SANATAN PRABHAT EXCLUSIVE : ನಮ್ಮನ್ನು ರಕ್ಷಿಸಲು ಪ್ರಯತ್ನಿಸಿ, ಇಲ್ಲದಿದ್ದರೆ 2-3 ವರ್ಷಗಳಲ್ಲಿ ಬಾಂಗ್ಲಾದೇಶದಿಂದ ನಮ್ಮ ಅಸ್ತಿತ್ವವೇ ಸರ್ವನಾಶ !


  • ಸನಾತನ ಪ್ರಭಾತ್’ ಪ್ರತಿನಿಧಿಗೆ ಬಾಂಗ್ಲಾದೇಶದ ಹಿಂದೂ ವ್ಯಕ್ತಿಯಿಂದ ಕಳವಳದಿಂದ ವಿನಂತಿ!

  • ಭಾರತ ಸರಕಾರಕ್ಕೆ ನಮ್ಮ ಪರಿಸ್ಥಿತಿಯ ಬಗ್ಗೆ ಕಲ್ಪನೆ ಇಲ್ಲ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳು ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬುದು ಸನಾತನ ಪ್ರಭಾತ್ ಪ್ರತಿನಿಧಿಗಳು ಪ್ರತ್ಯಕ್ಷವಾಗಿ ಅಲ್ಲಿನ ಹಿಂದೂಗಳ ಬಾಯಿಂದ ಕೇಳಿದರು. ದೇಶದ ಕೆಲವು ಭಾಗಗಳಲ್ಲಿರುವ ಹಿಂದೂಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ, ಅವರು ತಮ್ಮ ಕಷ್ಟದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಓರ್ವ ಹಿಂದೂ ಇಂಜಿನಿಯರ್‌ನೊಂದಿಗೆ ಮಾತನಾಡಿದನಂತರ 2 ಗಂಟೆಗಳ ನಂತರ ಮತ್ತೆ ಸಂಪರ್ಕಿಸಿ ‘ನಮ್ಮನ್ನು ರಕ್ಷಿಸಿ, ಇಲ್ಲದಿದ್ದರೆ 2-3 ವರ್ಷಗಳಲ್ಲಿ ನಾವು ಬಾಂಗ್ಲಾದೇಶದಿಂದ ನಾಶವಾಗುತ್ತೇವೆ ! ಎಂದು ‘ಸನಾತನ ಪ್ರಭಾತ್’ ಪ್ರತಿನಿಧಿಯಲ್ಲಿ ಕಳವಳದಿಂದ ವಿನಂತಿಸಿದರು, ನೀವು ಪ್ರಧಾನಿ ಮೋದಿ ಮತ್ತು ಇತರ ಮಂತ್ರಿಗಳಿಗೆ, ನಮ್ಮ ರಕ್ಷಣೆಗಾಗಿ ಏನಾದರೂ ಮಾಡಿ ! ನಮ್ಮ ಪರಿಸ್ಥಿತಿಯ ಬಗ್ಗೆ ಭಾರತ ಸರಕಾರಕ್ಕೆ ಕಲ್ಪನೆ ಇಲ್ಲ ! ಎಂದು ಹೇಳಿದರು.

1. ಕಳೆದ 3 ರಾತ್ರಿಗಳಿಂದ ನಾವು ನಿದ್ದೆ ಮಾಡಿಲ್ಲ !

ಒಂದು ಹಳ್ಳಿಯಲ್ಲಿ ಒಬ್ಬ ಹಿಂದುವಿನೊಂದಿಗೆ ಚರ್ಚೆ ಮಾಡಿದಾಗ ಅವರು, ನನ್ನ ಹಳ್ಳಿಯಲ್ಲಿ ಕೇವಲ 50 ಹಿಂದೂಗಳ ಮನೆಗಳಿವೆ ಮತ್ತು ನಾವು ಕೇವಲ 200 ಹಿಂದೂಗಳು ವಾಸವಿದ್ದೇವೆ. ಕಳೆದ 3 ರಾತ್ರಿಗಳಿಂದ ನಾವು ನಿದ್ದೆ ಮಾಡಿಲ್ಲ. ಮುಸ್ಲಿಮರು ಯಾವಾಗ ಬೇಕಾದರೂ ನಮ್ಮ ಮೇಲೆ ದಾಳಿ ಮಾಡಬಹುದು ಈ ಸ್ಥಿತಿ ಇದೆ ಎಂದು ಹೇಳಿದರು.

2. ನಮಗೆ ಮನೆ ಬಿಟ್ಟು ಹೊರ ಬರುವುದನ್ನು ನಿಷೇಧಿಸಲಾಗಿದೆ !

ಒಂದು ದೊಡ್ಡ ನಗರದಲ್ಲಿರುವ ಗಣ್ಯ ಹಿಂದೂವನ್ನು ಸಂಪರ್ಕಿಸಿದಾಗ ಅವರು ಫೋನ್ ಎತ್ತಲಿಲ್ಲ. ಅವರು ಸನಾತನ ಪ್ರಭಾತ್ ಪ್ರತಿನಿಧಿಗಳೊಂದಿಗೆ ಸಂದೇಶಗಳ ಮೂಲಕ ಸಂವಾದ ನಡೆಸಿದರು. ಈ ವೇಳೆ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಹೇರಲಾಗಿದೆ ಎಂದರು. ನಾನು ನಿಮ್ಮೊಂದಿಗೆ ಮಾತನಾಡಲು ಸಹ ಸಾಧ್ಯವಿಲ್ಲ. ಇಲ್ಲಿನ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ ಎಂದು ಹೇಳಿದರು.
ಕೆಲವು ಹಿಂದೂಗಳು ತಮ್ಮ ಹೆಸರನ್ನು ಹೇಳದಿರುವ ಷರತ್ತಿನ ಮೇರೆಗೆ ಅಲ್ಲಿನ ಭಯಾನಕ ಪರಿಸ್ಥಿತಿಗಳ ಕೆಲವು ವೀಡಿಯೊಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದಾರೆ.