S T Hasan : ಮಸೀದಿ ಮೇಲಿನ ಭೋಂಗಾ ತೆಗೆಸುವವರು ಕಾವಡಾ ಯಾತ್ರೆಯಲ್ಲಿನ ಡಿಜೆ ನಿಲ್ಲಿಸಲಿ: ಸಮಾಜವಾದಿ ಪಕ್ಷದ ನಾಯಕ ಎಸ್.ಟಿ.ಹಸನ್ !

(ಡಿಜೆ ಎಂದರೆ ದೊಡ್ಡ ಧ್ವನಿಕ್ಷೇಪಕ ಯಂತ್ರ ವ್ಯವಸ್ಥೆ)

ಸಮಾಜವಾದಿ ಪಕ್ಷದ ನಾಯಕ ಎಸ್.ಟಿ.ಹಸನ್

ಮುರಾದಾಬಾದ್(ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಶಾಸಕ ಡಾ. ಎಸ್ ಟಿ ಹಸನ್ ಅವರು ಕಾವಡಾ ಯಾತ್ರೆಯ ಕುರಿತು ಟೀಕಾತ್ಮಕ ಹೇಳಿಕೆ ನೀಡಿದ್ದಾರೆ. ಮಸೀದಿಯ ಆಜಾನ್ ನ(ಮುಸಲ್ಮಾನರಿಗೆ ನಮಾಜ್ ಗಾಗಿ ದೊಡ್ಡ ಧ್ವನಿಯಲ್ಲಿ ಆಮಂತ್ರಿಸುವುದು ) ಧ್ವನಿ ೬೦ ಡೆಸಿಮಲ್ ಕ್ಕಿಂತಲೂ ಹೆಚ್ಚಾದರೆ ಪೊಲೀಸರು ಕೂಡಲೇ ಮಸಿದಿ ಮೇಲಿನ ಭೋಂಗಾ(ಮೈಕ್) ತೆಗೆದು ಹಾಕುತ್ತಾರೆ ; ಆದರೆ ಕಾವಡಾ ಯಾತ್ರೆಯ ವೇಳೆ ಹಾಕಲಾಗುವ ಡಿಜೆ ಮಾತ್ರ ಯಾವುದೇ ಅಡೆತಡೆ ಇಲ್ಲದೆ ನಡೆಸಲಾಗುತ್ತದೆ. ಮಸೀದಿ ಮೇಲಿನ ಭೋಗಾ ತೆಗೆಯುವವರು ಕಾವಡಾ ಯಾತ್ರೆಯಲ್ಲಿನ ಡಿಜೆ ಕೂಡ ನಿಲ್ಲಿಸಬೇಕು , ಎಂದು ಹಸನ್ ಆಗ್ರಹಿಸಿದ್ದಾರೆ. (ಮಸೀದಿ ಮೇಲಿನ ಭೋಗಾದಿಂದಾಗುವ ಧ್ವನಿ ಮಾಲಿನ್ಯದ ತುಲನೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಕಾವಡಾ ಯಾತ್ರೆಯಲ್ಲಿ ಬಳಸುವ ಡಿಜೆಯ ಧ್ವನಿ ಮಾಲಿನ್ಯ ಬಹಳ ಅಲ್ಪವಾಗಿದೆ. ಇದು ಸಮಾಜವಾದಿ ಪಕ್ಷದ ನಾಯಕನಿಗೆ ಅರ್ಥವಾಗುವುದೇ ? – ಸಂಪಾದಕರು )

ಉತ್ತರ ಪ್ರದೇಶ ರಾಜ್ಯ ಸರಕಾರವು ಮೊಹರಂ ವೇಳೆ ಶಸ್ತ್ರಾಸ್ತ್ರಗಳನ್ನು ನಿಷೇಧಿಸಿದ್ದು ಸರಕಾರದ ಈ ಆದೇಶದಿಂದ ಆಕ್ರೋಶಗೊಂಡಿರುವ ಹಸನ್, ನಿರ್ಬಂಧ ಹೇರುವುದೇ ಆಗಿದ್ದರೆ ಎಲ್ಲರ ಮೇಲೆ ಸಮಾನವಾಗಿ ಹೇರಬೇಕು. ಎಲ್ಲಾ ಧರ್ಮದ ಮೆರವಣಿಗೆಗಳಲ್ಲಿ ಶಸ್ತ್ರಗಳ ಮೇಲೆ ನಿಷೇಧ ಹೇರಬೇಕು, ಆಗ ನಾವು ಆಕ್ಷೇಪ ಮಾಡುವುದಿಲ್ಲ, ಮೊಹರಂ ಸಮಯದಲ್ಲಿಯೇ ಇಂತಹ ನಿರ್ಬಂಧದ ಆವಶ್ಯಕತೆ ಏನಿದೆ? ಮೊಹರಂ ಮೆರವಣಿಗೆಯಲ್ಲಿ ಅನೇಕ ವರ್ಷದಿಂದ ಮುಸಲ್ಮಾನರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ ಎಂದು ಕಿಡಿಕಾರಿದರು. (ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸರಕಾರ ಇಂತಹ ನಿರ್ಣಯ ತೆಗೆದುಕೊಳ್ಳುತ್ತದೆ, ಎಂಬುದನ್ನು ಹಸನ್ ಅವರಂತಹ ಜನಪ್ರತಿನಿಧಿಗೆ ತಿಳಿದಿಲ್ಲವೇ? – ಸಂಪಾದಕ).

ಸಂಪಾದಕೀಯ ನಿಲುವು

  • ಮಸೀದಿಯಲ್ಲಿ ಪ್ರತಿದಿನ ೫ ಸಾರಿ ಧ್ವನಿ ವರ್ಧಕದ ಬಳಕೆ ಮಾಡುತ್ತಾರೆ, ಹಾಗು ಕಾವಡಾ ಯಾತ್ರೆ ವರ್ಷಕ್ಕೊಮ್ಮೆ ನಡೆಯುತ್ತದೆ ಎಂಬುದು ಹಸನ್ ಅವರ ಗಮನಕ್ಕೆ ಬರುತ್ತಿಲ್ಲ ಎಂದೇನಿಲ್ಲ, ಅವರು ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂಬುದು ಗಮನದಲ್ಲಿಡಿ !
  • ಕಾವಡಾ ಯಾತ್ರೆ ಕೇವಲ ಉತ್ತರ ಭಾರತದಲ್ಲಿನ ಕೆಲವು ರಾಜ್ಯಗಳಲ್ಲಿ ಮಾತ್ರ ನಡೆಯುತ್ತದೆ, ಆದರೆ ಮಸೀದಿಯಲ್ಲಿನ ಭೋಂಗಾ ದೇಶದ ಮೂಲೆ ಮೂಲೆಯಿಂದಲೂ ಕೇಳುತ್ತದೆ. ಹಾಗಾಗಿ ಇವೆರಡರ ತುಲನೆ ಮಾಡಲು ಸಾಧ್ಯವಿಲ್ಲ, ಎಂಬುದನ್ನು ಹಸನ್ ಅವರಿಗೆ ಯಾರಾದರೂ ಬುದ್ದಿ ಹೇಳಬೇಕು.