರುವ ‘ಅಲ್ ಕಾಯದಾ’ ಈ ಭಯೋತ್ಪಾದಕ ಸಂಘಟನೆ ಬಾಂಗ್ಲಾದೇಶದ ಜನತೆಗೆ 12 ಪುಟಗಳ ಸಂದೇಶವನ್ನು ಪ್ರಸಾರ ಮಾಡಿದೆ. ಇದರಲ್ಲಿ ‘ಅಲ್ ಕಾಯದಾ’ವು ಶೇಖ್ ಹಸೀನಾ ಪದಚ್ಯುತಿ ‘ಜನರ ಕ್ರಾಂತಿ’ ಎಂದು ಹೇಳಿದೆ. ಭಾರತದ ‘ಗುಲಾಮ’ರಾಗಿದ್ದ ಹಸೀನಾ ಸರಕಾರವನ್ನು ಕಿತ್ತೊಗೆದ ಬಾಂಗ್ಲಾದೇಶದ ಜನತೆಗೆ ಅಲ್ ಕಾಯದಾ ಅಭಿನಂದನೆ ಸಲ್ಲಿಸಿದೆ. ಈ ಸಂದೇಶದಲ್ಲಿ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಸರಕಾರ ಸ್ಥಾಪಿಸುವಂತೆ ‘ಅಲ್ ಕಾಯದಾ’ ಸಲಹೆ ನೀಡಿದೆ. ಬಾಂಗ್ಲಾದೇಶದ ಹೊಸ ಸರಕಾರವು ಆಡಳಿತದಲ್ಲಿ ಇಸ್ಲಾಮಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಲ್ ಕಾಯದಾ ಹೇಳಿದೆ.
1. ಅಲ್ ಕಾಯದಾ ತನ್ನ ಸಂದೇಶದಲ್ಲಿ ಬಾಂಗ್ಲಾದೇಶದ ಜನರಿಗೆ ಈ ಕ್ರಾಂತಿಯಲ್ಲಿ ಭಾಗವಹಿಸಿರುವ ಸೇನೆಯನ್ನು ನಂಬಬೇಡಿ ಎಂದು ಎಚ್ಚರಿಕೆ ನೀಡಿದೆ. ಈ ಕ್ರಾಂತಿ ಯಶಸ್ವಿಯಾಗಬೇಕಾದರೆ ಸೇನೆಯ ನಾಯಕತ್ವ ತೊಲಗಬೇಕು ಎಂದು ಅಲ್ ಕಾಯದಾ ಹೇಳಿದೆ.
2. ಬಾಂಗ್ಲಾದೇಶದ ಸೇನಾ ಮುಖ್ಯಸ್ಥರೇ ಸೇನೆಯ ವಿಮಾನ ಮೂಲಕ ಶೇಖ ಹಸೀನಾರನ್ನು ಭಾರತಕ್ಕೆ ಕರೆದೊಯ್ದಿದ್ದಾರೆ ಎಂದು ‘ಅಲ್ ಕಾಯದಾ’ ಹೇಳಿದೆ.
3. ಅಲ್ ಕಾಯದಾ ನೀಡಿದ ಈ ಸಂದೇಶದ ಬಗ್ಗೆ ‘ಸಾಹಬ್ ಮೀಡಿಯಾ’ ಲೇಖನ ಬರೆದಿದೆ. ಈ ಲೇಖನದಲ್ಲಿ “ಅಲ್ ಕಾಯದಾದ ಚಟುವಟಿಕೆಗಳು ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಬಹುದು” ಎಂದು ಹೇಳಿದೆ.
4. ಇಸ್ಲಾಮಿಕ್ ಶಕ್ತಿಗಳು ಬಾಂಗ್ಲಾದೇಶದಲ್ಲಿ ಷರಿಯಾ ಕಾನೂನನ್ನು ಸಂಪೂರ್ಣವಾಗಿ ಜಾರಿಗೊಳಿಸುವತ್ತ ಒತ್ತು ನೀಡಬೇಕುಎಂದು ಅಲ್ ಕಾಯದಾ ತನ್ನ ಸಂದೇಶದಲ್ಲಿ ಹೇಳಿದೆ.
ಸಂಪಾದಕೀಯ ನಿಲುವುಇದನ್ನು ಗಮನದಲ್ಲಿಟ್ಟುಕೊಂಡು ಭಾರತವನ್ನು ಆದಷ್ಟು ಬೇಗ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದಲ್ಲಿ ಜಿಹಾದಿಗಳು, ಮತಾಂಧರು ಮತ್ತು ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡಬಹುದು ! |
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ