ಸಾರಸಬಾಗ್ ನಲ್ಲಿ ನೂರಾರು ಹಿಂದೂಗಳ ಸಮ್ಮುಖದಲ್ಲಿ ಶಿವಾಜಿ ಮಹಾರಾಜ ವಂದನೆ ಮತ್ತು ಮಹಾಆರತಿ ನೆರವೇರಿತು !

ಸಾರಸಬಾಗ್‌ನಲ್ಲಿ ನಮಾಜ್‌ ವಿರುದ್ಧ ಒಂದುಗೂಡಿದ ಹಿಂದೂಗಳು !

ಮಹಾಆರತಿ ಮಾಡುತ್ತಿರುವಾಗ ಸಾಂಸದೆ ಡಾ. ಮೇಧಾ ಕುಲಕರ್ಣಿ, ಶ್ರೀ. ಮಿಲಿಂದ ಎಕಬೋಟೆ

ಪುಣೆ, ಜು.13 (ವಾರ್ತೆ) – ಕೆಲ ದಿನಗಳ ಹಿಂದೆ ಸಾರಸಬಾಗ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತೆಳೆದವು. ಅದರಂತೆ ಹಿಂದುತ್ವನಿಷ್ಠ ಸಂಗ್ರಾಮ ಪಾಟೀಲ ಇವರು ಪ್ರತಿ ಶುಕ್ರವಾರ ಶಿವಾಜಿ ಮಹಾರಾಜರ ವಂದನೆ ಮಾಡುವ ನಿಯೋಜನೆ ಮಾಡಿದ್ದರು.

ಇದನ್ನು ಬೆಂಬಲಿಸಿ ಜುಲೈ 12 ರಂದು ಸಾರಸಬಾಗ್ ನಲ್ಲಿ ನೂರಾರು ಹಿಂದೂ ಸಹೋದರ-ಸಹೋದರಿಯರ ಸಮ್ಮುಖದಲ್ಲಿ ಶಿವಾಜಿ ಮಹಾರಾಜರ ವಂದನೆ ಮತ್ತು ಮಹಾಆರತಿಯನ್ನು ಮಾಡಲಾಯಿತು.

ಧರ್ಮಾಭಿಮಾನಿಗಳಿಗೆ ಮಾರ್ಗದರ್ಶನ ಮಾಡುತ್ತಿರುವಾಗ ಶ್ರೀ. ಮಿಲಿಂದ ಎಕಬೋಟೆ

 

ಉಪಸ್ಥಿತರಿದ್ದ ಧರ್ಮಾಭಿಮಾನಿ

ಈ ಕಾರ್ಯಕ್ರಮದಲ್ಲಿ ಸಂಸದ ಡಾ. ಮೇಧಾ ಕುಲಕರ್ಣಿ, ನಗರಾಧ್ಯಕ್ಷ ಶ್ರೀ. ಧೀರಜ ಘಾಟೆ, ಶ್ರೀ. ಮಿಲಿಂದಜಿ ಎಕಬೋಟೆ, ಸೌ. ಅನಘಾತಾಯಿ ಘೈಸಾಸ್, ಸೌ. ಸರಸ್ವತಿ ಶೇಂಡಗೆ, ಶ್ರೀ. ಬಾಪು ಮಾನಕರ, ಶ್ರೀ. ಜಯಂತ ಭಾವೆ, ಶ್ರೀ. ಮಹೇಂದ್ರಜಿ ದೇವಿ ಹಾಗೂ ಅಪಾರ ಸಂಖ್ಯೆಯ ಹಿಂದೂ ಬಾಂಧವರು ಉಪಸ್ಥಿತರಿದ್ದರು.