ಮುಂಬಯಿ ಉಚ್ಚನ್ಯಾಯಾಲಯದ ಮಹತ್ವದ ನಿರ್ಧಾರ!

ಮುಂಬಯಿ – ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ, ಸ್ವತಃ ಬಲಾತ್ಕಾರ ಮಾಡದೇ ಇತರರಿಗೆ ಅದಕ್ಕಾಗಿ ಸಹಾಯ ಮಾಡುವವನನ್ನೂ ಬಲಾತ್ಕಾರದ ಅಪರಾಧಿಯೆಂದು ಪರಿಗಣಿಸಲಾಗುವುದು ಎಂದು ಮುಂಬಯಿ ಉಚ್ಚನ್ಯಾಯಾಲಯವು ಹೇಳಿದೆ. `ಸಮಾನ ಉದ್ದೇಶದ ದಾಖಲೆಗಳು ಶಿಕ್ಷೆಗೆ ಸಾಕಾಗುತ್ತದೆ’ ಎಂದು ನ್ಯಾಯಾಲಯ ತಿಳಿಸಿದೆ. ಮುಂಬಯಿ ಉಚ್ಚನ್ಯಾಯಾಲಯದ ನಾಗಪೂರ ಪೀಠವು ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ ಅಪರಾಧಿಯೆಂದು ಘೋಷಿಸಿದ್ದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ಈ ಆದೇಶ ನೀಡಿದೆ. ಚಂದ್ರಪೂರ ಸೆಷನ್ ನ್ಯಾಯಾಲಯವು ಈ ನಾಲ್ವರು ಅಪರಾಧಿಗಳಿಗೆ ವಿಧಿಸಿರುವ ಶಿಕ್ಷೆ ಸರಿಯಾಗಿದೆಯೆಂದು ಉಚ್ಚನ್ಯಾಯಾಲಯವು ಮೊಹರು ಹಾಕಿದೆ.
1. ಜೂನ್ 14, 2015 ರಂದು, ಸಂದೀಪ ತಲಾಂಡೆ, ಕುನಾಲ್ ಘೋಡಮ್, ಶುಭಂ ಘೋಡಮ್ ಮತ್ತು ಅಶೋಕ್ ಕನ್ನಾಕೆ ಎಂಬ ಯುವಕರು ಓರ್ವ ಹುಡುಗಿಯ ಬಲಾತ್ಕಾರ ಮಾಡಿದ್ದರು. ಚಂದ್ರಪೂರ ಸೆಷನ್ ನ್ಯಾಯಾಲಯವು ಈ ನಾಲ್ವರು ಆರೋಪಿಗಳಿಗೆ 20 ಆಗಸ್ಟ್ 2018 ರಂದು 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು.
2. ಈ ನಾಲ್ವರಲ್ಲಿ ಕೇವಲ ಇಬ್ಬರು ಆರೋಪಿಗಳು ಮಾತ್ರ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದರು; ಆದರೆ ಇನ್ನಿಬ್ಬರು ಆರೋಪಿಗಳು ಅತ್ಯಾಚಾರದ ಉದ್ದೇಶ ಹೊಂದಿದ್ದ ಕಾರಣ ಅವರನ್ನು ಕೂಡ ತಪ್ಪಿತಸ್ಥರೆಂದು ನ್ಯಾಯಾಲಯವು ತೀರ್ಪು ನೀಡಿದೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ